ಬಿ.ಎಂ.ಎಸ್ ಮೀಂಜ ಪಂಚಾಯತ್ ಸಮಿತಿಯಿಂದ ಪಂಚಾಯತ್ ಕಚೇರಿ ಧರಣಿ

ಮಂಜೇಶ್ವರ: ಕಳೆದ ಕೆಲವು ತಿಂಗಳಿನಿAದ ಕಾರ್ಮಿಕರಿಗೆ ಪಿಂಚಣಿ ಹಾಗೂ ಇತರ ಯಾವುದೇ ಕ್ಷೇಮನಿಧಿ ಸೌಲಭ್ಯಗಳನ್ನು ನೀಡದೆ ಕಾರ್ಮಿಕರನ್ನು ಅವಗಣಿಸುತ್ತಿರುವ ಕೇರಳ ಸರಕಾರದ ಕಾರ್ಮಿಕ ವಿರೋಧಿ ನೀತಿಗೆದುರಾಗಿ ಬಿ.ಎಂ.ಎಸ್ ಮಿಂಜ ಪಂಚಾಯತ್ ಸಮಿತಿ ವತಿಯಿಂದ ಮಿಂಜ ಪಂಚಾಯತ್ ಆಫೀಸ್ ಧರಣಿ ನಡೆಸಲಾಯಿತು. ಸಮಿತಿ ಅಧ್ಯಕ್ಷÀ ರವಿಚಂದ್ರ ಶೆಟ್ಟಿ ಪದೆಂಜಿ ಬೈಲ್ ಅಧ್ಯಕ್ಷತೆ ವಹಿಸಿದ್ದು, ಬಿ.ಎಂ.ಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ. ಉದ್ಘಾಟಿಸಿದರು. ನಿತ್ಯೋಪಯೋಗಿ ಸಾವiಗ್ರಿಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಿಸಿ ಬಡ ಜನರನ್ನು ಉಪವಾಸಕ್ಕೆ ತಳ್ಳುವ ಸರಕಾರದ …

ಬದಿಯಡ್ಕ ಮಂಡಲ ಕಾಂಗ್ರೆಸ್ ನೂತನ ಕಚೇರಿ ಉದ್ಘಾಟನೆ

ಬದಿಯಡ್ಕ: ಮಂಡಲ ಸಮಿತಿಯ ನೂತನ ಕಚೇರಿಯನ್ನು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸೋಮಶೇಖರ್ ಎಣ್ಮ ಕಜೆ ಉದ್ಘಾಟಿಸಿದರು. ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಅತೀ ಹೆಚ್ಚು ಸ್ಥಾನ ಗಳಿಸಲು ಕೆಲಸ ಮಾಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು. ಮಂಡಲ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು. ಕರ್ಷಕ ಕಾಂಗ್ರೆಸ್ ನೇತಾರ ಚಂದ್ರಹಾಸ ರೈ, ಕರ್ಷಕ ಕಾಂಗ್ರೆಸ್ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ತಿರುಪತಿ ಕುಮಾರ್ ಭಟ್, ಮಂಡಲ ಉಪಾ ಧ್ಯಕ್ಷ ಜಗನ್ನಾಥ ರೈ , ಐಎನ್‌ಟಿಯುಸಿ ಮಂಡಲ ಅಧ್ಯಕ್ಷ ರಾಮಕೃಷ್ಣ, ಶಾಫಿ ಗೋಳಿಯಡ್ಕ …

ವಿಶ್ವಹಿಂದೂ ಪರಿಷತ್ ವತಿಯಿಂದ ಸಾಮೂಹಿಕ ಗೋಪೂಜೆ

ಕಾಸರಗೋಡು: ವಿಶ್ವಹಿಂದೂ ಪರಿಷತ್ ವತಿಯಿಂದ ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಸಾಮೂಹಿಕ ಗೋಪೂಜೆ ನಡೆಯಿತು. ಇದರಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕಾಸರಗೋಡು ನಗರಸಮಿತಿ ಅಧ್ಯಕ್ಷ ಕಮಲೇಶನ್ ಅಧ್ಯಕ್ಷತೆ ವಹಿಸಿದರು. ಮಾತೃಮಂಡಳಿ ಅಧ್ಯಕ್ಷೆ ಶಾರದ ಉಪಸ್ಥಿತರಿದ್ದರು. ಧಾರ್ಮಿಕ ಮುಂದಾಳು ಕೆ.ಎನ್. ವೆಂಕಟ್ರಮಣ ಹೊಳ್ಳ ಗೋವಿನ ಮಹತ್ವದ ಬಗ್ಗೆ ವಿವರಿಸಿದರು. ವಿ.ಹಿಂ.ಪ ನೇತಾರ ರಾಮಕೃಷ್ಣ ಹೊಳ್ಳ ಸ್ವಾಗತಿಸಿದರು. ಪೇಟೆ ಶ್ರೀ ವೆಂಕಟ್ರಮಣ ಬಾಲಗೋಕುಲದ ಮಕ್ಕಳು ಪ್ರಾರ್ಥನೆ ಹಾಡಿದರು. ಸಮಿತಿ ಸದಸ್ಯರಾದ ಕಿಶೋರ್ ಎಸ್‌ವಿಟಿ ವಂದಿಸಿದರು. ವಿ.ಎಚ್.ಪಿ ಕೋಶಾಧಿಕಾರಿ ಲಕ್ಷ್ಮಿಕಾಂತ ನಿರೂಪಿಸಿದರು. …

ಮಕ್ಕಳ ದಿನಾಚರಣೆ ಪ್ರಯುಕ್ತ ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್‌ನಿಂದ ವಿವಿಧ ಸ್ಪರ್ಧೆಗಳು

ಕಾಸರಗೋಡು: ಆಲ್‌ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇ ಷನ್ ವೆಸ್ಟ್ ಯೂನಿಟ್ ಕಾಸರ ಗೋಡು ಇದರ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ಕಾಸರಗೋಡು ವಲಯ ಸದಸ್ಯರ ೧ ನೇ ತರಗತಿಯಿಂದ ೪ ನೇ ತರಗತಿಯ ಮಕ್ಕಳಿಗೆ ಚಿತ್ರರಚನೆ ಸ್ಪರ್ಧೆಯನ್ನು ಆಯೋಜಿಸಲಾಯಿತು. ಕಾಸರಗೋಡು ಶ್ರೀ ವಿಶ್ವಕರ್ಮ ಭಜನಾ ಮಂದಿರದಲ್ಲಿ ನಡೆದ ಕಾರ್ಯಕ್ರದಲ್ಲಿ ಯೂನಿಟ್ ಅಧ್ಯಕ್ಷ ಮೈಂದಪ್ಪ ಕೆ.ಎಂ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಧೂರು ಪಂಚಾಯತ್ ಸದಸ್ಯೆ ಜನನಿ ಅನಿಲ್, ಎಕೆಪಿಎ ಜಿಲ್ಲಾ ಸಮಿತಿ ಸದಸ್ಯ ರತೀಶ್, ಎಕೆಪಿಎ ಕಾಸರ ಗೋಡು ವಲಯ …

ಜುಲೈ ತಿಂಗಳ ಸಾಮಾಜಿಕ ಪಿಂಚಣಿ ವಿತರಣೆ ನ. ೧೬ರಿಂದ

ತಿರುವನಂತಪುರ: ಜುಲೈ ತಿಂಗಳ ಸಾಮಾಜಿಕ ಪಿಂಚಣಿ ವಿತರಣೆಗಾಗಿ ೯೦೦ ಕೋಟಿ ರೂ. ಬಿಡುಗಡೆಗೊಳಿ ಸಲಾಗುವುದೆಂದು ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲನ್ ತಿಳಿಸಿದ್ದಾರೆ. ನವಂಬರ್ ೧೬ರಿಂದ ಪಿಂಚಣಿ ವಿತರಿಸಲಾಗುವುದು. ಇದರಂತೆ ಪಿಂಚಣಿದಾರರಿಗೆ ತಲಾ ೧೬೦೦ ರೂ.ನಂತೆ ಲಭಿಸಲಿದೆ. ಪಿಂಚಣಿಗಾಗಿ ಮಸ್ಟರಿಂಗ್ ನಡೆಸಿದವರು, ನಿಧನಹೊಂದಿದ ಪಿಂಚಣಿದಾರರು, ಮರು ವಿವಾಹವಾಗಿಲ್ಲವೆಂದು ಸಾಬೀತುಪಡಿಸುವ ಸರ್ಟಿಫಿಕೇಟ್ ಹಾಜರುಪಡಿಸದ ವಿಧವೆಯರಿಗೆ ಜುಲೈಯಿಂದ ಪಿಂಚಣಿ ಲಭಿಸದು. ಇದರಿಂದಾಗಿ ರಾಜ್ಯದಲ್ಲಿ ಒಟ್ಟು ಏಳು ಲಕ್ಷದಷ್ಟು ಮಂದಿ ಪಿಂಚಣಿ ಸವಲತ್ತಿನಿಂದ ಹೊರಬೀಳಲಿದ್ದಾರೆಂದು ಸರಕಾರ ಲೆಕ್ಕಹಾಕಿದೆ.  ಜುಲೈ ತಿಂಗಳ ಪಿಂಚಣಿಯನ್ನು ಈ …

ಅನಂತಪುರ ಕ್ಷೇತ್ರದಲ್ಲಿ ಮೊಸಳೆ ಪ್ರತ್ಯಕ್ಷ ಕ್ಷೇತ್ರಕ್ಕೆ ತಲುಪುತ್ತಿದೆ ಭಕ್ತ ಸಮೂಹ

ಕುಂಬಳೆ: ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ಸರೋವರ ಕ್ಷೇತ್ರದಲ್ಲಿ  ಮತ್ತೆ ಮೊಸಳೆ ಪ್ರತ್ಯಕ್ಷ ವಾಗಿರುವುದು ಭಕ್ತರಲ್ಲಿ ದೀಪಾವಳಿ ಹಬ್ಬಕ್ಕೆ ಇಮ್ಮಡಿ ಪ್ರಭೆ ಮೂಡಿಸಿದೆ. ಶನಿವಾರ ಅಪರಾಹ್ನ ಕ್ಷೇತ್ರದ ಪಶ್ಚಿಮ ಭಾಗದಲ್ಲಿ ಮೊಸಳೆ ಪ್ರತ್ಯಕ್ಷಗೊಂಡಿದೆ. ಇದನ್ನು ಅರಿತು ನೂರಾರು ಮಂದಿ ಕ್ಷೇತ್ರಕ್ಕೆ ತಲುಪಿದ್ದಾರೆ. ಆದರೆ ಭಕ್ತಜನ ಸಂದಣಿ ಹೆಚ್ಚಾದಾಗ ಮೊಸಳೆ ಗುಹೆಯೊಗೆ ತೆರಳಿದೆ ಎನ್ನಲಾಗಿದೆ. ಮೊನ್ನೆ ಸರೋವರದಲ್ಲಿ ಕಂಡು ಬಂದ ಮೊಸಳೆ ಸಾಮಾನ್ಯ ಐದು ಅಡಿ ಯಷ್ಟು ಉದ್ದವಿದೆ ಎಂದು ಅಂದಾಜಿ ಸಲಾಗಿದೆ. ಮೊಸಳೆ ಪ್ರತ್ಯಕ್ಷವಾದ ಬಗ್ಗೆ ಕ್ಷೇತ್ರ …

ಕೋಳಿ ಅಂಕ ಕೇಂದ್ರಕ್ಕೆ ಪೊಲೀಸ್ ದಾಳಿ ೧೮ ಕೋಳಿಗಳ ಸಹಿತ ೮ ಮಂದಿ ಸೆರೆ

ಕಾಸರಗೋಡು: ಬಂದಡ್ಕ ಪೂಡಂಗಲ್ಲು ಕಾಲನಿಯಲ್ಲಿ ಕೋಳಿಯಂಕ ನಡೆಯುತ್ತಿದ್ದ ಕೇಂದ್ರಕ್ಕೆ ಬೇಡಗಂ ಪೊಲೀಸರು ನಿನ್ನೆ ದಾಳಿ ನಡೆಸಿ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಕೋಳಿ ಅಂಕಕ್ಕಾಗಿ ಉಪಯೋ ಗಿಸಲಾಗುತ್ತಿದ್ದ ೧೮ ಕೋಳಿಗಳು ಮತ್ತು ೨೦೩೦ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಪೂಡಂಗಲ್ಲು ಪುಷ್ಪಾಕರನ್ (೫೨), ಪಳ್ಳತ್ತುಂಗಾಲು ಮೋಹನನ್ (೫೫), ಶ್ರೀಜಿತ್ ಪಿ.ಕೆ. (೨೭), ಪಾಣತ್ತೂರಿನ ದೀಪಕ್ (೩೦), ಮಾನಿಮೂ ಲೆಯ ಪ್ರಮೋದ್ ಕುಮಾರ್ (೪೬), ಚಾಮಕೊಚ್ಚಿಯ ಸಿ.ಕೆ. ರಾಘವನ್ (೫೦), ಬಂದಡ್ಕದ  ಸುಧೀಶ (೨೫) ಮತ್ತು ಮೋಹನ್ ಕುಮಾರ್ (೨೫) ಎಂಬವರು …

ಶೆಡ್‌ನಿಂದ ಹಿಂದಕ್ಕೆ ಚಲಾಯಿಸಿದ ಕಾರಿನಡಿ ಸಿಲುಕಿ ಒಂದೂವರೆ ವರ್ಷದ ಮಗು ಮೃತ್ಯು

ಉಪ್ಪಳ: ಶೆಡ್‌ನಿಂದ ಕಾರನ್ನು ಹಿಂದಕ್ಕೆ ಚಲಾಯಿಸಿದಾಗ ಒಂ ದೂವರೆ ವರ್ಷ ಪ್ರಾಯದ ಮಗು ಕಾರಿನಡಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಸೋಂಕಾಲು ಕೊಡಂಗೆ ರಸ್ತೆಯ ಕೂಡಂಬೈಲು ನಿವಾಸಿಯೂ ಗಲ್ಫ್ ಉದ್ಯೋಗಿಯಾಗಿರುವ ನಿಜಾರ್ ಎಂಬವರ ಪುತ್ರ ಮಸ್ತುಜಾಸಿದ್ ಮೃತ ಪಟ್ಟ ಮಗುವಾಗಿದೆ. ನಿನ್ನೆ ಸಂಜೆ ೪.೩೦ರ ವೇಳೆ ಈ ಘಟನೆ ನಡೆದಿದೆ. ಮನೆಯ ಶೆಡ್‌ನಿಂದ ನಿಜಾರ್‌ರ ಸಹೋದರ ತೌಸೀಫ್ ಕಾರನ್ನು ಹಿಂದಕ್ಕೆ ತೆಗೆಯುತ್ತಿದ್ದಾಗ ಹಿಂಬದಿಯಲ್ಲಿ ಮಗು ನಿಂತಿತ್ತೆನ್ನ ಲಾಗಿದೆ. ಈ ಬಗ್ಗೆ ತಿಳಿಯದೆ ಕಾರನ್ನು ಹಿಂದಕ್ಕೆ ಚಲಾಯಿಸಿದಾಗ …

ಕಾಂಗ್ರೆಸ್‌ನ ಪ್ಯಾಲೆಸ್ತೀನ್ ಐಕ್ಯದಾರ್ಢ್ಯ ರ‍್ಯಾಲಿಯಲ್ಲಿ ಭಾಗವಹಿಸಲು ಶಶಿ ತರೂರ್‌ಗೆ ಆಹ್ವಾನವಿಲ್ಲ

ಕಲ್ಲಿಕೋಟೆ: ಪ್ಯಾಲೆಸ್ತೀನ್‌ಗೆ ಐಕ್ಯದಾರ್ಢ್ಯ ವ್ಯಕ್ತಪಡಿಸುವ ನಿಟ್ಟಿನಲ್ಲಿ  ಕಾಂಗ್ರೆಸ್‌ನ ರಾಜ್ಯ ಘಟಕದ ನೇತೃತ್ವದಲ್ಲಿ ನ. ೨೩ರಂದು  ಕಲ್ಲಿಕೋಟೆ ಕಡಪ್ಪುರದಲ್ಲಿ ಆಯೋಜಿಸಲಾಗಿರುವ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಅದೇ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ತಿರುವಂತಪುರ ಸಂಸದರೂ ಆಗಿರುವ ಶಶಿ ತರೂರ್‌ಗೆ ಈತನಕ ಆಹ್ವಾನ ನೀಡಲಾಗಿಲ್ಲ. ಈ ವಿಷಯ  ಕಾಂಗ್ರೆಸ್‌ನೊಳಗೆ ಭಾರೀ ಅನಿಶ್ಚಿತತೆಗೆ ದಾರಿಮಾಡಿಕೊಟ್ಟಿದೆ. ರ‍್ಯಾಲಿಯಲ್ಲಿ ಭಾಗವಹಿಸುವ ಬಗ್ಗೆ ನನಗೆ ಈತನಕ ಆಹ್ವಾನ ಲಭಿಸಿಲ್ಲ. ಅದೇ ದಿನ ತನ್ನ ಸಹೋದರಿ ಪುತ್ರನ ಮದುವೆಯೂ ನಡೆಯಲಿದೆ.  ಅದರಲ್ಲೂ ನನಗೆ ಭಾಗವಹಿಸಬೇಕಾಗಿದೆ. ಆದರೆ …

ಬೈಕ್ ಕಳವುಗೈದು ಕಳ್ಳರು ಹೆಲ್ಮೆಟ್ ಧರಿಸದೆ ಪರಾರಿ: ಕಾನೂನು ಉಲ್ಲಂಘನೆ ಆರೋಪಿಸಿ ಮಾಲಕನಿಗೆ ದಂಡ ಹೇರಿ ನೋಟೀಸು

ಹೊಸದುರ್ಗ: ಕಳವುಗೈದ ಬೈಕ್‌ನಲ್ಲಿ ಕಳ್ಳರು ಪರಾರಿಯಾಗಿದ್ದು, ಇದೇ ವೇಳೆ ಸವಾರರು ಹೆಲ್ಮೆಟ್ ಧರಿಸಿಲ್ಲವೆಂಬ ಕಾರಣ ನೀಡಿ ಅದರ ಮಾಲಕನಿಗೆ ಮೋಟಾರು ವಾಹನ ಇಲಾಖೆ ೯೫೦೦ರೂಪಾಯಿ  ದಂಡ ಹೇರಿದ ನೋಟೀಸು ಕಳುಹಿಸಿದ ಘಟನೆ ನಡೆದಿದೆ. ಬಿಎಂಎಸ್ ಮಡಿಕೈ ವಲಯ ಉಪಾಧ್ಯಕ್ಷರೂ, ಹೊಸದುರ್ಗದಲ್ಲಿ ತಲೆಹೊರೆ ಕಾರ್ಮಿಕನಾಗಿರುವ  ಎಚ್ಚಿಕಾನಂ ಚೆಂಬಿಲೋಡ್ ನಿವಾಸಿ ಕೆ. ಭಾಸ್ಕರನ್‌ರ ಬೈಕ್ ಕಳವಿಗೀಡಾಗಿದೆ.   ಬೈಕ್‌ನ್ನು ಕಳ್ಳರು ಹೊಸದುರ್ಗದಿಂದ ಕಲ್ಲಿಕೋಟೆ ವರೆಗೆ ಹೆಲ್ಮೆಟ್ ಧರಿಸದೆ ಕೊಂಡೊಯ್ದಿದ್ದಾರೆ. ಇದು ವಿವಿಧೆಡೆಗಳ ಸಿಸಿ ಕ್ಯಾಮರಾಗಳಲ್ಲಿ  ಸೆರೆಯಾಗಿದೆ. ಇದರಿಂದ ಬೈಕ್‌ನ ಮಾಲಕನಾದ ಭಾಸ್ಕರನ್ …