ನಾಲ್ಕು ವಿಭಾಗಗಳ  ಕಲ್ಯಾಣ ಪಿಂಚಣಿ ಹೆಚ್ಚಳ

ಕಾಸರಗೋಡು: ರಾಜ್ಯದಲ್ಲಿ ನಾಲ್ಕು ವಿಭಾಗಗಳ ಕಲ್ಯಾಣ ಪಿಂಚಣಿಗಳನ್ನು ೧೬೦೦ರೂ.ನಂತೆ ಹೆಚ್ಚಿಸಲಾಗಿದೆ ಎಂದು ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲನ್ ತಿಳಿಸಿದ್ದಾರೆ. ಇದರಂತೆ ವಿಶ್ವಕರ್ಮ, ಸರ್ಕಸ್, ಅನಾರೋಗ್ಯ ಸ್ಥಿತಿಯಲ್ಲಿರುವ ಕ್ರೀಡೆ ಮತ್ತು ಕಲಾಗಾರರಿಗೆ ನೀಡಲಾಗುವ ಕಲ್ಯಾಣ ಪಿಂಚಣಿ ೧೬೦೦ ರೂ.ನಂತೆ ಹೆಚ್ಚಿಸಲಾಗಿದೆ. ಈ ನಾಲ್ಕು ವಿಭಾಗಗಳಲ್ಲಿ ಅನಾರೋಗ್ಯ ಸ್ಥಿತಿಯಲ್ಲಿರುವ ಕಲಾಗಾರರಿಗೆ ಈಗ ೧೦೦೦ ರೂ.ನಂತೆ ಕಲ್ಯಾಣ ಪಿಂಚಣಿ ಲಭಿಸುತ್ತದೆ. ಅನಾರೋಗ್ಯಪೀಡಿತ ಕ್ರೀಡಾ ಪಟುಗಳಿಗೆ ತಲಾ ೧೩೦೦ ರೂ.ನಂತೆಯೂ, ಸರ್ಕಸ್ ಕಲಾವಿಧರಿಗೆ ತಲಾ ೧೨೦೦ ರೂ. ಹಾಗೂ ವಿಶ್ವಕರ್ಮ ಪಿಂಚಣಿಯಾಗಿ ತಲಾ ೧೪೦೦ …

ಸಾರ್ವಜನಿಕ ಪ್ರದೇಶಗಳಲ್ಲಿ ಬೋರ್ಡ್  ಸ್ಥಾಪಿಸಲು ಮುಂಗಡ ಅನುಮತಿ ಕಡ್ಡಾಯ

ಕಾಸರಗೋಡು:  ಸಾರ್ವಜನಿಕ ಪ್ರದೇಶಗಳ ಬೋರ್ಡ್,  ಬ್ಯಾನರ್ ಇತ್ಯಾದಿಗಳನ್ನು ಸ್ಥಾಪಿಸಲು ಅದಕ್ಕೆ ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗಳಿಂದ  ಮುಂಗಡವಾಗಿ ಅನುಮ ತಿ ಪಡೆಯಬೇಕೆಂಬ ಕಡ್ಡಾಯ ಕಾನೂನು ಇದೆ. ಅದನ್ನು ಇನ್ನು ಎಲ್ಲ ರೂ ಕಡ್ಡಾಯವಾಗಿ ಪಾಲಿಸಬೇಕೆಂದು ರಾಜ್ಯ ಸ್ಥಳೀಯಾಡಳಿತ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯವರು  ಹೊಸದಾಗಿ ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಕ್ರಮ ಅನುಸರಿಸದೇ ಇದ್ದಲ್ಲಿ  ಅಂತಹವರ ವಿರುದ್ಧ ಕಾನೂನುಕ್ರಮ ಮಾತ್ರವಲ್ಲ ದಂಡವನ್ನು ವಸೂಲಿ ಮಾಡಲಾಗುವುದು. ಸಾರ್ವಜನಿಕ ಪ್ರದೇಶಗಳಲ್ಲಿ  ಬೋರ್ಡ್ ಇತ್ಯಾದಿ ಗಳು ಸ್ಥಾಪಿಸುವಾಗ ಅದರ ಸೈಸ್ ಇತ್ಯಾದಿಗಳ ಮಾಹಿತಿಗಳನ್ನೂ ಮುಂಗಡ …

ಫೆಬ್ರವರಿಯಿಂದ ನಳಿಗೆ ಮೂಲಕ ಮನೆಗಳಿಗೆ ಗ್ಯಾಸ್

ಕಾಸರಗೋಡು: ಸಿಟಿ ಗ್ಯಾಸ್ ಯೋಜನೆ ಪ್ರಕಾರ ಕೊಳವೆ ಮೂಲಕ ಮನೆಗಳಿಗೆ ಅಡುಗೆ ಅನಿಲ ಪೂರೈಸುವ ಯೋಜನೆ ಯಂತೆ ಕಾಸರಗೋಡು ಜಿಲ್ಲೆಯಲ್ಲಿ ಹೊಸದುರ್ಗ ತಾಲೂಕಿನ ಕೋಟೆಪ್ಪಾರ- ಚಿತ್ತಾರಿ ರಸ್ತೆ ಪರಿಸರದ ಸಹಸ್ರಾರು ಮನೆಗಳಿಗೆ ಮುಂದಿನ ವರ್ಷ ಫೆಬ್ರವರಿಯಿಂದ ನಳಿಗೆ ಮೂಲಕ ಅಡುಗೆ ವಿತರಣೆ ಪೂರೈಕೆಗೆ ಚಾಲನೆ ನೀಡಲಾಗುವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಇದಕ್ಕಾಗಿ ಮಾವುಂಗಾಲ್- ಕೋಟೆಪ್ಪಾರದಲ್ಲಿ ಸಿಟಿ ಗೇಟ್ ಸ್ಟೇನ್ ನಿರ್ಮಿಸಲಾಗುತ್ತಿದ್ದು ಜನವರಿ ತಿಂಗಳ ಕೊನೆಯೊಳಗಾಗಿ ಇದರ ನಿರ್ಮಾಣ ಕೆಲಸ ಪೂರ್ಣಗೊಳಿಸಿ ಅದನ್ನು ಕಾರ್ಯಗತಗೊಳಿಸುವಂತೆ ಮಾಡಲು ಅಗತ್ಯದ ಸಿದ್ಧತೆ ನಡೆಸಲಾಗುತ್ತಿದೆ …

ಭರದಿಂದ ಸಾಗುತ್ತಿರುವ ಉಪ್ಪಳ ಫ್ಲೈಓವರ್ ಕಾಮಗಾರಿ

ಉಪ್ಪಳ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಉಪ್ಪಳದಲ್ಲಿ  ಫ್ಲೈಓವರ್ ಕಾಮಗಾರಿ ಮುಂದುವರಿಯುತ್ತಿದೆ. ತಿಂಗಳ ಹಿಂದೆ ಆರಂಭಿಸಿದ ಕಾಮಗಾರಿಯಲ್ಲಿ ಈಗ ೧೬ ಫಿಲ್ಲರ್‌ಗಳ ಸ್ಥಾಪನೆ ಕೆಲಸ ನಡೆ ಯುತ್ತಿದೆ. ಬಸ್ ನಿಲ್ದಾಣ ಬಳಿಯಿಂದ ಸುಮಾರು ೨೦೦ ಮೀಟರ್ ಉದ್ದದ ಫ್ಲೈಓವರ್ ನಿರ್ಮಾಣವಾಗಲಿದೆ. ಕಾಮಗಾರಿ ನಡೆಯುತ್ತಿರುವುದ ರಿಂದಾಗಿ ವಾಹನ ಸಂಚಾರಕ್ಕೆ ರಸ್ತೆ ಅಗಲೀಕರಣದ ಕಾರಣ ವಾಹನ ದಟ್ಟಣೆ ಪೇಟೆಯಲ್ಲಿ ಕಂಡು ಬರುತ್ತಿದೆ. ಇದರಿಂದ ಸಂಚಾರ ಸಮಸ್ಯೆಯೂ ಉಂಟಾಗುತ್ತಿದೆ. ತಲಪಾಡಿಯಿಂದ ಕಾಸರಗೋಡು ತನಕ ಸರ್ವೀಸ್ ರಸ್ತೆ ನಿರ್ಮಾಣವಾಗುತ್ತಿದೆ. ಇದರ ಕಾಮಗಾರಿ …

ಸಮಾಜದ ಒಳಿತಿಗಾಗಿರುವ ಕೆಲಸ  ನಿರಂತರವಾಗಿರಬೇಕು-ಎಡನೀರು ಶ್ರೀ

ದಿಯಡ್ಕ: ನಮ್ಮ ಧರ್ಮ, ಕಲೆಯಂತಹ ಸಮಾಜದ ಒಳಿತಿ ಗಾಗಿರುವ ಕೆಲಸಗಳು ನಿರಂತರವಾಗಿ ರಬೇಕು. ಆ ಮೂಲಕ ತೊಡಗಿಸಿ ಕೊಂಡರೆ ಅದÀÄ ಮುಂದಿನ ಪೀಳಿ ಗೆಯ ಉನ್ನತಿ ಸಹಾಯಕವಾಗಬಲ್ಲದು ಎಂದÀÄ ಎಡನೀರು ಮಠಾದಿsÃಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.ಮಾವಿನಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂ ದಿರದಲ್ಲಿ ನೂತನವಾಗಿ ನಿರ್ಮಿಸಿದ ತ್ರಿವೇಣಿ ಸಾಂಸ್ಕೃತಿಕ ಭವನದ ಉದ್ಘಾಟನೆ ಹಾಗೂ ೪೨ನೇ ವಾರ್ಷಿಕೋ ತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ರತಿಯೊಂದೂ ಕಡೆಯು ನಮ್ಮ ಧರ್ಮದ ರಕ್ಷಣೆಗಾಗಿ ಇಂತಹ ಕೇಂದ್ರಗಳಾಗಬೇಕು, ಅಲ್ಲಿ ಎಳೆವೆಯಲ್ಲಿಯೇ …

ಬಿ.ಎಂ.ಎಸ್ ಕೃಷಿ ಕಾರ್ಮಿಕರ ಸಂಘಟನೆಯಿಂದ ಧರಣಿ

ಕಾಸರಗೋಡು: ಕೃಷಿ ಕಾರ್ಮಿಕರ ಪಿಂಚಣಿ ಸೌಲಭ್ಯಗಳನ್ನು ಕಸಿದು ತೆಗೆಯುವ ಪಿಣರಾಯಿ ವಿಜಯನ್ ಸರಕಾರದ ಕ್ರಮದ ವಿರುದ್ಧ ಕರ್ಷಕ ತೊಯಿಲಾಳಿ ಫೆಡರೇಶನ್ ಬಿಎಂಎಸ್‌ನ ಆಶ್ರಯದಲ್ಲಿ ಕಾಸರಗೋಡು ನಗರಸಭಾ ಕಚೇರಿ ಮುಂಭಾಗ ಧರಣಿ ನಡೆಸಲಾಯಿತು. ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ಅನಿಲ್ ಬಿ ನಾಯರ್ ಉದ್ಘಾಟಿಸಿದರು. ಕರ್ಷಕ ಸಂಘಟನೆಯ ಉಪಾಧ್ಯಕ್ಷ ಪುಷ್ಪರಾಜ್ ಕೊರಕ್ಕೋಡು ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ಗೋವಿಂದನ್ ಮಡಿಕೈ, ಜಿಲ್ಲಾ ಜೊತೆ ಕಾರ್ಯದರ್ಶಿ  ದಿನೇಶ್ ಬಂಬ್ರಾಣ, ವಲಯ ಅಧ್ಯಕ್ಷ ಬಾಲಕೃಷ್ಣನ್ ನೆಲ್ಲಿಕುಂಜೆ, ವಲಯ ಕಾರ್ಯದರ್ಶಿ ರಿಜೇಶ್ ಜೆಪಿನಗರ್, …

ರಸ್ತೆ ಬದಿ ಅನಧಿಕೃತವಾಗಿ ಬೋರ್ಡ್, ಬ್ಯಾನರ್ ಸ್ಥಾಪಿಸಿದಲ್ಲಿ ೫೦೦೦ ರೂ. ಜುಲ್ಮಾನೆ, ಕಾನೂನುಕ್ರಮ

ಕಾಸರಗೋಡು: ರಾಜ್ಯದ ರಸ್ತೆ ಬದಿಗಳಲ್ಲಿ ಅನಧಿಕೃತವಾಗಿ ಬೋರ್ಡ್‌ಗಳು, ಬ್ಯಾನರ್‌ಗಳು, ಧ್ವಜ ಇತ್ಯಾದಿಗಳನ್ನು ಸ್ಥಾಪಿಸಿದಲ್ಲಿ ಅದಕ್ಕೆ ಪ್ರತಿಯೊಂದಕ್ಕೂ ತಲಾ ೫೦೦೦ ರೂ.ನಂತೆ ಜುಲ್ಮಾನೆ ವಿಧಿಸಲು ಹಾಗೂ ಅದನ್ನು ಸ್ಥಾಪಿಸಿದವರ ವಿರುದ್ದ ಕಾನೂನುಕ್ರಮ (ಪ್ರೋಸಿಕ್ಯೂ  ಷನ್)ಕೈಗೊಳ್ಳುವಂತೆ ರಾಜ್ಯ ಸರಕಾರ ಹೊಸ ನಿರ್ದೇಶ ನೀಡಿದೆ. ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಬ್ಯಾನರ್, ಬೋರ್ಡ್, ಪತಾಕೆ ಗಳನ್ನು  ಸ್ಥಾಪಿಸುವುದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ  ರಾಜ್ಯ ಹೈಕೋರ್ಟ್ ಈ ಹಿಂದೆಯೇ  ತೀರ್ಪು ನೀಡಿತ್ತು. ಆದರೆ ಈ ತೀರ್ಪನ್ನು ಜ್ಯಾರಿಗೊ ಳಿಸಲು  ಮುಂದಾಗದ ಸ್ಥಳೀಯಾ ಡಳಿತ …

ನವಕೇರಳ ಸಭೆ: ೨೭೯೪ ದೂರುಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಹಸ್ತಾಂತರ

ಕಾಸರಗೋಡು: ಮುಖ್ಯಮಂತ್ರಿ ಹಾಗೂ ಸಚಿವರು ನಡೆಸಿದ ನವಕೇರಳ ಸಭೆಯಂಗವಾಗಿ ಸಾರ್ವಜನಿಕರಿಂದ ಲಭಿಸಿದ ದೂರುಗಳ ಪರಿಶೀಲನೆ, ಸ್ಕ್ಯಾನಿಂಗ್ ಡಾಟಾ ಎಂಟ್ರಿ ಪ್ರಗತಿಯಲ್ಲಿದೆ. ಜಿಲ್ಲಾ ಇನ್‌ಫರ್ಮೇಶನ್ ಕಚೇರಿಯ ಪಿ.ಆರ್. ಚೇಂಬರ್‌ನಲ್ಲಿ ಪ್ರತ್ಯೇಕವಾಗಿ ಸಜ್ಜುಗೊಳಿಸಿದ ವ್ಯವಸ್ಥೆ ಮೂಲಕ ೬೪ ಕಂದಾಯ ನೌಕರರು ದೂರುಗಳಲ್ಲಿ ತಾಂತ್ರಿಕ ಕ್ರಮಗಳನ್ನು ಪೂರ್ತಿಗೊಳಿಸುತ್ತಿದ್ದಾರೆ. ಮೂರು ದಿನದಲ್ಲಿ ಈ ಕೆಲಸ ಪೂರ್ತಿಗೊಳಿಸಲು ದ್ದೇಶಿಸಲಾಗಿತ್ತು. ಆದರೆ ಇದಕ್ಕಿಂತ ಹೆಚ್ಚು ಸಮಯ ಬೇಕಾಗಿ ಬರಲಿದೆ ಎನ್ನಲಾಗಿದೆ. ೨೭೯೪ ದೂರುಗಳನ್ನು ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸಲಾಗಿದೆ. ಮಂಜೇಶ್ವರ ವಿಧಾನಸಭಾ ಮಂಡಲದಲ್ಲಿ ಲಭಿಸಿದ ೧೯೦೮ ದೂರುಗಳಲ್ಲಿ …

ವೆಳ್ಳಿಕೋತ್ ವಿಷ್ಣು ಭಟ್‌ರಿಗೆ ಗುರುರತ್ನ ಪ್ರಶಸ್ತಿ

ಕಾಸರಗೋಡು:  ಪೆರಿಯ ಆಲಕ್ಕೋಡು ಗೋಕಲಂ ಗೋ ಶಾಲೆಯಲ್ಲಿ ನಡೆದ ದೀಪಾವಳಿ ಸಂಗೀತೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಹಿರಿಯ ಸಂಗೀತ ಕಲಾವಿದ ವೆಳ್ಳಿಕೋ ತ್ ವಿಷ್ಣು ಭಟ್  ಅವರಿಗೆ ಗುರುರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಗೌರವಿಸಿದರು. ಹಿರಿಯ ಕಲಾವಿದ ಡಾ. ಪದ್ಮಾ ಸುಬ್ರಹ್ಮಣ್ಯಂ, ಪರಂಪರಾ ವಿದ್ಯಾಪೀಠದ ಆಚಾರ್ಯ ವಿಷ್ಣು ಪ್ರಸಾದ್ ಹೆಬ್ಬಾರ್, ಡಾ. ನಾಗರತ್ನ ಹೆಬ್ಬಾರ್ ಉಪಸ್ಥಿತರಿದ್ದರು.

ಕನ್ನಟಿಕಾನ: ಪಿಕೆಎಸ್‌ನಿಂದ ಹಗ್ಗಜಗ್ಗಾಟ ಸ್ಪರ್ಧೆ

ಪೆರ್ಲ: ಪರಿಶಿಷ್ಟ ಜಾತಿ ಕ್ಷೇಮ ಸಮಿತಿ ಎಣ್ಮಕಜೆ ಪಂಚಾಯತ್ ಸಮಿತಿ ಆಶ್ರಯದಲ್ಲಿ ಈ ತಿಂಗಳ ೨೬ರಂದು ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ. ಅಂದು ಬೆಳಿಗ್ಗೆ ೧೦ಕ್ಕೆ ಕನ್ನಟಿಕಾನ ಸೆಟ್ಟಿಬೈಲು ಎಸ್‌ಸಿ ಕಾಲನಿಯಲ್ಲಿ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು, ಹಿರಿಯರಿಗೆ, ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿದೆ. ಸಂಜೆ ೬ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಪಿಕೆಎಸ್ ರಾಜ್ಯ ಸಮಿತಿ ಅಧ್ಯಕ್ಷ ವಂಡಿತಾಡ ಮಧು ಉದ್ಘಾಟಿಸುವರು. ಪಿಕೆಎಸ್ ಎಣ್ಮಕಜೆ ಪಂ. ಸಮಿತಿ ಅಧ್ಯಕ್ಷ ವಿಠಲ ಅಧ್ಯಕ್ಷತೆ ವಹಿಸುವರು. ಹಲವರು ಭಾಗವಹಿಸುವರು.