ಅಪಾಯ ಕೈಬೀಸಿ ಕರೆಯುವ ಮುಂಡಿತ್ತಡ್ಕ ಟ್ರಾನ್ಸ್‌ಫಾರ್ಮರ್ ಸ್ಥಳಾಂತರಿಸಲು ವಿದ್ಯಾರ್ಥಿನಿಯ ಮನವಿ

ಮುಂಡಿತ್ತಡ್ಕ: ಮುಂಡಿತ್ತಡ್ಕ ಪಳ್ಳಂ ಪೇಟೆಯಲ್ಲಿರುವ ಟ್ರಾನ್ಸ್‌ಫಾರ್ಮರ್ ಅಪಘಾತ ಭೀತಿ ಸೃಷ್ಟಿಸುತ್ತಿದೆ. ಇದನ್ನು ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಶೇಣಿ ಶಾರದಾಂಬಾ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಆಯಿಷತ್ ಶಾಸ ನವಕೇರಳ ಸಭೆ ಪೈವಳಿಕೆಯಲ್ಲಿ ನಡೆದಾಗ ದೂರು ನೀಡಿದ್ದಾಳೆ. ಈ ಟ್ರಾನ್ಸ್‌ಫಾರ್ಮರ್‌ನಿಂದ ಬೆಂಕಿ ಕಿಡಿಗಳು ದಿನವೂ ಕಂಡು ಬರುತ್ತಿದ್ದು, ಇದರ ಸುತ್ತು ಆವರಣ ಬೇಲಿ ಇಲ್ಲ. ಕೈಗೆಟಕುವ ದೂರದಲ್ಲಿ ಫ್ಯೂಸ್‌ಗಳಿದ್ದು, ಶಾಲಾ ಮದ್ರಸ ವಿದ್ಯಾರ್ಥಿಗಳು  ಈ ದಾರಿಯಾಗಿ ಸಂಚರಿಸುತ್ತಿದ್ದಾರೆ. ಸಮೀಪದಲ್ಲೇ ಬಸ್ ತಂಗುದಾಣವೂ ಇದೆ. ಅಂಗನ ವಾಡಿ, ಆಯುರ್ವೇದ ಸಬ್ ಸೆಂಟರ್, …

ಕ್ರಿಸ್ಮಸ್ ಪರೀಕ್ಷೆ  ಡಿ. ೧೨ರಿಂದ

ಕಾಸರಗೋಡು: ರಾಜ್ಯದ ಶಾಲೆಗಳಲ್ಲಿ ಕ್ರಿಸ್ಮಸ್ ಪರೀಕ್ಷೆ ಡಿಸೆಂಬರ್ ೧೨ರಂದು ಆರಂಭಗೊಂಡು ೨೨ರ ತನಕ ಮುಂದುವರಿಯಲಿದೆ. ಇದರಂತೆ ಹೈಯರ್ ಸೆಕೆಂಡರಿ ಪರೀಕ್ಷೆಗಳು ಡಿ. ೧೨ರಿಂದ ೨೨ರ ತನಕವೂ, ಯುಪಿ ಮತ್ತು ಹೈಸ್ಕೂಲ್ ವಿಭಾಗಗಳ ಪರೀಕ್ಷೆ ಡಿ. ೧೩ರಿಂದ ೨೧ರ ತನಕ ನಡೆಯಲಿದೆ. ಇನ್ನು ಎಲ್‌ಪಿ ವಿಭಾಗದ ಕ್ರಿಸ್ಮಸ್ ಪರೀಕ್ಷೆ ಡಿಸೆಂಬರ್ ೧೫ರಿಂದ ೨೧ರ ತನಕ ನಡೆಯಲಿದೆ.

ಮಂಜೇಶ್ವರ ರೈಲ್ವೇ ನಿಲ್ದಾಣ ಬಗ್ಗೆ ಸಂಸದ ತೋರಿಸುವ  ಅವಗಣನೆ ಕೊನೆಗೊಳಿಸಬೇಕು-ಬಿ.ವಿ. ರಾಜನ್

ಮಂಜೇಶ್ವರ: ಮಂಜೇಶ್ವರ ರೈಲು ನಿಲ್ದಾಣ ಬಗ್ಗೆ ಸಂಸದ ರಾಜ್‌ಮೋ ಹನ್ ಉಣ್ಣಿತ್ತಾನ್ ತೋರಿಸುವ  ಅವಗಣನೆ ಕೊನೆಗೊಳಿಸಬೇಕೆಂದು ಸಿಪಿಐ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಮಂಜೇಶ್ವರ ತಾಲೂಕು ಅಭಿವೃದ್ಧಿ ಸಮಿತಿ ಸದಸ್ಯ ಬಿ.ವಿ. ರಾಜನ್ ತಿಳಿಸಿದ್ದಾರೆ.  ಸಂಸದರಾಗಿ ನಾಲ್ಕೂವರೆ ವರ್ಷಗಳಲ್ಲಿ  ಮಂಜೇಶ್ವರ ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿದ ರಾಜ್‌ಮೋಹನ್ ಉಣ್ಣಿತ್ತಾನ್‌ರನ್ನು ರಾಜಕೀಯ ವ್ಯತ್ಯಾಸವಿಲ್ಲದೆ ಜನರು ತಿರಸ್ಕರಿಸುವರೆಂದೂ  ಬಿ.ವಿ. ರಾಜನ್ ತಿಳಿಸಿದ್ದಾರೆ. ಇದುವರೆಗೆ ಒಂದು ಬಾರಿಯೂ ಪಾರ್ಲಿಮೆಂಟ್‌ನಲ್ಲಿ ಮಂಜೇಶ್ವರ ರೈಲ್ವೇ ನಿಲ್ದಾಣವನ್ನು ಅವಗಣಿಸುವುದರ ವಿರುದ್ಧ ರಾಜ್‌ಮೋಹನ್ ಉಣ್ಣಿತ್ತಾನ್ ಧ್ವನಿಯೆತ್ತಲಿಲ್ಲ. ಅಭಿವೃದ್ಧಿಗಾಗಿ …

ಕಾಸರಗೋಡು ನಗರಸಭೆಗೆ ಐಎಸ್‌ಒ ಅಂಗೀಕಾರ

ಕಾಸರಗೋಡು: ಕಾಸರಗೋಡು ನಗರಸಭೆ ಇನ್ನು ಐಎಸ್‌ಒ ಅಂಗೀಕೃತ ನಗರಸಭೆಯಾಗಿದೆ. ೨೦೨೩-೨೪ನೇ ವಾರ್ಷಿಕ ಯೋಜನೆಯಲ್ಲಿ ಸೇರಿಸಿ ಪೂರ್ತಿಗೊಳಿಸಿದ ಐಎಸ್‌ಒ ೯೦೧/-೨೦೧೫ ಸರ್ಟಿಫಿಕೇಶನ್ ಪ್ರೊಜೆಕ್ಟ್‌ನ ಹಾಗೂ ನಗರಸಭೆಯ ಭೂಮಿಗೆ ಸಂಬಂಧಿಸಿದ ಮಾಹಿತಿಗಳನ್ನು ಪೂರ್ಣವಾಗಿ ಡಿಜಿಟಲೈಸ್ ಮಾಡುವ ಜಿಐಎಸ್ ಮಾಪಿಂಗ್ ಯೋಜನೆಯ ಘೋಷಣೆಯನ್ನು ಶಾಸಕ ಎನ್.ಎ. ನೆಲ್ಲಿಕುನ್ನು ನಿರ್ವಹಿಸಿದರು. ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷ ವಿ.ಎಂ. ಮುನೀರ್ ಅಧ್ಯಕ್ಷತೆ ವಹಿಸಿದರು. ಅಬ್ಬಾಸ್ ಬೀಗಂ ಸ್ವಾಗತಿಸಿದರು. ಶಂಸೀರ ಫಿರೋಸ್, ಖಾಲಿದ್ ಪಚ್ಚಕ್ಕಾಡ್, ರೀತ ಆರ್, ಸಿಯಾನ ಹನೀಫ್, ರಜನಿ ಕೆ, …

ಭಾರತೀಯ ಅಭಿಭಾಷಕ ಪರಿಷತ್‌ನಿಂದ  ರಾಷ್ಟ್ರೀಯ ಕಾನೂನು ದಿನಾಚರಣೆ

ಕಾಸರಗೋಡು:  ಭಾರತೀಯ ಅಭಿಭಾಷಕ ಪರಿಷತ್ ಜಿಲ್ಲಾ ಸಮಿತಿ ಆಶ್ರಯದಲ್ಲಿ ರಾಷ್ಟ್ರೀಯ ಕಾನೂನು ದಿನಾಚರಣೆ ಆಯೋಜಿಸಲಾಯಿತು. ವಿದ್ಯಾನಗರ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ನಿವೃತ್ತ ಜಿಲ್ಲಾ ನ್ಯಾಯಾಧೀಶ ಎ. ಶಂಕರನ್ ನಾಯರ್ ಉದ್ಘಾಟಿಸಿದರು. ಕ್ರಿಮಿನಲ್ ಕಾನೂನಿನಲ್ಲಿ ತಿದ್ದುಪಡಿಗಳು ಎಂಬ ವಿ.ಷಯದಲ್ಲಿ ವಿಚಾರಗೋಷ್ಠಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಎ.ಸಿ. ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಬಿ. ರವೀಂದ್ರನ್, ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ಕೆ. ಕರುಣಾಕರನ್ ನಂಬ್ಯಾರ್ ಮಾತನಾಡಿದರು. ಪರಿಷತ್‌ನ …

ಇಚ್ಲಂಗೋಡು ತೋಡಿನಲ್ಲಿ ಕಸಕಡ್ಡಿ ಸಂಗ್ರಹ: ತೆರವುಗೊಳಿಸಲು ಆಗ್ರಹ

ಮಂಜೇಶ್ವರ: ಮಂಗಲ್ಪಾಡಿ ಪಂಚಾಯತ್ ಇಚ್ಲಂಗೋಡು  ತಲೆಕಾನಕಟ್ಟದಿಂದ ಕಡೆಗದ್ದೆವರೆಗಿನ ತೋಡಿನಲ್ಲಿ ಕಸಕಡ್ಡಿ, ಮಣ್ಣು ತುಂಬಿಕೊಂಡಿರುವುದು ಕೃಷಿಗೆ ಪ್ರತಿಕೂಲವಾಗಿ ಬಾಧಿಸಿರುವುದಾಗಿ ದೂರಲಾಗಿದೆ. ಆರು ಮೀಟರ್ ಅಗಲ, ಐದು ಮೀಟರ್ ಆಳ ಹಾಗೂ ಎರಡವರೆ ಕಿಲೋ ಮೀಟರ್ ಉದ್ದವಿರುವ ತೋಡಿನಲ್ಲಿ ಮಳೆಗಾಲದಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಈ ನೀರನ್ನು ಬಳಸಿ ಸಮೀಪದ ಸುಮಾರು ೩೫೦ ಎಕ್ರೆ ಬಯಲು ಪ್ರದೇಶಗಳಲ್ಲಿ ಕೃಷಿ ನಡೆಸಲಾಗುತ್ತಿದೆ. ಆದರೆ ಕೆಲವು ವರ್ಷಗಳಿಂದ ಈ ತೋಡಿನಲ್ಲಿರುವ ಕೆಸರು, ಕಸಕಡ್ಡಿಗಳನ್ನು ತೆರವುಗೊಳಿಸ ದಿರುವುದರಿಂದ ಮಳೆಗಾಲದಲ್ಲಿ ಅದು ಬಯಲು ಪ್ರದೇಶಕ್ಕೆ ನುಗ್ಗಿ …

ಅಯ್ಯಪ್ಪೆ ಕೈ ಪತ್ಯೆ

ಅಪ್ಪೆ… ಕೋಡೆ ಎಂಕ್ ಒಂಜಿ ಕನ ಕಟ್ಟ್ಂಡ್. ಜೆತ್ತಿನಲ್ತು ಮಗೆ ಪನ್ನಗ ಅಪ್ಪೆ ಕೇಂಡಲ್ ‘ಅಂದೇ ಎಂಚಿನ ಕನ’ ಆಲ್ ಮನಸ್ಸ್‌ಡೇ ಎನ್ಯಲ್… ಪುಟ್ಟಿ ಬೊಕ್ಕ ನಡಪ್ಪೆರೆ ಆವಂದಿನ ಬಾಲೆ ಆಯೆ. ಆಯಗ್  ಎಂಚಿನ ಕನ ಕಟ್ಟೆರೆ. ಆಂಡಲಾ ಮಗೆ ಪನ್ನಗ ಅವೆನ್ ಗೇನೊಗು ದೆತ್ತಿಜಿಂಡ ಆಯಗ್ ಬೇಜಾರ್ ಆವುಂದು ‘ಪನ್ಲ ಮಗ ಎಂಚಿನ ಕನಕಟ್ಟಿನೆ’ ಪಂಡಲ್. ಅಪ್ಪೆ ಅವು ಎಂಚಿನ ಪಂಡ… ಯಾನ್ ಮೂಲು ಏಪಲಾ ಜೆತ್ತ್‌ದೇ ಇಪ್ಪುನೆತಾ? ಅಂಚ ಕೋಡೆ ಒಂಜಿ ಜವ್ವನೆ ಬತ್ತ್‌ದ್ …

ಕೊಲ್ಲಂನಲ್ಲಿ ಬಾಲಕಿ ಅಪಹರಿಸಲ್ಪಟ್ಟ ವೇಳೆಯಲ್ಲೇ ಕಾಸರಗೋಡಿನಿಂದಲೂ ನಾಲ್ವರು ಮಕ್ಕಳು ನಾಪತ್ತೆ: . ಪೊಲೀಸರು ನಡೆಸಿದ ಸಕಾಲಿಕ ಕಾರ್ಯಾಚರಣೆಯಿಂದ ತಾಸಿನೊಳಗಾಗಿ ಪತ್ತೆ

ಕಾಸರಗೋಡು: ಕೊಲ್ಲಂ ಜಿಲ್ಲೆಯ ಓಯೂರ್‌ನಲ್ಲಿ ಆರು ವರ್ಷದ ವಿದ್ಯಾರ್ಥಿನಿ ಅಪಹರಿಸಲ್ಪಟ್ಟ ವೇಳೆಯಲ್ಲೇ ಕಾಸರಗೋಡು ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದ ಮೂವರು ವಿದ್ಯಾರ್ಥಿಗಳು ಸೇರಿದಂತೆ ಪ್ರಾಯಪೂರ್ತಿಯಾಗದ ನಾಲ್ವರು ಮಕ್ಕಳು  ದಿಢೀರ್ ನಾಪತ್ತೆ ಯಾಗಿ  ಅದು ಮಕ್ಕಳ ಮನೆಯ ವರನ್ನು ಬೆಚ್ಚಿಬೀಳಿಸುವಂತೆ ಮಾಡಿದ ಘಟನೆ ನಡೆದಿದೆ. ಈ ನಾಲ್ವರು  ಬಾಲಕರ ಪೈಕಿ ಮೂವರು  ವಿದ್ಯಾರ್ಥಿಗಳು ನಿನ್ನೆ ಸಂಜೆ ಶಾಲೆಯಿಂದ ಮನೆಗೆ ಹಿಂತಿರುಗಿ ನಂತರ ಆಟವಾಡಲೆಂದು ಹೇಳಿ ಹೊರಗೆ ಹೋಗಿದ್ದರು. ಆ ಬಳಿಕ ಅವರೂ  ಹಾಗೂ ಅದೇ ಪರಿಸರದ ಇನ್ನೋರ್ವ ಬಾಲಕನೂ …

ತೋಟಗಾರಿಕಾ ನಿಗಮದ ಔಟ್‌ಲೆಟ್ ಸ್ಟೋರ್ ಬೆಂಕಿಗಾಹುತಿ

ಬೋವಿಕ್ಕಾನ: ರಾಜ್ಯ ತೋಟ ಗಾರಿಕಾ ನಿಗಮದ ಬೋವಿಕ್ಕಾನದಲಿ ರುವ ಔಟ್‌ಲೆಟ್ ಸ್ಟೋರ್‌ಗೆ ನಿನ್ನೆ ರಾತ್ರಿ ಬೆಂಕಿ ತಗಲಿ ಅದು ಪೂರ್ಣವಾಗಿ ಭಸ್ಮಗೊಂಡಿದೆ. ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಕೃಷ್ಣ ಕುಮಾರ್ ನೇತೃತ್ವದ ಕಾಸರಗೋಡು ಅಗ್ನಿಶಾಮಕ ದಳ ಘಟನೆ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದಾರೆ. ಈ ಔಟ್‌ಲೆಟ್‌ನೊಳಗೆ ಸಾಧಾರಣವಾಗಿ ತೋಟಗಾರಿಕೆ ನಿಗಮದ ಗೋಡಂಬಿಗಳನ್ನು ದಾಸ್ತಾನು ಇರಿಸಲಾಗುತ್ತಿತ್ತು. ಆದರೆ  ಇತ್ತೀಚೆಗಿ ನಿಂದ ಆ ಸ್ಟೋರನ್ನು ಉಪಯೋಗಿ ಸುತ್ತಿರಲಿಲ್ಲ. ಮಾತ್ರವಲ್ಲ ಅದರೊಳಗೆ ಯಾವುದೇ ಸಾಮಗ್ರಿಗಳನ್ನು ದಾಸ್ತಾನು ಇರಿಸಲಾಗಿಲ್ಲ. ಆದರೆ ನಿನ್ನೆ …

ಕೇಂದ್ರ ಸಚಿವ ಸಂಪುಟ ಸಭೆ ಇಂದು ಸಂಜೆ ಮಹತ್ವದ ಘೋಷಣೆ ಸಾಧ್ಯತೆ

ನವದೆಹಲಿ: ಕೇಂದ್ರ ಸಚಿವ ಸಂಪುಟ ಸಭೆ ಇಂದು ಸಂಜೆ ೬ ಗಂಟೆಗೆ ಪ್ರಧಾನ ಮಂತ್ರಿ ನರೇಂದ್ರಮೋದಿ ಯವರ ಅಧ್ಯಕ್ಷತೆಯಲ್ಲಿ ಅವರ ಕಲ್ಯಾಣ್ ಮಾರ್ಗದ ನಿವಾಸದಲ್ಲಿ ನಡೆಯಲಿದೆ. ಆ ಬಳಿಕ ರಾತ್ರಿ ೮ ಗಂಟೆಗೆ ಕೇಂದ್ರ ಮಂಡಳಿ ಸಭೆಯೂ ನಡೆಯಲಿದೆ. ಈ ಅನುಚ್ಚೇಧವನ್ನು ರಚಿಸುವ ಕ್ಯಾಬಿನೆಟ್ ಸಭೆಯ ಕಾರ್ಯಸೂಚಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. ೨೦೨೪ರ ಲೋಕಸಭಾ ಚುನಾವಣೆಯನ್ನು ಮುಂದಕ್ಕೆ ಕಂಡುಕೊಂಡು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರಕಾರ  ಮಹತ್ವದ ಘೋಷಣೆ ಹೊರಡಿಸುವ ಸಾಧ್ಯತೆ ಇದೆ.  ಮುಂದಿನ ವರ್ಷ ಲೋಕಸಭಾ …