ನಿರ್ಮಾಣ ಕೆಲಸದ ವೇಳೆ ಗೋಡೆ ಕುಸಿದು ಬಿದ್ದು ಕಾರ್ಮಿಕರಿಬ್ಬರು ದಾರುಣ ಮೃತ್ಯು

ಕಾಸರಗೋಡು: ನಿರ್ಮಾಣ ಕೆಲಸದ ವೇಳೆ ಗೋಡೆ ಕುಸಿದು ಬಿದ್ದು ಕರ್ನಾಟಕದ ವಲಸೆ ಕಾರ್ಮಿಕರಿಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಗರದ ಮೀನು ಮಾರುಕಟ್ಟೆ ಬಳಿ ನಡೆದಿದೆ. ಕರ್ನಾಟಕ ವಿಜಯನಗರ ಬೊಮ್ಮನಹಳ್ಳಿ ಅರಗಿಯ ಮುರುಗೇರಿ ನಿವಾಸಿ ಬಿ.ಎಂ. ಕೊಟ್ರಯ್ಯ -ರತ್ನಮ್ಮ ದಂಪತಿ ಪುತ್ರ ಬಿ.ಎಂ. ಬಸಯ್ಯ (೩೯) ಮತ್ತು ಕೊಪ್ಪಳ ಕೋಕ್ಕನ್ನೂರು ತಾಲೂಕು ನಿಂಗಾಪುರ ನಿವಾಸಿ ರಾಮಪ್ಪ – ಸತ್ಯಮ್ಮ ದಂಪತಿ ಪುತ್ರ ಲಕ್ಷಪ್ಪ (೫೦) ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ. ನಗರದ ಹಳೆ ಬಸ್ ನಿಲ್ದಾಣ ಬಳಿಯ ಮೀನು ಮಾರುಕಟ್ಟೆಯ ಫಿರ್ದೋಸ್ …

ಗಲಭೆಗೆ ಆಹ್ವಾನ ನೀಡುವ ಮುಖ್ಯಮಂತ್ರಿ ತಕ್ಷಣ ರಾಜೀನಾಮೆ ನೀಡಬೇಕು-ವಿರೋಧಪಕ್ಷ ನಾಯಕ

ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗಲಭೆಗೆ ಆಹ್ವಾನ ನೀಡುತ್ತಿದ್ದಾರೆಂದೂ, ಆದ್ದರಿಂದ ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವಿರೋಧಪಕ್ಷ ನಾಯಕ ವಿ.ಡಿ. ಸತೀಶನ್ ಆಗ್ರಹಪಟ್ಟಿದ್ದಾರೆ.ಕಣ್ಣೂರು ಜಿಲ್ಲೆಯ ಪಳಯಂಗಾ ಡಿಯಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸಿಪಿಎಂ ಮತ್ತು ಡಿವೈಎಫ್‌ಐ ಕಾರ್ಯಕರ್ತರು ನಡೆಸಿದ ದಾಳಿಯನ್ನು ಸಮರ್ಥಿಸಿ ಕೊಂಡು ಮುಖ್ಯಮಂತ್ರಿ  ಹೇಳಿಕೆ ನೀಡಿದ್ದಾರೆ. ಇಂತಹ ಕೊಲೆಯತ್ನ ಇನ್ನೂ ಮುಂದುವರಿಯಬೇಕೆಂದು ಮುಖ್ಯಮಂತ್ರಿ ಆಗ್ರಹಿಸುತ್ತಿದ್ದಾರೆಯೇ  ಎಂದು  ವಿರೋಧಪಕ್ಷ ನಾಯಕರು ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿ ಓರ್ವ ಕ್ರಿಮಿನಲ್ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಅಂತಹ ಮನೋಭಾವದೊಂದಿಗೆ ಅವರು …

ನವದಂಪತಿಗೆ ಹಲ್ಲೆ: ಮಹಿಳೆ, ಆಟೋ ಚಾಲಕನ ವಿರುದ್ಧ ಕೇಸು

ಮಂಜೇಶ್ವರ: ಕಾರು ತಡೆದು ನಿಲ್ಲಿಸಿ ನವದಂಪತಿಗೆ ಹಾಗೂ  ತಡೆಯಲೆತ್ನಿಸಿದ ಸಹೋದರನಿಗೆ ಹಲ್ಲೆಗೈದ ಘಟನೆಗೆ ಸಂಬಂಧಿಸಿ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಕಾಸರಗೋಡಿನ ನಸ್ರಿಯ ಹಾಗೂ ಆಟೋ ಚಾಲಕ ಮುಸ್ತಫ ಎಂಬಿವರ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಮೊನ್ನೆ ಸಂಜೆ  ಕುಂಬಳೆ ಬಂಬ್ರಾಣ ದಿನೇಶ್ ಬೀಡಿ ಕಂಪೆನಿ ಸಮೀಪದ ಅಬ್ದುಲ್ ಲತೀಫ್, ಸಹೋದರ ಮುಹಮ್ಮದ್ ಅಲ್ತಾಫ್ (೨೨), ಪತ್ನಿ ಡಿ.ಎಂ. ಶಮ್ನ (೨೦) ಎಂಬಿವರ ಮೇಲೆ ಹಲ್ಲೆಗೈಯ್ಯಲಾಗಿತ್ತು. ಶಮ್ನ ಹಾಗೂ ಮುಹಮ್ಮದ್ ಅಲ್ತಾಫ್‌ರ ಮದುವೆ ಮೂರು ತಿಂಗಳ …

ಬೆಳ್ಳೂರು ಕುಟುಂಬ ಆರೋಗ್ಯ ಕೇಂದ್ರಕ್ಕೆ ರಾಷ್ಟ್ರೀಯ ಪುರಸ್ಕಾರ

ಬೆಳ್ಳೂರು: ಬೆಳ್ಳೂರು ಕುಟುಂಬ ಆರೋಗ್ಯ ಕೇಂದ್ರ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆಗೊಂಡಿದೆ. ಜಿಲ್ಲೆಯ ಮಲೆನಾಡು ಗ್ರಾಮವಾದ ಬೆಳ್ಳೂರಿನ ಕುಟುಂಬ ಆರೋಗ್ಯ ಕೇಂದ್ರ ಸರಕಾರ ಆರೋಗ್ಯ ರಂಗದಲ್ಲಿ ಉತ್ತಮ ಚಟುವಟಿಕೆ ನಿರ್ವಹಿಸುವ ಸಂಸ್ಥೆಗೆ ನೀಡುವ ನೇಶನಲ್ ಕ್ವಾಲಿಟಿ  ಅಶೂರೆನ್ಸ್ ಸ್ಟಾಂಡರ್ಡ್ ಪುರಸ್ಕಾರವನ್ನು ಪಡೆದುಕೊಂಡಿದೆ. ಈ  ಹಿಂದೆ ಕೇರಳ ಸರಕಾರ ನೀಡುವ ಕಾಯಕಲ್ಪ ಪುರಸ್ಕಾರಕ್ಕೆ ಜಿಲ್ಲೆಯಲ್ಲಿ ಪ್ರಥಮ ಸ್ಥಾನವೂ ಇದೇ ಆರೋಗ್ಯ ಕೇಂದ್ರಕ್ಕೆ ಲಭಿಸಿತ್ತು. ಒಪಿ, ಲ್ಯಾಬ್, ಜನರಲ್ ಅಡ್ಮಿನಿಸ್ಟ್ರೇಶನ್,  ಸಾರ್ವಜನಿಕ ಆರೋಗ್ಯ ವಿಭಾಗ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ನಿರ್ವಹಣೆ, ಶುಚಿತ್ವ, …

ಅಮೆರಿಕಾ ಮಾದರಿಯಲ್ಲಿ ಶಾಲೆಗೆ ನುಗ್ಗಿ ಗುಂಡು ಹಾರಿಸಿ ಯುವಕನ ಪರಾಕ್ರಮ: ಬೆಚ್ಚಿಬಿದ್ದ ವಿದ್ಯಾರ್ಥಿಗಳು, ಅಧ್ಯಾಪಕರು

ತೃಶೂರು: ಅಮೆರಿಕಾದ ಶಾಲೆಗಳಲ್ಲಿ ವಿದ್ಯಾರ್ಥಿಗಳು ಗನ್ ಹಿಡಿದು ಶೂಟೌ ಟ್ ನಡೆಸಿದ ಹಲವು ಘಟನೆಗಳನ್ನು ನಾವು ಕೇಳಿದ್ದೇವೆ. ಅದೇ ರೀತಿಯ ಘಟನೆ ತೃಶೂರಿನ ವಿವೇಕೋದಯಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಿನ್ನೆ ನಡೆದಿದೆ. ಈ ಶಾಲೆಯ ಮಾಜಿ ವಿದ್ಯಾರ್ಥಿ ಯಾದ ಯುವಕನೋರ್ವ ನಿನ್ನೆ ಏರ್‌ಗನ್ ಹಿಡಿದು ಶಾಲೆಗೆ ಅಕ್ರಮವಾಗಿ ನುಗ್ಗಿ ಏಕಾಏಕಿಯಾಗಿ ಹಲವು ಸುತ್ತು ಗುಂಡು ಹಾರಿಸಿದ್ದಾನೆ. ಆಗ ಶಾಲೆಯ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಒಮ್ಮೆಲೇ ಬೆಚ್ಚಿಬಿದ್ದಿದ್ದಾರೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಶಾಲೆಯಲ್ಲಿ ಈ …

ನಿಗೂಢ ನಾಪತ್ತೆಯಾದ ಮೀನು ಕಾರ್ಮಿಕನಿಗಾಗಿ ಮುಂದುವರಿದ ಶೋಧ

ಮಂಜೇಶ್ವರ: ಕಳೆದ ನಾಲ್ಕು ದಿ ಗಳಿಂದ ನಿಗೂಢವಾಗಿ ನಾಪತ್ತೆ ಯಾಗಿರುವ ಮೀನು ಕಾರ್ಮಿಕನಿಗಾಗಿ ಶೋಧ ತೀವ್ರಗೊಳಿಸಲಾಗಿದೆ. ಮಂಜೇಶ್ವರ ಚರ್ಚ್ ಬೀಚ್ ರಸ್ತೆ ಬಳಿಯ ನಿವಾಸಿ ದಿ| ಫೆಲಿಕ್ಸ್ ಮೊಂತೇರೋರ ಪುತ್ರ ರೋಷನ್ ಮೊಂತೇರೋ (೪೨)ರ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ. ಕರಾವಳಿ ಪೊಲೀಸರು ಮಂಜೇಶ್ವರ ಸಮುದ್ರ ಕಿನಾರೆ ಬಳಿ ನಾಗರಿಕರ ಸಹಾಯದೊಂದಿಗೆ ಶೋಧ ಆರಂಭಿಸಿದ್ದಾರೆ.  ಕಳೆದ ಶನಿವಾರ ರಾತ್ರಿ ಬಳಿಕ ರೋಷನ್ ಮೊಂತೇರೋ ಮನೆಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಪತ್ನಿ ರೇಖಾ ಮೊಂತೇರೋ ನೀಡಿದ ದೂರಿನಂತೆ ಮಂಜೇಶ್ವರ …

ವಿಷ ಸೇವಿಸಿ ಬೆಸ್ತ ಮೃತ್ಯು

ಕಾಸರಗೋಡು: ಇಲಿ ವಿಷ ಸೇವಿಸಿ ಬೆಸ್ತ ಸಾವನ್ನಪ್ಪಿದ ಘಟನೆ ನಡೆದಿದೆ. ಕಿಯೂರು ಕಿಳಕ್ಕೇವ ಪ್ಪಿನ ಬಾಲನ್- ಕಾಳಿ ದಂಪತಿ ಪುತ್ರ ರಾಜೇಶ್ (೩೯) ಸಾವನ್ನಪ್ಪಿದ ಯುವಕ. ಬೇಕಲ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದರು. ಮೃತರ ಪತ್ನಿ ಸೈನ, ಮಕ್ಕಳಾದ ಶ್ರೀಬಾಲ, ಶ್ರೀವೇದ್, ಸಹೋದರಿಯರಾದ ರಮಿಷ, ಚಿಪ್ಪಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಆಸ್ಪತ್ರೆ ಲಿಫ್ಟ್‌ನಲ್ಲಿ ಬಾಲಕಿಗೆ ಕಿರುಕುಳಕ್ಕೆತ್ನ ಆರೋಪಿಗಾಗಿ ಶೋಧ

ಕುಂಬಳೆ: ಆಸ್ಪತ್ರೆಯ ಲಿಫ್ಟ್‌ನೊಳಗೆ ಹತ್ತರ ಹರೆಯದ ಬಾಲಕಿಗೆ ಕಿರುಕುಳ ನೀಡಲೆತ್ನಿಸಿದ ಪ್ರಕರಣದ ಆರೋಪಿಗಾಗಿ ಪೊಲೀ ಸರು ಶೋಧ ತೀವ್ರಗೊಳಿ ಸಿದ್ದಾರೆ. ತನಿಖೆಯಂಗವಾಗಿ ಆಸ್ಪತ್ರೆಯ ಸಿಸಿ ಕ್ಯಾಮರಾದ ಹಾರ್ಡ್ ಡಿಸ್ಕ್‌ನ್ನು ಕುಂಬಳೆ ಠಾಣೆ ಇನ್‌ಸ್ಪೆಕ್ಟರ್ ಇ. ಅನೂಪ್ ತಮ್ಮ ಕಸ್ಟಡಿಗೆ ತೆಗೆದುಕೊಂ ಡಿದ್ದಾರೆ. ಅದನ್ನು ಪರಿಶೀಲಿಸಿದರೆ  ಆರೋಪಿಯ ಚಿತ್ರಗಳು  ಲಭಿಸಬಹು ದೆಂದು ನಿರೀಕ್ಷಿಸಲಾಗಿದೆ. ಮೊನ್ನೆ ತಾಯಿಯೊಂದಿಗೆ ವೈದ್ಯರನ್ನು ಕಾಣಲು ಆಸ್ಪತ್ರೆಗೆ ಬಂದ  ಬಾಲಕಿಗೆ ವ್ಯಕ್ತಿಯೋರ್ವ ಕಿರುಕುಳ ನೀಡಲು ಯತ್ನಿಸಿದ ಘಟನೆ ನಡೆದಿದೆ. ತಾಯಿ ಔಷಧಿ ಖರೀದಿಸಲೆಂದು ಹೋದ ಸಂದರ್ಭದಲ್ಲಿ …

ಕುಂಬಳೆ ಬಸ್ ನಿಲ್ದಾಣ ಬಳಿ ಮೀನು ಮಾರಾಟ: ಕೇಸು

ಕುಂಬಳೆ: ಕುಂಬಳೆ ಬಸ್ ನಿಲ್ದಾಣ ಬಳಿ ಮೀನು ಮಾರಾಟ ನಡೆಸುತ್ತಿದ್ದ ಇನ್ನೋರ್ವನ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಕೊಯಿಪ್ಪಾಡಿ ನಿವಾಸಿ ಫೈಸಲ್ (೨೮)ನ ವಿರುದ್ಧ ಕೇಸು ದಾಖ ಲಿಸಲಾಗಿದೆ. ಬಸ್ ನಿಲ್ದಾಣ ಬಳಿ ಮೀನು ಮಾರಾಟ ನಡೆಸುತ್ತಿರು ವುದರಿಂದ ಸಾರ್ವಜನಿಕರಿಗೆ ಸಮಸ್ಯೆ ಯಾಗುತ್ತಿರುವುದಾಗಿ ದೂರಲಾಗಿದೆ. ಇತ್ತೀಚೆಗೆ ಇಬ್ಬರ ವಿರುದ್ಧ ಕೇಸು ದಾಖ ಲಿಸಲಾಗಿತ್ತು.

ನೋಟ್ಸ್ ಬರೆಯದ ವಿದ್ಯಾರ್ಥಿನಿಗೆ ಹಲ್ಲೆಗೈದು ಕೈ ಎಲುಬು ಮುರಿದ ಅಧ್ಯಾಪಕ

ಹೊಸದುರ್ಗ: ನೋಟ್ಸ್ ಬರೆದು ಪೂರ್ತಿಗೊಳಿಸಿಲ್ಲವೆಂಬ ಕಾರಣಕ್ಕೆ ವಿದ್ಯಾರ್ಥಿನಿಗೆ ಹಲ್ಲೆಗೈದು ಕೈಯ ಎಲುಬು ಮುರಿದ ಬಗ್ಗೆ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಪರಿಯಾರಂ ಬಳಿಯ ಪಾಚೇನಿ ಸರಕಾರಿ ಶಾಲೆಯ ಅಧ್ಯಾಪಕ ಕೆ. ಮುರಳಿ ಎಂಬವರ ವಿರುದ್ಧ ಪರಿಯಾರಂ ಪೊಲೀಸರು ಜಾಮೀನುರಹಿತ ಕೇಸು ದಾಖಲಿಸಿದ್ದಾರೆ. ನಿನ್ನೆ ಬೆಳಿಗ್ಗೆ ೧೦ ಗಂಟೆ ವೇಳೆ ತರಗತಿಯಲ್ಲಿ ಘಟನೆ ನಡೆದಿರುವುದಾಗಿ ಹೇಳಲಾಗಿದೆ. ನೋಟ್ಸ್ ಪೂರ್ತಿಗೊಳಿಸಿಲ್ಲವೆಂಬ ಕಾರಣದಿಂದ ಎಂಟನೇ ತರಗತಿ ವಿದ್ಯಾರ್ಥಿನಿಗೆ ಅಧ್ಯಾಪಕ ಹೊಡೆದಿರುವುದಾಗಿ ದೂರಲಾಗಿದೆ. ಇದರಿಂದ ಕೈಯ ಎಲುಬಿಗೆ ಗಾಯ ಉಂಟಾಗಿದ್ದು, ಬಾತುಕೊಂಡಿತ್ತು. ಮಧ್ಯಾಹ್ನ ವೇಳೆ …