ಕರಂದಕ್ಕಾಡ್-ರೈಲು ನಿಲ್ದಾಣ ರಸ್ತೆ ನವೀಕರಿಸಿದ ಕಾಮಗಾರಿಯಲ್ಲಿ ಅವ್ಯವಹಾರ ಪತ್ತೆ ಮಾಡಬೇಕು, ನಗರದ ರಸ್ತೆಗಳನ್ನು ದುರಸ್ತಿಗೊಳಿಸಬೇಕು-ಬಿಎಂಎಸ್
ಕಾಸರಗೋಡು: ನಗರದ ಪ್ರಧಾನ ರಸ್ತೆಯಾದ ಕರಂದಕ್ಕಾಡ್- ರೈಲ್ವೇ ನಿಲ್ದಾಣ ರಸ್ತೆ ನವೀಕರಿಸಿ ಕೆಲವೇ ದಿನಗಳೊಳಗೆ ಹಾನಿಗೊಂಡಿರುವುದರಲ್ಲಿ ಭ್ರಷ್ಟಾಚಾರವನ್ನು ಪತ್ತೆಹಚ್ಚಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಕಾಸರಗೋಡು ನಗರದ ಶೋಚನೀಯಗೊಂಡ ರಸ್ತೆಗಳನ್ನು ದುರಸ್ತಿಗೊಳಿಸಿ ಸಂಚಾರಯೋಗ್ಯಗೊಳಿ ಸಬೇಕು, ನಗರದಲ್ಲಿ ಉಂಟಾಗುತ್ತಿ ರುವ ಟ್ರಾಫಿಕ್ ಬ್ಲೋಕ್ ಪರಿಹರಿಸಬೇಕು, ಚರಂಡಿಗಳನ್ನು ಪುನರ್ ನಿರ್ಮಿಸಬೇಕು, ಹೊಸ ಬಸ್ ನಿಲ್ದಾಣದಲ್ಲಿ ಕಟ್ಟಿ ನಿಲ್ಲುವ ಮಲಿನ ಜಲವನ್ನು ತೆರವುಗೊಳಿಸಲಿರುವ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ಆಟೋರಿಕ್ಷಾ ಮಜ್ದೂರ್ ಸಂಘ್ (ಬಿಎಂಎಸ್) ಕಾಸರಗೋಡು ವಲಯ ಸಮಿತಿಯ ನೇತೃತ್ವದಲ್ಲಿ ಕಾಸರಗೋಡು …