ಮುಳ್ಳೇರಿಯ, ಬೆಳ್ಳೂರು ಮೂಲಕ ಪುತ್ತೂರಿಗೆ ಕೆಎಸ್ಆರ್ಟಿಸಿ ಬಸ್ ಆರಂಭಿಸಲು ಒತ್ತಾಯಿಸಿ ಮುಖ್ಯಮಂತ್ರಿಗೆ ಮನವಿ
ಮುಳ್ಳೇರಿಯ: ಕಾಸರಗೋಡಿನಿಂದ ಮುಳ್ಳೇರಿಯ, ಬೆಳ್ಳೂರು ಮೂಲಕ ಕರ್ನಾಟಕದ ಪುತ್ತೂರಿಗೆ ಕೆಎಸ್ಆರ್ಟಿಸಿ ಬಸ್ ಸೌಕರ್ಯ ಏರ್ಪಡಿಸಬೇಕೆಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಶಶಿಧರ ಗೋಳಿಕಟ್ಟೆ ಅವರು ಕಾಸರಗೋಡಿನಲ್ಲಿ ನಡೆದ ನವಕೇರಳ ಸಭಾದಲ್ಲಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ. ಪ್ರಸ್ತುತ ಮುಳ್ಳೇರಿಯ-ಬೆಳ್ಳೂರು ರೂಟ್ನಲ್ಲಿ ಪುತ್ತೂರಿಗೆ ಯಾವುದೇ ಬಸ್ ಸಂಚಾರವಿಲ್ಲ. ಮುಳ್ಳೇರಿಯ ಭಾಗದಿಂದ ಪ್ರತಿದಿನ ಹಲವು ಮಂದಿ ವಿವಿಧ ಅಗತ್ಯಗಳಿಗಾಗಿ ಪುತ್ತೂರಿಗೆ ತೆರಳುವವರಿದ್ದಾರೆ. ಅವರು ಇದೀಗ ತೀವ್ರ ಸಂಚಾರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮಾತ್ರವಲ್ಲದೆ ಬೆಳ್ಳೂರು, ಕಾರಡ್ಕ, ಮುಳಿಯಾರು, ಕುಂಬ್ಡಾಜೆ ಪಂಚಾಯತ್ಗಳಲ್ಲಿ ಹಲವು ಮಂದಿ ಎಂಡೋಸಲ್ಫಾನ್ …