ಕಾಸರಗೋಡು ನಗರಸಭಾ ಕಚೇರಿಗೆ ವಿಜಿಲೆನ್ಸ್ ದಾಳಿ: 37.21 ಲಕ್ಷ ರೂ.ಗಳ ಅವ್ಯವಹಾರ ಪತ್ತೆ

ಕಾಸರಗೋಡು: ಕಾಸರಗೋಡು ನಗರಸಭಾ ಕಚೇರಿಗೆ ವಿಜಿಲೆನ್ಸ್ ನಿನ್ನೆ  ನಡೆಸಿದ ಮಿಂಚಿನ ದಾಳಿ ಮತ್ತು ಪರಿಶೀಲನೆಯಲ್ಲಿ  ಆರ್ಥಿಕ ಅವ್ಯವಹಾರ ಪತ್ತೆಹಚ್ಚಿದ್ದಾರೆ. ವಿವಿಧ ಅಗತ್ಯಗಳಿಗಾಗಿ 2020-25ರ ಅವಧಿಯಲ್ಲಿ ಸಿಬ್ಬಂದಿಗಳಿಗೆ ಮುಂಗಡವಾಗಿ ಮಂಜೂರು ಮಾಡಲಾದ 37,21,088 ರೂಪಾಯಿಗಳ ಸರಿಯಾದ ಬಿಲ್‌ಗಳನ್ನು ಹಾಜರುಪಡಿಸದೆ ಹಾಗೂ ಆ ಮೊತ್ತಕ್ಕೆ ನಿಗದಿತ ಬಡ್ಡಿ ಪಾವತಿಸದೆ ಅದರಲ್ಲಿ ಅವ್ಯವಹಾರ ನಡೆಸಲಾಗಿದೆಯೆಂದು ಪರಿಶೀಲನೆಯಲ್ಲಿ ಪತ್ತೆಹಚ್ಚಲಾಗಿದೆ ಎಂದು ವಿಜಿಲೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ನಗರಸಭಾ ಕಚೇರಿಯ ತುರ್ತು ಅಗತ್ಯಗಳನ್ನು ನೆರವೇರಿಸಲು ಆ ಕಚೇರಿಯಿಂದ ಸಾಧಾರಣ ವಾಗಿ ಮುಂಗಡ ಹಣ ನೀಡಲಾಗುತ್ತದೆ. ಹೀಗೆ …

ನಿವೃತ್ತರಾದ 13ನೇ ದಿನ ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕ ದಿನೇಶ್ ವಿ. ನಿಧನ

ಮಂಜೇಶ್ವರ: ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕರಾಗಿ ಕೆಲವೇ ದಿನಗÀಳ ಹಿಂದೆ ನಿವೃತ್ತಿ ಹೊಂದಿದ ಹೊಸಂಗಡಿ ಬಳಿಯ ವಾಮಂಜೂರು, ಅಂಗಡಿಪದವು ನಿವಾಸಿ ದಿನೇಶ್ ವಿ. (56) ನಿಧನ ಹೊಂದಿದರು. ಜ್ವರ ತಗಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ನಿನ್ನೆ ಅಪರಾಹ್ನ 3 ಗಂಟೆಗೆ ನಿಧನ ಸಂಭವಿಸಿದೆ. ಮೃತರು ದಿ| ಕುಂಞÂ ರಾಮನ್ – ಅಮ್ಮಣಿ ದಂಪತಿ ಪುತ್ರನಾ ಗಿದ್ದು, ಪತ್ನಿ ಶ್ರೀಲೇಖ.ಕೆ, ಮಕ್ಕಳಾದ ಶ್ರೀಷ್ಮ, ದೇವಪ್ರಿಯ, ಅಭಿರಾಮ್, ಸಹೋದರಿಯರಾದ ಅಹಲ್ಯ, ಶೀಲಾವತಿ …

ಬದಿಯಡ್ಕದ ಡಾ| ಸಿ.ಎಚ್. ಗೋಪಾಲಕೃಷ್ಣ ಭಟ್ ನಿಧನ

ಬದಿಯಡ್ಕ: ಇಲ್ಲಿನ ಬಸ್ ನಿಲ್ದಾಣದ ಮುಂಭಾಗದಲ್ಲಿ ಕ್ಲಿನಿಕ್ ನಡೆಸುತ್ತಿದ್ದ ಡಾ| ಸಿ.ಎಚ್. ಗೋಪಾಲಕೃಷ್ಣ ಭಟ್ (85) ನಿನ್ನೆ ರಾತ್ರಿ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಚಾಲತ್ತಡ್ಕ ಡಾಕ್ಟರ್ ಎಂದು ಕರೆಸಿಕೊಂಡಿದ್ದ ಇವರು ಜನಾನುರಾಗಿಯಾಗಿದ್ದರು. ಆರ್‌ಎಸ್‌ಎಸ್ ಕಾರ್ಯಕರ್ತ, ಧಾರ್ಮಿಕ ಮುಂದಾಳುವಾಗಿದ್ದ ಮೃತರು ಪತ್ನಿ ಶಾರದಮ್ಮ, ಮಕ್ಕಳಾಗ ಶ್ಯಾಮ್ ಪ್ರಸಾದ್, ಡಾ| ಪ್ರದೀಪ್ ಕುಮಾರ್, ಸೊಸೆಯಂದಿರಾದ ಸೌಮ್ಯ, ಡಾ| ಸಂಧ್ಯಾ ಸಾವಿತ್ರಿ ಹಾಗೂ ಅಪಾರ ಬಂಧು-ಮಿತ್ರರನ್ನು  ಅಗಲಿದ್ದಾರೆ.

ಅಸೌಖ್ಯ: ಚಿಕಿತ್ಸೆಯಲ್ಲಿದ್ದ ಯುವತಿ ನಿಧನ

ಮುಳ್ಳೇರಿಯ: ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಕಾರಡ್ಕ ಕೂಂಬಾಳೆ ಬಳಿಯ ಪಡಿಂಞ್ಞಾರಡ್ಕ ನಿವಾಸಿ ಯುವತಿ ಬಿ.ಸಾವಿತ್ರಿ (48) ನಿಧನಹೊಂದಿದರು. ಈ ಮೊದಲು ಕಾರಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತಾತ್ಕಾಲಿಕ ಕಂಪ್ಯೂಟರ್ ಅಧ್ಯಾಪಿಕೆಯಾಗಿದ್ದು, ಕರ್ಮಂತೋಡಿಯಲ್ಲಿ ಅಕ್ಷಯ ಕೇಂದ್ರವನ್ನು ನಡೆಸುತ್ತಿದ್ದರು.  ಇವರು ಕಳೆದ ಕೆಲವು ಸಮಯಗಳಿಂದ ಚಿಕಿತ್ಸೆಯಲ್ಲಿದ್ದರು. ರೋಗ ಉಲ್ಭಣಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ನಿನ್ನೆ ಸಂಜೆ ನಿಧನ ಸಂಭವಿಸಿದೆ. ಓಡಂಗಲ್ಲು ದಿ| ರಾಮ ಪಾಟಾಳಿ-ತೇಯಮ್ಮ ದಂಪತಿ ಪುತ್ರಿಯಾದ ಇವರು ಪತಿ ದಾಮೋದರನ್ ವಿ (ಬಿಎಸ್‌ಎಫ್ ಯೋಧ), …

ಯುವತಿ ಮನೆಯೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಯುವತಿ ಯೋರ್ವೆ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಪಿಲಿಕ್ಕೋಡ್ ಮಾಂಡಕವತ್ತ್ ಕೊವ್ವಲ್‌ನಲ್ಲಿ ಬಾಡಿಗೆ ಮನೆಯಲ್ಲಿ  ವಾಸಿಸುತ್ತಿದ್ದ ಕಯ್ಯಾರು ಚೆರಿಯಾಕ್ಕರದ ಸ್ವರಲಯ (30) ಮೃತಪಟ್ಟ ಯುವತಿ. ದಿ| ಕುಂಞಿಕೃಷ್ಣನ್ ಎಂಬವರ ಪುತ್ರಿಯಾದ ಈಕೆ ತಾಯಿ ಕೆ.ವಿ. ಪದ್ಮಿನಿ, ಪತಿ ರೂಪೇಶ್, ಸಹೋದರ ಶ್ರೀರಾಗ್, ಸಹೋದರಿ ಶ್ರುತಿಲಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ಮಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

9ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಇಬ್ಬರ ಸೆರೆ, ನ್ಯಾಯಾಂಗ ಬಂಧನ

ಕಾಸರಗೋಡು: 9ನೇ ತರಗತಿಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಇಬ್ಬರನ್ನು ಚಂದೇರ ಪೊಲೀಸರು ಬಂಧಿಸಿದ್ದಾರೆ. ತೃಕ್ಕರಿಪುರ ನಿವಾಸಿ ಅಸೀಸ್ (70) ಮತ್ತು ವಲಿಯ ಪರಂಬ ನಿವಾಸಿ ಸಲೀಂ (48) ಬಂಧಿತರಾದ ಆರೋಪಿಗಳು. ಚಂದೇರ ಪೊಲೀಸ್ ಠಾಣೆಯ ವ್ಯಾಪ್ತಿಗೊಳಪಟ್ಟ ಬಾಲಕಿಯೋ ರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಈ ಇಬ್ಬರ ವಿರುದ್ಧ ಪೊಲೀಸರು ಪೋಕ್ಸೋ ಕಾನೂನು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತರನ್ನು ಬಳಿಕ ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (1)ರ ಆದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

ಮದ್ಯ, ಮಾದಕವಸ್ತು ಸಾಗಾಟ ತೀವ್ರಗೊಂಡಿರುವಾಗಲೇ ಗಡಿ ಪ್ರದೇಶದ ಅಬಕಾರಿ ಕಚೇರಿಯಲ್ಲಿ ಇನ್‌ಸ್ಪೆಕ್ಟರ್ ಇಲ್ಲ: ಕಚೇರಿ ಪರಿಸರದಲ್ಲಿ ತುಂಬಿ ತುಳುಕುತ್ತಿರುವ ವಾಹನಗಳು

ಕುಂಬಳೆ: ಮದ್ಯ, ಮಾದಕವಸ್ತುಗಳ ಸಾಗಾಟ ತೀವ್ರಗೊಂಡಿರುವಾಗ ಅದನ್ನು ತಡೆಯಲು ಹಾಗೂ ವಶಪಡಿಸಲು ಏರ್ಪಡಿಸಲಾದ ಅಬಕಾರಿ ವ್ಯವಸ್ಥೆಗೆ  ಗಡಿ ಪ್ರದೇಶದಲ್ಲಿ ಸೂಕ್ತ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಗೆ ಕಾರಣ ವಾಗಿದೆ. ನೆರೆ ರಾಜ್ಯಗಳ ಮೂಲಕ ಜಿಲ್ಲೆಗೆ  ಮದ್ಯ ಸಹಿತ ಮಾದಕವ ಸ್ತುಗಳು ಯಾವುದೇ  ತಡೆಯಿಲ್ಲದೆ  ವ್ಯಾಪಕ ಸಾಗಾಟವಾಗುತ್ತಿದೆ.   ಸಾಮಾನ್ಯವಾಗಿ ಮಳೆಗಾಲದಲ್ಲಿ ಮಾದಕವಸ್ತು ವ್ಯಾಪಾರ ತೀವ್ರಗೊಳ್ಳುತ್ತದೆ. ಈ ಸಮಯದಲ್ಲೇ ಅಬಕಾರಿ ಕುಂಬಳೆ ರೇಂಜ್ ಇನ್‌ಸ್ಪೆ ಕ್ಟರ್‌ರನ್ನು ವರ್ಗಾಯಿಸಲಾಗಿದೆ. ಈ ಹಿಂದೆ ಆರು ತಿಂಗಳ ಕಾಲ  ಇಲ್ಲಿ ಕರ್ತವ್ಯದಲ್ಲಿದ್ದ ಇನ್‌ಸ್ಪೆಕ್ಟರ್ ಮಾದಕವಸ್ತು ಸಾಗಾಟವಾಗುವ …

ಕಾರಿನಲ್ಲಿ ಸಾಗಿಸುತ್ತಿದ್ದ 10ಸಾವಿರ ಪ್ಯಾಕೆಟ್ ತಂಬಾಕು ಉತ್ಪನ್ನ ವಶ: ಓರ್ವ ಸೆರೆ

ಮಂಜೇಶ್ವರ: ಕರ್ನಾಟಕ ಭಾಗದಿಂದ ಕಾರಿನಲ್ಲಿ ಸಾಗಿಸುತ್ತಿದ್ದ ಹತ್ತು ಸಾವಿರದಷ್ಟು ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನಗಳ ಸಹಿತ ಓರ್ವನನ್ನು ಮಂಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ. ಕಣ್ಣೂರು ಕನಿಯೇರಿ ಎಂಬಲ್ಲಿನ ಅಜ್ಮಲ್ ಇರ್ಫಾನ್ (23) ಎಂಬಾತ ಬಂಧಿತ ಆರೋಪಿ. ಈತ ಸಂಚರಿಸುತ್ತಿದ್ದ ಕಾರನ್ನು ಪೊಲೀಸರು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ  ಅದರಲ್ಲಿ ತಂಬಾಕು ಉತ್ಪನ್ನ ಪತ್ತೆಯಾಗಿದೆ. ಮಂಜೇಶ್ವರ ಠಾಣೆ ಸಬ್ ಇನ್ ಸ್ಪೆಕ್ಟರ್ ರತೀಶ್‌ಗೋಪಿ, ಎಎಸ್‌ಐ ಸದನ್, ಸಿಪಿಒಗಳಾದ ರಜೀಶ್ ಕಾಟಾಂಬಳ್ಳಿ, ನಿತಿನ್ ಕುಮಾರ್, ಅನೀಶ ಎಂಬಿವರು ಒಳಗೊಂಡ ತಂಡ ಕಾರ್ಯಾಚರಣೆ …

ಕೃಷಿಕ ನಿಧನ

ಮುಳ್ಳೇರಿಯ: ಕೃಷಿಕ, ಕಾರಡ್ಕ ಅಡ್ಕಂ ನಿವಾಸಿ ಕೆ. ಕೃಷ್ಣನ್ ನಾಯರ್ (90) ನಿಧನ  ಹೊಂದಿದರು. ಮೃತರು ಪತ್ನಿ ಪಿ. ಶಾಂತಾ, ಮಕ್ಕಳಾದ  ರಾಧಾಮಣಿ, ಗೀತಾ, ಅಳಿಯಂದಿರಾದ ಕುಂಞಿರಾಮನ್ ಕರಿಚ್ಚೇರಿ, ನಾರಾಯಣನ್, ಸಹೋದರರು  ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಸೋರುತ್ತಿರುವ ಮನೆಯಲ್ಲಿ ಬಡ ಕುಟುಂಬದ ವಾಸ: 13 ವರ್ಷಗಳಿಂದ ಮನೆಗಾಗಿ ಪಂ.ಗೆ ಅರ್ಜಿ ಸಲ್ಲಿಸುತ್ತಿದ್ದರೂ ಲಭಿಸದ ಸೌಲಭ್ಯ

ಪುತ್ತಿಗೆ: ಬಡ ಕುಟುಂಬವೊಂದು ಹೊಸ ಮನೆಗಾಗಿ ಹಲವು ವರ್ಷಗಳಿಂದ ಪಂಚಾಯತ್‌ಗೆ ಅರ್ಜಿ ಸಲ್ಲಿಸುತ್ತಾ ಬಂದಿದ್ದು, ಆದರೆ ಇದುವರೆಗೆ ಅವರ ಅರ್ಜಿ ಮೇಲೆ ಯಾವುದೇ ಕ್ರಮ ಉಂಟಾಗಿಲ್ಲ. ಇದರ ಪರಿಣಾಮ ಕುಟುಂಬ ಇದೀಗಲೂ ಟರ್ಪಾಲು ಹಾಸಿದ ಮನೆಯಲ್ಲಿ ವಾಸಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಪುತ್ತಿಗೆ ಪಂಚಾಯತ್ ಮೂರನೇ ವಾರ್ಡ್ ವ್ಯಾಪ್ತಿಯ ಕೆಳಗಿನ ಮಣಿಯಂಪಾರೆಯಲ್ಲಿ ವಾಸಿಸುವ ಮೂಸಾ- ರುಖಿಯಾ ಕುಟುಂಬದ ದಯನೀಯ ಸ್ಥಿತಿ ಇದಾಗಿದೆ. ಓರ್ವ ಪುತ್ರ ಸಹಿತ ಈ ಕುಟುಂಬ ಸೋರುತ್ತಿರುವ ಈ ಮನೆಯಲ್ಲಿ ವಾಸಿಸುತ್ತಿದೆ. ಮನೆ ಛಾವಣಿಗೆ ಟರ್ಪಾಲು …