ಉಪ್ಪಳ ಬಸ್ ನಿಲ್ದಾಣದಲ್ಲಿ ದುರ್ವಾಸನೆಯಿಂದ ಸಮಸ್ಯೆ ಸೃಷ್ಟಿ

ಉಪ್ಪಳ: ಈಗಾಗಲೇ ಹಳದಿ ಕಾಮಲೆ ರೋಗ ಹೆಚ್ಚಾಗ ತೊಡಗಿ ಕೊಂಡಿರುವAತೆ ಅಲ್ಲಲ್ಲಿ ರಾಶಿ ಬಿದ್ದಿರುವ ತ್ಯಾಜ್ಯದಿಂದ ಸಾರ್ವ ಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಉಪ್ಪಳ ಬಸ್ ನಿಲ್ದಾಣದ ಶೌಚಾಲ ಯ ಪರಿಸರದ ಸಾರ್ವಜನಿಕ ಸ್ಥಳದಲ್ಲಿ ಮಲಿನ ನೀರು ಜೊತೆ ತ್ಯಾಜ್ಯವು ಬೆರೆತÀÄ ದುರ್ವಾಸನೆ ಬೀರು ತ್ತಿರುವುದು ಸಾರ್ವ ಜನಿಕರಲ್ಲಿ ಸಮಸ್ಯೆಗೆ ಕಾರಣವಾಗಿದೆ. ಈ ಹಿಂದೆ ಈ ಪರಿಸರದ ತ್ಯಾಜ್ಯವನ್ನು ತೆರವು ಗೊಳಿಸಲಾದರೂ ಮತ್ತೆತ್ಯಾಜ್ಯ ತಂದು ಹಾಕುತ್ತಿರುವುದು ಸಮಸ್ಯೆಯಾಗಿದೆ. ಬಸ್ ನಿಲ್ದಾಣದಲ್ಲಿ ಪಂಚಾಯತ್ ನಿಂದ ಶುಚೀಕರಣ ನಡೆಸÀÄತ್ತಿಲ್ಲ . ಬಸ್ …

ಕುಂಬಳೆಯಲ್ಲಿ ಬೀದಿ ನಾಯಿಗಳ ಹಾವಳಿ: ಜನರಲ್ಲಿ ಆತಂಕ

ಕುಂಬಳೆ: ಕುಂಬಳೆ-ಬದಿಯಡ್ಕ ರಸ್ತೆಯಲ್ಲಿ ಕುಂಬಳೆ ಚರ್ಚ್ ಸಮೀಪ ಬೀದಿನಾಯಿಗಳ ಉಪಟಳ ತೀವ್ರಗೊಂಡಿರುವುದಾಗಿ ದೂರ ಲಾಗಿದೆ. ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳು ಹಾಗೂ ದ್ವಿಚಕ್ರವಾಹನಗಳನ್ನು ಬೆನ್ನಟ್ಟಿ ಪ್ರಯಾಣಿಕರ ಮೇಲೆ ದಾಳಿ ನಡೆಸುತ್ತಿದ್ದು ಇದರಿಂದ ಸಂಚಾರಕ್ಕೆ ಆತಂಕ ಸೃಷ್ಟಿಯಾಗಿದೆ. ಇದೇ ಪರಿಸರದಲ್ಲಿ ಹತ್ತಕ್ಕಿಂತಲೂ ಹೆಚ್ಚು ಬೀದಿನಾಯಿಗಳು  ತಂಗಿದ್ದು, ಅವು ಒಮ್ಮೆಲೆ ಪ್ರಯಾಣಿಕರ ಮೇಲೆರ ಗುತ್ತಿವೆ. ನಿನ್ನೆ ಬೆಳಿಗ್ಗೆ  ಬೈಕ್‌ವೊಂದರ ಸವಾರನ ಮೇಲೆ  ಬೀದಿ ನಾಯಿ ಗಳು ದಾಳಿ ನಡೆಸಿದ್ದು, ಇದರಿಂದ ಅವರು ಗಾಯಗೊಂಡಿ ದ್ದಾರೆ. ಕಳೆದ ಹಲವು ದಿನಗಳಿಂದ ಇಲ್ಲಿ ಬೀದಿ …

ವಿದ್ಯುತ್ ಮೊಟಕು: ವ್ಯಾಪಾರಿಗಳಿಗೆ ಸಮಸ್ಯೆ

ಕಾಸರಗೋಡು: ನುಳ್ಳಿಪ್ಪಾಡಿ, ಅಣಂಗೂರು ಭಾಗದಲ್ಲಿ ಎರಡು ದಿನಗಳಿಗೊಮ್ಮೆ ಬೆಳಿಗ್ಗೆ ೯ರಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ವಿಚ್ಛೇಧಿ ಸುತ್ತಿರುವುದು ಹಲವು ತಿಂಗಳು ಗಳಿಂದ ಮುಂದುವರಿಯುತ್ತಿದೆ. ಇದಲ್ಲದೆ ಆಗಾಗ ವಿದ್ಯುತ್ ಮೊಟಕಾಗುತ್ತಿದೆ. ಇದರಿಂದಾಗಿ ವ್ಯಾಪಾರಿಗಳಿಗೆ, ಸಾರ್ವಜನಿಕರಿಗೆ, ಆಸ್ಪತ್ರೆಗಳಿಗೆ ಸಮಸ್ಯೆಯಾಗುತ್ತಿದೆ. ಐಸ್‌ಕ್ರೀಂ ಸಹಿತದ ಆಹಾರ ಉತ್ಪನ್ನಗಳು ಹಾಳಾಗುತ್ತಿದ್ದು, ಅಂಗಡಿ ಮಾಲಕರಿಗೆ ಭಾರೀ ನಷ್ಟವುಂಟಾಗುತ್ತಿದೆ. ? ರಾಷ್ಟ್ರೀಯ ಹೆದ್ದಾರಿ ದುರಸ್ತಿ ಮರೆಯಲ್ಲಿ ಅನಧಿಕೃತ ವಿದ್ಯುತ್ ಮೊಟಕು ದಿನವೂ ಉಂಟಾಗುತ್ತಿದ್ದು, ಈ ಸಮಸ್ಯೆಗೆ ಪರಿಹಾರ ಕಾಣಬೇ ಕೆಂದು ಆಗ್ರಹಿಸಿ ಕೆಎಸ್‌ಇಬಿಗೆ ಕಾಸರಗೋಡು ಮರ್ಚೆಂಟ್ಸ್ …

ಬೃಹತ್ ಆಳದ ಬಾವಿಗೆ ಬಿದ್ದ ಜಾನುವಾರು ಅಗ್ನಿಶಾಮಕದಳದಿಂದ ರಕ್ಷಣೆ

ಉಪ್ಪಳ: 45 ಅಡಿ ಆಳದ ಬಾವಿಯೊಂದಕ್ಕೆ ಬಿದ್ದ ಜಾನು ವಾರುವನ್ನು ಉಪ್ಪಳ ಅಗ್ನಿಶಾಮಕ ದಳ ಸಾಹಸದಿಂದ ರಕ್ಷಿಸಿದ ಘಟನೆ ನಡೆದಿದೆ. ನಿನ್ನೆ ಸಂಜೆ ಸುಮಾರು 6ಗಂಟೆಗೆ ಪೈವಳಿಕೆಯ ಪೆರಿಯಡ್ಕ ನಿವಾಸಿ ಈಶ್ವರ ನಾಯ್ಕ್ ಎಂಬವರ ಜಾನುವಾರು ಸಮೀಪದ ಭಾಸ್ಕರ ಎಂಬವರ ಮನೆ ಬಳಿಯಿರುವ ಬಾವಿಗೆ ಬಿದ್ದಿದೆ. ಮಾಹಿತಿ ತಿಳಿದು ಕೂಡಲೇ ತಲುಪಿದ ಉಪ್ಪಳ ಅಗ್ನಿಶಮಕದಳದ ಸೀನಿಯರ್ ಆಫೀಸರ್ ಸುನಿಲ್ ಕುಮಾರ್ ನೇತೃತ್ವದಲ್ಲಿ ಫಯರ್‌ಮೆನ್‌ಗಳಾದ ಪಶುಪತಿ, ಮಹೇಶ್ ಬಾವಿಗೆ ಇಳಿದು ಜಾನುವಾರು ವನ್ನು ಉಪಕರಣಗಳ ಮೂಲಕ ಮೇಲೆತ್ತಿ ರಕ್ಷಿಸಿದ್ದಾರೆ. …

ಕಾಸರಗೋಡು ಉಪಜಿಲ್ಲಾ ಕಲೋತ್ಸವ ನಾಯಮ್ಮಾರ್‌ಮೂಲೆ ಶಾಲೆ ತಂಡದ ಸಾಧನೆ

ಕಾಸರಗೋಡು: ಕಳೆದ ಐದು ದಿನ ಗಳಿಂದ ಇರಿಯಣ್ಣಿ ಜಿವಿಎಚ್ ಎಸ್‌ಎಸ್‌ನಲ್ಲಿ ನಡೆದ ಕಾಸರಗೋಡು ಉಪಜಿಲ್ಲಾ ಶಾಲಾ ಕಲೋತ್ಸವದ ವಿವಿಧ ವಿಭಾಗಗಳಲ್ಲಿ ನಾಯಮ್ಮಾರ್ ತನ್‌ಬೀಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆ ಉತ್ತಮ ಸಾಧನೆ ಮಾಡಿದೆ. ಓವರೋಲ್ ವಿಭಾಗದಲ್ಲಿ ದ್ವಿತೀಯ ಸ್ಥಾನ, ಯುಪಿ, ಹೈಸ್ಕೂಲ್ ಅರಬಿ ಕಲೋತ್ಸವದಲ್ಲಿ ಚಾಂಪ್ಯನ್ ಆಗಿದೆ. ಸಮಗ್ರ ವಿಭಾಗದಲ್ಲಿ ೩೫೭ ಅಂಕ, ಯುಪಿ ಅರಬಿಯಲ್ಲಿ ೬೫ ಅಂಕ, ಹೈಸ್ಕೂಲ್ ಅರಬಿ ಕಲೋತ್ಸವದಲ್ಲಿ ೯೧ ಅಂಕ ಗಳಿಸಿದೆ. ಅಲ್ಲದೆ ವಿವಿಧ ಅರಬಿ ಕಲೋತ್ಸವ ಸ್ಪರ್ಧೆಗಳಲ್ಲಿ ಪ್ರಥಮ ಎ …

ಬೆಂಗಳೂರಿನಲ್ಲಿ ಬೈಕ್ ಅಪಘಾತ ಕಾಸರಗೋಡಿನ ಯುವಕ ಮೃತ್ಯು

ಕಾಸರಗೋಡು: ಬೆಂಗಳೂರಿನ ಸಿಲ್ಕ್ ಬೋರ್ಡ್ ಸೇತುವೆಯಲ್ಲಿ ಉಂಟಾದ ಬೈಕ್ ಅಪಘಾತದಲ್ಲಿ ಕಾಸರಗೋಡು ನಿವಾಸಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಕಾಸರಗೋಡು ತೆರುವತ್ತ್ ಶಂಸ್ಸ್ ವೀಟಿಲ್‌ನ ಮುಸಾದ್ ಎಂಬವರ ಪುತ್ರ ಮಜಾಸ್ (೩೪) ದಾರುಣವಾಗಿ ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾರೆ. ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ದುಡಿಯುತ್ತಿರುವ ಮಜಾಸ್ ನಿನ್ನೆ ಮುಂಜಾನೆ  ಮಡಿವಾಳದಿಂದಬೊಮ್ಮನ ಹಳ್ಳಿಯಲ್ಲಿರುವ ತನ್ನ ವಾಸಸ್ಥಳಕ್ಕೆ ಬೈಕ್‌ನಲ್ಲಿ ಹೋಗುವ ದಾರಿ ಮಧ್ಯೆ ಬೈಕ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಅಪಘಾತ ಸಂಭವಿಸಿದೆ. ಮೃತದೇಹವನ್ನು ಊರಿಗೆ ತರುವ ತಯಾರಿ ನಡೆಸಲಾಗುತ್ತಿದೆ. ಮೃತರು ಪತ್ನಿ ಮುಮ್ತಾಸ್ …

ನರ್ಸಿಂಗ್ ವಿದ್ಯಾರ್ಥಿನಿ ವಿಷ ಸೇವಿಸಿ ಮೃತ್ಯು

ಬದಿಯಡ್ಕ: ನರ್ಸಿಂಗ್ ವಿದ್ಯಾರ್ಥಿನಿಯೋರ್ವೆ ವಿಷ ಸೇವಿಸಿ ಮೃತಪಟ್ಟ ಘಟನೆ ನಡೆದಿದೆ. ನಾರಂಪಾಡಿ ಬಳಿಯ ಪಿಲಿಕೂಡ್ಲು ನಿವಾಸಿ  ಮಾಲಿಂಗ ನಾಯ್ಕ ಎಂಬವರ ಪುತ್ರಿ ಅಂಕಿತ (೧೮) ಮೃತಪಟ್ಟ ಯುವತಿ. ಈಕೆ ಕಾಸರಗೋಡಿನ ಸಂಸ್ಥೆಯೊಂದರಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದಳು. ಕಳೆದ ಶನಿವಾರ ಈಕೆ ಮನೆಯಲ್ಲಿ ವಿಷ ಸೇವಿಸಿದ್ದಳೆನ್ನಲಾಗಿದೆ. ಆದರೆ ಆ ಬಗ್ಗೆ ಮನೆಯವರಿಗೆ ತಿಳಿದಿರಲಿಲ್ಲ. ಸೋಮವಾರ ಆಕೆ ತೀವ್ರ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಕಾಸರಗೋಡಿನ ಆಸ್ಪತ್ರೆಗೆ ಸಾಗಿಸಿ ಬಳಿಕ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮಧ್ಯಾಹ್ನ …

ದೂರುದಾತೆಯ ನಗ್ನ ಚಿತ್ರಗಳನ್ನು ಆಗ್ರಹಿಸಿದ ಪೊಲೀಸ್ ಸಿಬ್ಬಂದಿ: ಕೇಸು ದಾಖಲು

ಕಣ್ಣೂರು: ದೂರುದಾತೆಗೆ ಫೋನ್ ಕರೆ ಮಾಡಿದ ಪೊಲೀಸ್ ಸಿಬ್ಬಂದಿಯೋರ್ವ ಆಕೆಯ ನಗ್ನ ಚಿತ್ರಗಳನ್ನು ಕಳುಹಿಸಿಕೊಡುವಂತೆ ಆಗ್ರಹಪಟ್ಟಿರುವುದಾಗಿ ದೂರಲಾಗಿದೆ. ಕಣ್ಣೂರು ರೂರಲ್ ಪೊಲೀಸ್ ಠಾಣೆಯ ದೂರು ಸ್ವೀಕಾರ ಸೆಲ್‌ನ ಸಿಬ್ಬಂದಿಯಾದ ಪಯ್ಯನ್ನೂರು ನಿವಾಸಿ ರಂಜಿತ್ ವಿರುದ್ಧ ಈ ದೂರುಂಟಾಗಿದೆ. ಕಣ್ಣೂರಿನ ಹಾಸ್ಟೆಲ್‌ವೊಂದರಲ್ಲಿ ವಾಸಿಸುತ್ತಿರುವ ೨೧ರ ಹರೆಯದ ಯುವತಿಯೋರ್ವೆ ತನ್ನ ತಂದೆ ವಿರುದ್ಧ ಕಣ್ಣೂರು ರರಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ತಂದೆಯಿಂದ ಉಂಟಾಗಿರುವ ಕಿರುಕುಳ ಬಗ್ಗೆ ಆಕೆ ದೂರಿನಲ್ಲಿ ತಿಳಿಸಿದ್ದಳು. ಈ ಬಗ್ಗೆ ತನಿಖೆಯ ಅಂಗವಾಗಿ ಮಾಹಿತಿ ಸಂಗ್ರಹಿಸಲೆಂದು …

ಮನೆಯಿಂದ ಹೊರಗೆ ಹೋದ ಯುವಕ ಬಾವಿಗೆ ಬಿದ್ದು ಮೃತ್ಯು

ಮುಳ್ಳೇರಿಯ: ಮನೆಯಿಂದ ಹೊರಗೆ ತೆರಳಿದ ಯುವಕನೋರ್ವ ಪಾಳುಬಾವಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ನಡೆದಿದೆ. ಬೆಳ್ಳೂರು ಪಂಚಾಯತ್ ವ್ಯಾಪ್ತಿಯ ಕಾಯರ್‌ಪದವು ಪಾಲೆಕೊಚ್ಚಿ ನಿವಾಸಿ ಐತ್ತಪ್ಪ ನಾಯ್ಕರ ಪುತ್ರ ಉಮೇಶ್ ಕುಮಾರ್ (೨೮) ಮೃತಪಟ್ಟ ದುರ್ದೈವಿ.  ಕೂಲಿ ಕಾರ್ಮಿಕನಾದ ಉಮೇಶ್ ಕುಮಾರ್ ನಿನ್ನೆ ಹಗಲು ಮನೆಯಲ್ಲಿದ್ದ ಇವರು ಸಂಜೆ ೫.೩೦ರ ವೇಳೆ ಮನೆಯಿಂದ ಹೊರಗೆ ತೆರಳಿದ್ದರೆನ್ನಲಾಗಿದೆ. ಅಲ್ಪ ಹೊತ್ತಿನಲ್ಲೇ ಅವರ ಹಿತ್ತಿಲಿನಲ್ಲಿ  ರುವ ಪಾಳು ಬಾವಿಗೆ ಬಿದ್ದ ಶಬ್ದ ಕೇಳಿಬಂದಿದೆ. ಈ ಬಗ್ಗೆ ತಾಯಿ ಸ್ಥಳೀಯರಲ್ಲಿ ತಿಳಿಸಿದ್ದಾರೆ. ಕೂಡಲೇ …

ಕಣ್ಣೂರು-ಕೊಡಗು ಗಡಿಯಲ್ಲಿ ಪೊಲೀಸ್ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ

ಕಣ್ಣೂರು: ಕೇರಳ ಕರ್ನಾಟಕದ ಕಣ್ಣೂರು ಕೊಡಗು ಗಡಿ ಪ್ರದೇಶದಲ್ಲಿ ಕೇರಳ ನಕ್ಸಲ್ ನಿಗ್ರಹಪಡೆ (ತಂಡರ್ ಬೋಲ್ಟ್) ಮತ್ತು ನಕ್ಸಲರ ನಡುವೆ ನಿನ್ನೆ ರಾತ್ರಿ ಗುಂಡಿನ ಚಕಮಕಿ ನಡೆದಿದ್ದು, ಅದರಲ್ಲಿ ಓರ್ವ ನಕ್ಸಲ್ ಗಾಯಗೊಂ ಡಿದ್ದಾನೆ. ಆ ವೇಳೆ ನಕ್ಸಲ್ ಗುಂಪಿಗೆ ಸೇರಿದ ಆಂಧ್ರಪ್ರದೇಶದ  ಲತ ಮತ್ತು ತಮಿಳುನಾಡಿನವಳೆಂದು ಹೇಳಲಾಗುತ್ತಿರುವ ವನಜಾಕ್ಷಿ ಎಂಬವರು ತಪ್ಪಿಸಿಕೊಂಡಿದ್ದಾರೆ. ಅರಣ್ಯದಿಂದ ತಪ್ಪಿಸಿಕೊಂಡ ಈ ಇಬ್ಬರು ಬಸ್‌ನಲ್ಲಿ  ರೈಲು ನಿಲ್ದಾಣಕ್ಕೆ ಬಂದು ಅಲ್ಲಿಂದ ರೈಲಿನಲ್ಲಿ ಪ್ರಯಾಣಿಸುವ ಸಾಧ್ಯತೆಯಿದೆಯೆಂಬ ಮಾಹಿತಿ ಪೊಲೀಸರಿಗೆ ಲಭಿಸಿದ್ದು ಅದರಿಂದ ಅವರ …