ಹೇಳಿಕೆ ದಾಖಲಿಸಿಕೊಳ್ಳಲು ಮಕ್ಕಳು ಮತ್ತು ಮಹಿಳೆಯರನ್ನು ಪೊಲೀಸ್ ಠಾಣೆಗೆ ಕರೆಸಬಾರದು

ಕಾಸರಗೋಡು: ಪ್ರಕರಣಗಳಿಗೆ ಸಂಬಂಧಿಸಿ ಅಥವಾ ದೂರುಗಳಿಗೆ ಸಂಬಂಧಿಸಿ ಹೇಳಿಕೆ ದಾಖಲಿಸಿಕೊಳ್ಳಲು ಮಕ್ಕಳು ಮತ್ತು ಮಹಿಳೆಯರನ್ನು ಪೊಲೀಸ್ ಠಾಣೆ ಕರೆಸಬಾರದೆಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಹೊರಡಿಸಿರುವ ಹೊಸ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಮಕ್ಕಳು ಮತ್ತು ಮಹಿಳೆಯರ ಹೇಳಿಕೆ ದಾಖಲಿಸಬೇಕಾಗಿದ್ದಲ್ಲಿ ಮಹಿಳಾ ಪೊಲೀಸರು ನೇರವಾಗಿ ಅಂತಹ ಮನೆಗಳಿಗೆ ಹೋಗಿ ಅದನ್ನು ದಾಖಲಿಸಬೇಕು. ಮನೆ ಸದಸ್ಯರ ಸಾನ್ನಿಧ್ಯದಲ್ಲೇ ಹೇಳಿಕೆ ದಾಖಲಿಸಬೇಕು. ಹೀಗೆ ದಾಖಲಿಸಲಾಗುವ ಹೇಳಿಕೆಗಳನ್ನು  ಬಹಿರಂಗಪಡಿಸದೆ ಅದನ್ನು ಗೌಪ್ಯವಾಗಿರಿಸಬೇಕು. ಮಕ್ಕಳು ಮತ್ತು ೬೫ಕ್ಕಿಂತ ಮೇಲಿನ ವಯೋಮಿತಿಯವರು ಮತ್ತು ದೈಹಿಕ ಅಂಗವಿಕಲತೆ ಹೊಂದಿದವರ …

ಎದುರ್ತೋಡು ಆಂಡ್ ನೇರ್ಚೆ ೨೯ರಂದು

ಕಾಸರಗೋಡು: ಮುತ್ತುಪೇಟ್ಟ ಡಾಕ್ಟರ್ ಶೇಕ್ ದಾವೂದುಲ್ ಹಕ್ಕೀಂ ವಲಿಯುಲ್ಲಾಹಿ ಇವರ ಹೆಸರಲ್ಲಿ ಎದುರ್ತೋಡು ಬೀವಿ ಮಂಜಿಲ್‌ನಲ್ಲಿ ೩೭ನೇ ವರ್ಷದ ಆಂಡ್ ನೇರ್ಚೆ (ವಾರ್ಷಿಕ ಹರಕೆ) ಈ ತಿಂಗಳ ೨೯ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ  ಎದುರ್ತೋಡು ಖತೀಬ್ ಅಬ್ದುಲ್ ನಾಸಿರ್ ಯಮಾನಿ, ಇ. ಅಬ್ದುಲ್ಲ ಕುಂಞಿ ಮೊದಲಾದವರು ತಿಳಿಸಿದ್ದಾರೆ. ಕಾರ್ಯಕ್ರಮದಂಗವಾಗಿ ಎನ್‌ಪಿಎಂ ಸೈನುಲ್ ಅಬಿದೀನ್ ತಂಙಳ್ ಕುನ್ನುಂಗೈ,  ಕೆ.ಎಸ್. ಅಲಿ ತಂಙಳ್ ಕುಂಬೋಳ್, ಮಂಗಳೂರು ಕಿಯಾರು ಖಾಝಿ ತ್ವಾಹಾ ಅಹಮ್ಮದ್ ಮೌಲವಿ, ಸಮಸ್ತ …

ನವಕೇರಳ ಸಭೆ: ದೂರುಗಳಲ್ಲಿ ಶೀಘ್ರ ಪರಿಹಾರಕ್ಕೆ ಜಿಲ್ಲಾಧಿಕಾರಿ ಸೂಚನೆ

ಕಾಸರಗೋಡು: ನವಕೇರಳ ಸಭೆಯಂಗವಾಗಿ ಜಿಲ್ಲೆಯಲ್ಲಿ ಲಭಿಸಿದ ೧೪೬೦೦ ದೂರುಗಳನ್ನು ಸ್ಕ್ಯಾನ್ ಮಾಡಿ ವಿವಿಧ ಇಲಾಖೆಗಳಿಗೆ ನೀಡಲಾಗಿದೆ ಎಂದೂ ಇಲಾಖೆ ಅಧಿಕಾರಿಗಳು ಅದರಲ್ಲಿ ಶೀಘ್ರವೇ ತೀರ್ಪು ಕಲ್ಪಿಸಬೇಕೆಂದು ಜಿಲ್ಲಾಧಿಕಾರಿ ಕೆ. ಇಂಬಶೇಖರ್ ತಿಳಿಸಿದ್ದಾರೆ. ಅರ್ಜಿದಾರನಿಗೆ ಪಾಸಿಟಿವ್ ಉತ್ತರಗಳನ್ನು ನೀಡಬೇಕೆಂದೂ ಸೂಕ್ತವಾದ ವಿವರಣೆಗಳೊಂದಿಗೆ ಉತ್ತರ ನೀಡಬೇಕೆಂದೂ ಅವರು ಸೂಚಿಸಿದ್ದಾರೆ. ಪ್ರತಿ ಇಲಾಖೆಗಳು ನೀಡುವ ಉತ್ತರಗಳು ಸಹಿತದ ಚಟುವಟಿಕೆ ಕ್ರಮಗಳನ್ನು ಮೋನಿಟರಿಂಗ್ ಮಾಡಲಾಗು ತ್ತಿದೆ ಎಂದೂ ಲೋಪದೋಷ ಕಂಡು ಬಂದರೆ ಕೂಡಲೇ ಮಧ್ಯೆ ಪ್ರವೇಶಿಸು ವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಬಂಗ್ರಮಂಜೇಶ್ವರ ಕ್ಷೇತ್ರದಲ್ಲಿ ಧನುರ್ಮಾಸ  ಪೂಜೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಜೇಶ್ವರ: ಬಂಗ್ರಮAಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ದೇವಸ್ಥಾನ ದಲ್ಲಿ ಡಿ.೧೭ರಿಂದ ನಡೆಯಲಿರುವ ಧನುರ್ಮಾಸ ಪೂಜೋತ್ಸವದ ಆಮಂ ತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ನಿನ್ನೆ ಶ್ರೀ ಕ್ಷೇತ್ರದಲ್ಲಿ ನಡೆಯಿತು. ಮೊಕ್ತೇಸರÀ ಉಳುವಾರು ವೆಂಕಟ್ರಮಣ ಆಚಾರ್ಯ ಕೋಟೆಕಾರು, ದೇವದಾಸ ಆಚಾರ್ಯ. ಕ್ಷೇತ್ರದ ಅಧ್ಯಕ್ಷ ಯದುನಂದನ ಆಚಾರ್ಯ ಕಡಂಬಾರು, ಕಾರ್ಯದರ್ಶಿ. ಭಾಸ್ಕರ ಆಚಾರ್ಯ ಪ್ರತಾಪನಗರ. ನಾಗರಾಜ ಆಚಾರ್ಯ ಪಾರಕಟ್ಟೆ. ಕೋಶಾಧಿಕಾರಿ. ಸತ್ಯಮೂರ್ತಿ ಆಚಾರ್ಯ ಉದ್ಯಾವರ, ಪ್ರಾಂತ್ಯ ಮೊಕ್ತೇಸರ ಗಣೇಶ ಆಚಾರ್ಯ, ಜಯಂತ ಆಚಾರ್ಯ, ವಿಷ್ಣು ಆಚಾರ್ಯ, ಓಜ ಸಾಹಿತ್ಯ ಕೂಟದ ಅಧ್ಯಕ್ಷ ಮೋಹನ …

ಕಯ್ಯಾರ್ ಇಗರ್ಜಿಯ ವಾರ್ಷಿಕ ಹಬ್ಬ, ನೂತನ ಇಗರ್ಜಿ ಯೋಜನೆಗೆ ಚಾಲನೆ

ಪೈವಳಿಕೆ: ಕಯ್ಯಾರ್ ಕ್ರಿಸ್ತರಾಜ ದೇವಾಲಯದ ವಾರ್ಷಿಕ ಹಬ್ಬ ಹಾಗೂ ನೂತನ ಇಗರ್ಜಿಯ ಯೋ ಜನೆಗೆ ನಿನ್ನೆ ಚಾಲನೆ ನೀಡಲಾಯಿತು. ವಾರ್ಷಿಕ ಹಬ್ಬದಂಗವಾಗಿ ಇಗರ್ಜಿ ಮೈದಾನದಲ್ಲಿ ದಿವ್ಯ ಬಲಿಪೂಜೆ ನಡೆಯಿತು. ಮಂಗಳೂರು ಧರ್ಮ ಪ್ರಾಂತ್ಯದ ಜನರಲ್ ವಂ| ಮೊನ್ಸಿಂಜೊರ್ ಮ್ಯಾಕ್ಸಿಮ್ ನೊರೊನ್ಹಾ ದಿವ್ಯ ಬಲಿಪೂಜೆಯ ನೇತೃತ್ವ ನೀಡಿದರು. ಕಯ್ಯಾರ್ ಇಗರ್ಜಿಯ ಧರ್ಮಗುರು ವಂ| ಫಾ| ವಿಶಾಲ್ ಮೊನಿಸ್ ಹಾಗೂ ಪೆರ್ಮುದೆ ಇಗರ್ಜಿಯ ವಂ| ಫಾ| ಕ್ಲೋಡ್ ಕೋರ್ಡ ಉಪಸ್ಥಿತರಿದ್ದರು . ದಿವ್ಯ ಬಲಿಪೂಜೆ ಬಳಿಕ ಪರಮ ಪ್ರಸಾದದ ಮೆರವಣಿಗೆ …

ಕಾರಡ್ಕದಲ್ಲಿ ಉಚಿತ ಆಯುರ್ವೇದ ಶಿಬಿರ

ಮುಳ್ಳೇರಿಯ: ಕಾರಡ್ಕ ಫೌಂಡೇಶನ್ ಟ್ರಸ್ಟ್‌ನ ಆಶ್ರಯದಲ್ಲಿ ಕಾರಡ್ಕ ಶ್ರೀ ದುರ್ಗಾಕಾಂಪ್ಲೆಕ್ಸ್‌ನಲ್ಲಿ ನಿನ್ನೆ ಉಚಿತ ಆಯುರ್ವೇದ  ವೈದ್ಯಕೀಯ ಶಿಬಿರ ನಡೆಯಿತು. ಪೈವಳಿಕೆ ಅರಮನೆ ರಂಗತ್ರೈ ಅರಸರು ಶಿಬಿರವನ್ನು ಉದ್ಘಾಟಿ ಸಿದರು. ಪೈವಳಿಕೆ ಅರಮನೆ ರಾಧ ಬಲ್ಲಾಳ್, ಕಾರಡ್ಕ ಫೌಂಡೇಶನ್‌ನ ಅಧ್ಯಕ್ಷ ರಾಘವ ಬಲ್ಲಾಳ್ ಕಾರಡ್ಕ, ಉಣ್ಣಿಕೃಷ್ಣನ್ ಮಾಸ್ತರ್ ಸಹಿತ ಹಲವರು ಭಾಗವಹಿಸಿದರು. ಶಿಬಿರ ದಲ್ಲಿ ಪೆರ್ಲದ ಡಾ| ಕೃಷ್ಣಮೋಹನ್, ಬಾಯಾರಿನ ಡಾ| ಸತ್ಯನಾರಾಯಣ ರೋಗಿಗಳನ್ನು ತಪಾಸಿಸಿ ಚಿಕಿತ್ಸೆ  ನಿರ್ದೇಶಿಸಿದರು. ಗೋಪಾಲಕೃಷ್ಣ ಡಿಸ್ಟ್ರಿಬ್ಯೂಟರ್ಸ್ ಕುಂಬಳೆ, ಡಾಬರ್ ಕಂಪೆನಿ ಉಚಿತವಾಗಿ ಔಷಧಿ …

ಮಧೂರು ಕ್ಷೇತ್ರ ಮಹಾದ್ವಾರ ನಿರ್ಮಾಣಕ್ಕೆ ಶಿಲಾನ್ಯಾಸ

ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಮುಂಬಯಿಯ ಪ್ರಮುಖ ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಇವರು ನೂತನವಾಗಿ ನಿರ್ಮಿಸುವ ಮಹಾದ್ವಾರದ ಶಿಲಾನ್ಯಾಸ ಕಾರ್ಯಕ್ರಮ ಇಂದು ಬೆಳಿಗ್ಗೆ ನಡೆಯಿತು.  ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮ ಹಂಸ ಸ್ವಾಮೀಜಿ, ಕೊಂಡೆವೂರು ಮಠದ ಶ್ರೀಯೋಗಾ ನಂದ ಸರಸ್ವತೀ ಸ್ವಾಮೀಜಿ ಮೊದಲಾದವರ ಉಪಸ್ಥಿತಿ ಯಲ್ಲಿ ಶಿಲಾನ್ಯಾಸ ನಡೆಸಲಾಯಿತು.  ಪ್ರಮುಖರಾದ ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿಯ …

ಯುವಕ ಮನೆಯೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ಯುವಕ ನೋರ್ವ ಬಾಡಿಗೆ ಮನೆಯೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಕಾನಕ್ಕೋಡಿನ ಬಾಡಿಗೆ ಮನೆಯಲ್ಲಿ ವಾಸಿಸುವ ರಂಜಿತ್ (೩೭) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಕಾಸರಗೋಡು  ಆಲಂಪಾಡಿ ನಿವಾಸಿಯಾದ ಇವರು ಅಲ್ಪ ಕಾಲದಿಂದ ಕಾನಕ್ಕೋಡಿನ ಬಾಡಿಗೆ ಮನೆಯಲ್ಲಿ  ಕುಟುಂಬ ಸಹಿತ ವಾಸಿಸುತ್ತಿದ್ದರು. ರಂಜಿತ್ ಮರ ಕಡಿಯುವ ಕಾರ್ಮಿಕನಾಗಿದ್ದಾರೆ. ಕಳೆದ ಎರಡು ದಿನಗಳಿಂದ ರಂಜಿತ್ ಮಾತ್ರವೇ ಈ ಮನೆಯಲ್ಲಿದ್ದರೆನ್ನ ಲಾಗಿದೆ.  ಇಂದು ಬೆಳಿಗ್ಗೆ ಮನೆಯ ಮಾಲಕ ಶಂಸುದ್ದೀನ್ ಎಂಬವರು ತಲುಪಿ ರಂಜಿತ್‌ರನ್ನು ಕರೆದರೂ ಪ್ರತಿಕ್ರಿಯೆ ಉಂಟಾಗಿಲ್ಲ. ಇದರಿಂದ ಬಾಗಿಲು …

೨೦೧೧ರ ಬಳಿಕ ಜನಿಸಿದವರನ್ನು ಎಂಡೋಸಲ್ಫಾನ್ ಸಂತ್ರಸ್ತ ಯಾದಿಯಲ್ಲಿ ಒಳಪಡಿಸಲಾಗುವುದಿಲ್ಲ-ಆರೋಗ್ಯ ಇಲಾಖೆ

ಕಾಸರಗೋಡು: ಎಂಡೋಸ ಲ್ಫಾನ್ ಸಂತ್ರಸ್ತರ ಯಾದಿಯಲ್ಲಿ ೨೦೧೧ರ ಬಳಿಕ ಜನಿಸಿದವರನ್ನು  ಒಳಪಡಿಸಲಾಗುವುದಿಲ್ಲವೆಂದು ಸ್ಪಷ್ಟಪಡಿಸಿ ರಾಜ್ಯ ಆರೋಗ್ಯ ಇಲಾಖೆ ಹೊಸ  ಆದೇಶ ಹೊರಡಿಸಿದೆ. ಎಂಡೋಸಲ್ಫಾನ್  ಸೃಷ್ಟಿಸುವ ದುಷ್ಪರಿಣಾಮ ಮುಂದಿನ ಆರು ವರ್ಷಗಳ ತನಕ ಮಾತ್ರವೇ ಉಳಿದುಕೊಳ್ಳಲಿದೆ. ನಂತರ ಅದೂ ಇಲ್ಲದಾಗಲಿದೆಯೆಂದು  ತಜ್ಞರ ಸಮಿತಿ ಸರಕಾರಕ್ಕೆ ವರದಿ ಸಲ್ಲಿಸಿದ್ದು, ಅದರ ಆಧಾರದಲ್ಲಿ ೨೦೨೧ರ ಬಳಿಕ  ಜನಿಸಿದವರನ್ನು ಎಂಡೋಸಲ್ಫಾನ್ ಸಂತ್ರಸ್ತರ ಯಾದಿಯಲ್ಲಿ ಒಳಪಡಿಸದೇ ಇರುವ ತೀರ್ಮಾನ ಕೈಗೊಳ್ಳಲಾಗಿದೆ ಯೆಂದು  ಆರೋಗ್ಯ ಇಲಾಖೆ ಹೊರಡಿಸಿದ ಆದೇಶದಲ್ಲಿ ಕಾರಣ ನೀಡಲಾಗಿದೆ. ಕೇರಳದಲ್ಲಿ ಎಂಡೋಸಲ್ಫಾನ್ ಬಳಕೆ …

ಸೇತುವೆಯಲ್ಲಿ ಕಾರು ಉಪೇಕ್ಷಿಸಿ ನಾಪತ್ತೆಯಾಗಿದ್ದ ವ್ಯಾಪಾರಿಯ ಮೃತದೇಹ ಪತ್ತೆ

ಕಾಸರಗೋಡು: ಚಂದ್ರಗಿರಿ ಸೇತುವೆ ಮೇಲೆ ಕಾರು ಉಪೇ ಕ್ಷಿಸಿದ ಬಳಿಕ ನಾಪತ್ತೆಯಾಗಿದ್ದ ವ್ಯಾಪಾರಿಯ ಮೃತದೇಹ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಶಿರಿಬಾಗಿಲು ರಹ್ಮತ್‌ನಗರದ ನಿವಾಸಿಯೂ, ನಗರದಲ್ಲಿ ಹೋಟೆಲ್ ಮಾಲಕನಾದ ಹಸೈನಾರ್ (೪೬) ಎಂಬವರ ಮೃತದೇಹ ಇಂದು ಬೆಳಿಗ್ಗೆ ತಳಂಗರೆ ಹೊಸ ಹಾರ್ಬರ್ ಬಳಿ ಪತ್ತೆಯಾಗಿದೆ. ಮೃತದೇಹ ವನ್ನು ಮರಣೋತ್ತರ ಪರೀಕ್ಷೆ ಗಾಗಿ ಜನರಲ್ ಆಸ್ಪತ್ರೆಗೆ ತಲುಪಿ ಸಲಾಗಿದೆ. ಹಸೈನಾರ್ ಮೊನ್ನೆ ರಾತ್ರಿಯಿಂದ ನಾಪತ್ತೆಯಾಗಿ ದ್ದಾರೆಂದು ಹೇಳಲಾಗುತ್ತಿದೆ. ನಿನ್ನೆ ಮುಂಜಾನೆ ಅವರ  ಕಾರು ಹಾಗೂ ಚಪ್ಪಲಿ ಚಂದ್ರಗಿರಿ ಸೇತುವೆ ಬಳಿ …