ಮೀಂಜ, ಪೈವಳಿಕೆಯಲ್ಲಿ ಹರಡುತ್ತಿದೆ ಹಳದಿಕಾಮಾಲೆ: ೫೪ ಮಂದಿಯಲ್ಲಿ ರೋಗ ಪತ್ತೆ: ತಜ್ಞರ ತಂಡ ಇಂದು ಆಗಮನ

ಮಂಜೇಶ್ವರ: ಮೀಂಜ ಮತ್ತು ಪೈವಳಿಕೆ ಪಂಚಾಯತ್‌ಗೊಳಪಟ್ಟ ಹಲವು ಪ್ರದೇಶಗಳಲ್ಲಿ ಹಳದಿ ಕಾಮಾಲೆ ಹರಡುತ್ತಿದ್ದು, ಮಕ್ಕಳೂ ಸೇರಿದಂತೆ ೫೪ ಮಂದಿಯಲ್ಲಿ ಈ ಕಾಯಿಲೆ ದೃಢೀಕರಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಎರಡೂ ಪಂಚಾಯತ್‌ಗಳ ಲ್ಲಿರುವ ಸರಕಾರಿ ಆರೋಗ್ಯ ಕೇಂದ್ರ ಗಳಲ್ಲಿ ಅಗತ್ಯದಷ್ಟು ವೈದ್ಯರುಗಳಾಗಲೀ, ಇತರ ಸಿಬ್ಬಂದಿಗಳಾಗಲೀ ಇಲ್ಲ. ಆದುದರಿಂದ ಚಿಕಿತ್ಸೆಗಾಗಿ ದುಂದುವೆಚ್ಚ ಮಾಡಿ ಖಾಸಗಿ ಆಸ್ಪತ್ರೆಗಳನ್ನು ಆಶ್ರಯಿಸಬೇಕಾದ ಸ್ಥಿತಿ ನಿರ್ಮಾ ಣವಾಗಿದೆ ಎಂದು ಈ ಪ್ರದೇಶದ ಜನರು ಹೇಳುತ್ತಿದ್ದಾರೆ. ಬಾಯಾರು ಕುಟುಂಬ ಆರೋಗ್ಯ ಕೇಂದ್ರದಲ್ಲಂತೂ  ವೈದ್ಯರಿಲ್ಲ. ಇಲ್ಲಿ ಈ …

ಅಪಘಾತಕ್ಕೀಡಾದ ಬೈಕ್‌ನಿಂದ ರಸ್ತೆಗೆ ಬಿದ್ದ ಸವಾರನ ಮೇಲೆ ಸಂಚರಿಸಿದ ಲಾರಿ: ವ್ಯಕ್ತಿಯ ಸಾವಿನಿಂದ ಶೋಕಸಾಗರ

ಮಂಜೇಶ್ವರ: ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಬೈಕ್‌ನಿಂದ ರಸ್ತೆಗೆಸೆಯಲ್ಪಟ್ಟ ಸವಾರನ ದೇಹದ ಮೇಲೆ ಲಾರಿ ಸಂಚರಿಸಿ ವ್ಯಕ್ತಿ ಮೃತಪಟ್ಟ ದಾರುಣ ಘಟನೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಜೇಶ್ವರದ ಕರೋಡ  ಮಸೀದಿ ಮುಂಭಾಗದಲ್ಲಿ ಮೊನ್ನೆ ಸಂಜೆ ಈ ಅಪಘಾತ ಸಂಭವಿಸಿತ್ತು. ಹೊಸಬೆಟ್ಟು ಕೊಪ್ಪಳ ಕಡಪ್ಪುರ ನಿವಾಸಿ, ಮೀನು ಕಾರ್ಮಿಕನಾದ ಅಬ್ದುಲ್ ಖಾದರ್ (೭೧) ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇವರು ಬೈಕ್‌ನಲ್ಲಿ ಕುಂಜತ್ತೂರು ಭಾಗದಿಂದ ಉಪ್ಪಳ ಕಡೆಗೆ ನಿರ್ಮಾಣ ಹಂತದಲ್ಲಿರುವ ಸರ್ವೀಸ್ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಮಂಜೇಶ್ವರದಲ್ಲಿ ಲಾರಿಗೆ …

ಕುಂಬಳೆಯಲ್ಲಿ ಯುವಕನ ವಿರುದ್ಧ ಪೋಕ್ಸೋ ಕೇಸು

ಕುಂಬಳೆ: ಶಾಲೆ ಬಿಟ್ಟು ನಡೆದು ಹೋಗು ತ್ತಿದ್ದ ೧೬ರ ಹರೆಯದ ವಿದ್ಯಾರ್ಥಿನಿಯ ಕೈ ಹಿಡಿದೆಳೆದ ಆರೋಪದಂತೆ ೨೫ರ ಹರೆಯದ ಯುವಕನ ವಿರುದ್ಧ ಕುಂಬಳೆ ಪೊಲೀಸರು ಪೋಕ್ಸೋ ಕೇಸು ದಾಖಲಿಸಿ ಕೊಂಡಿ ದ್ದಾರೆ. ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಗಲ್ಫ್ ಉದ್ಯೋಗಿ ಮನೆಯಿಂದ ಕಳವಿಗೆ ಯತ್ನ

ಕುಂಬಳೆ: ಗಲ್ಫ್‌ಉದ್ಯೋಗಿಯ ಮನೆಯಲ್ಲಿ ಕಳ್ಳರು ಕಳವಿಗೆ ಯತ್ನಿಸಿ ವಿಫಲಗೊಂಡ ಘಟನೆ ನಡೆದಿದೆ. ಮೊಗ್ರಾಲ್‌ನಲ್ಲಿ ಲೀಗ್ ಕಚೇರಿ ಬಳಿಯ ಪಾರಿಸ ಅಬ್ದುಲ್ಲ ಎಂಬವರ ಮನೆಯಿಂದ ಕಳವಿಗೆ  ಯತ್ನ ನಡೆದಿದೆ. ಪಾರಿಸ ಅಬ್ದುಲ್ಲ  ಕುಟುಂಬ ಸಮೇತ ಗಲ್ಫ್‌ನಲ್ಲಿದ್ದಾರೆ. ಇದರಿಂದ ಮನೆಯಲ್ಲಿ ಬೆಲೆಬಾಳುವ ಯಾವುದೇ ಸಾಮಗ್ರಿಗಳನ್ನು ಇರಿಸಲಿಲ್ಲ.   ಅಲ್ಲದೆ ಈ ಮನೆಗೆ ಬೀಗ ಜಡಿಯಲಾಗಿದೆ. ಮೊನ್ನೆ ಈ ಮನೆಯ ಮುಂಭಾಗದ ಬಾಗಿಲು ಮುರಿದ ಸ್ಥಿತಿಯಲ್ಲಿ ಕಂಡುಬಂದಿದೆ. ಈಬಗ್ಗೆ ಪಾರಿಸ ಅಬ್ದುಲ್ಲರ ಸಂಬಂಧಿಕ ಮುಹಮ್ಮದ್ ಸಿದ್ದಿಕ್ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದರಂತೆ …

ಕಣ್ಣೂರಿನಲ್ಲೂ  ಮಾವೋವಾದಿ ಮತ್ತು ತಂಡರ್ ಬೋಲ್ಟ್ ಮಧ್ಯೆ ಗುಂಡಿನ ಚಕಮಕಿ

ಕಣ್ಣೂರು: ಮಾನಂತವಾಡಿ ದಟ್ಟಾರಣ್ಯದಲ್ಲಿ ನ. ೭ರಂದು ರಾತ್ರಿ ನಡೆದ ಗುಂಡಿನ ಚಕಮಕಿಯ ಬೆನ್ನಲ್ಲೇ ಕಣ್ಣೂರು ಜಿಲ್ಲೆಯ   ಅಧಿಕುನ್ನು ದಟ್ಟಾರಣ್ಯದಲ್ಲಿ ಇಂದು ಮುಂಜಾನೆ ಮಾವೋವಾದಿಗಳು ಮತ್ತು ಪೊಲೀಸ್ ಇಲಾಖೆಯ ತಂಡರ್ ಬೋಲ್ಟ್ ಪಡೆ ಮಧ್ಯೆ ತೀವ್ರ ಗುಂಡಿನ ಚಕಮಕಿ ನಡೆದಿದೆ.  ಆದರೆ ಈ ವಿಷಯದ ಬಗ್ಗೆ ಹೆಚ್ಚಿನ  ಮಾಹಿತಿ ಹೊರಬಂದಿಲ್ಲ. ಮಾನಂv ವಾಡಿ ಯಲ್ಲಿ ನಡೆದ  ಗುಂಡಿನ ಚಕಮಕಿ ಯಲ್ಲಿ  ಓರ್ವ ಮಾವೋ ವಾದಿಗೆ ಗುಂಡು ತಗಲಿತ್ತು. ಅಲ್ಲಿದ್ದ ಮೂವರು ಮಾವೋವಾದಿಗಳು ಪರಾರಿಯಾಗಿ ದ್ದರು. ಮಾತ್ರವಲ್ಲ ಮಾವೋವಾದಿಗ ಳಾದ …

ಸಿಪಿಎಂ ಮಾನಿಪ್ಪಾಡಿ ಶಾಖಾ ಸಮಿತಿ ಸಭೆ: ನವ ಕೇರಳ ಸಭೆ ಯಶಸ್ವಿಗೆ ನಿರ್ಧಾರ

ಪೈವಳಿಕೆ: ನವಂಬರ್ ೧೮ರಂದು ಮಂಜೇಶ್ವರ ವಿಧಾನಸಭಾ ಮಂಡಲದ ಪೈವಳಿಕೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಚಿವರು ಭಾಗವಹಿಸುವ ನವ ಕೇರಳ ಸಭೆಯನ್ನು ಯಶಸ್ವಿಗೊಳಿಸಲು ಸಿಪಿಎಂ ಮಾನಿಪ್ಪಾಡಿ ಶಾಖಾ ಸಮಿತಿ ಸಭೆಯಲ್ಲಿ ತೀರ್ಮಾನಿಸ ಲಾಗಿದೆ. ಈ ಸಂಬಂಧವಾಗಿ ಸೇರಿದ ಮಾನಿಪ್ಪಾಡಿ ಶಾಖಾ ಸಮಿತಿ ಸಭೆಯಲ್ಲಿ ಮಾಧವ ಮಾನಿಪ್ಪಾಡಿ ಅಧ್ಯಕ್ಷತೆ ವಹಿಸಿದರು. ಚಂದ್ರ ನಾಕ್ ಮಾನಿಪ್ಪಾಡಿ ಪಕ್ಷದ ತೀರ್ಮಾನಗಳನ್ನು ವಿವರಿಸಿದರು. ಉದಯ ಕುಮಾರ್ ಸ್ವಾಗತಿಸಿ, ವಿನೋದ್ ಕುಮಾರ್ ವಂದಿಸಿದರು.

ಬೇಕರಿಗೆ ನುಗ್ಗಿ ಹಲ್ಲೆ:  ೫೦೦೦ ರೂ.ಗಳ ನಷ್ಟ; ನಾಲ್ಕು ಮಂದಿ ವಿರುದ್ಧ ಕೇಸು

ಕಾಸರಗೋಡು:  ಬೇಕರಿಗೆ ನುಗ್ಗಿ ತಂಡವೊಂದು ಅದರ ಪಾಲುದಾರನ ಮೇಲೆ ಹಲ್ಲೆ ನಡೆಸಿ, ಬೇಕರಿ ಸಾಮಗ್ರಿಗಳನ್ನು ಹೊಡೆದು ನಾಶಗೊಳಿಸಿ ಅದರಿಂದ ೫೦,೦೦೦ ರೂ.ಗಳ ನಷ್ಟ ಉಂಟಾಗಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ನಾಲ್ವರ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೇಕರಿಯ ಪಾಲುದಾರ ಚೆಂಗಳ ಬೇರ್ಕದ ಅಬ್ದುಲ್ ಹ್ಯಾರಿಸ್ ಬಿ (೪೮) ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಚಾಲದ ತನ್‌ಶೀರ್, ಟಿಪ್ಪುನಗರದ ಸಿನಾನ್, ಚಾಲದ ಶಾಹೀದ್ ಮತ್ತು ಕಂಡಲ್ಲಿ ಗುರುತು ಹಚ್ಚಲು ಸಾಧ್ಯವಾಗುವ ಇನ್ನೋರ್ವ ಸೇರಿದಂತೆ …

ದೀಪಾವಳಿಯ ಹೊಂಬೆಳಕಿನಲ್ಲಿ ಕಾಸರಗೋಡು ಕನ್ನಡ ರಾಜ್ಯೋತ್ಸವ: ಮಹಾಲಿಂಗೇಶ್ವರ ಭಟ್‌ರಿಗೆ ಪ್ರಶಸ್ತಿ ಪ್ರದಾನ

ಕಾಸರಗೋಡು:  ಕನ್ನಡ ನಮ್ಮ ಮಾತೃಭಾಷೆ. ನಮ್ಮ ಬದುಕು ಮತ್ತು ಸಂಸ್ಕೃತಿ. ಕನ್ನಡಕ್ಕೆ ಅವಮಾನವಾದಾಗ ರಾಜಕೀಯ ಪಕ್ಷಭೇದ ಮರೆತು ಎಲ್ಲರೂ ಒಂದಾಗಬೇಕು. ಕನ್ನಡವನ್ನು ಉಳಿಸಬೇಕೆಂಬ ಚಿಂತನೆ ಜಾಗೃತವಾ ಗಬೇಕು ಎಂಬುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಹೇಳಿದರು. ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಆಶ್ರಯದಲ್ಲಿ ನಡೆದ ಕಾಸ ರಗೋಡು ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರದ ಅಭಿವೃದ್ಧಿಗೆ ಧರ್ಮ ಮತ್ತು ರಾಜಕೀಯ ಎರಡೂ ಬೇಕು. ಆದರೆ ಧರ್ಮ ಎಂಬ ಚಕ್ರದೊಳಗೆ ರಾಜ ಕೀಯ …

ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತಿ ಕ್ಷೇತ್ರದಲ್ಲಿ ಗರ್ಭಗುಡಿಗೆ ಶಿಲಾನ್ಯಾಸ

ಮಂಜೇಶ್ವರ: ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರದಲ್ಲಿ ಶ್ರೀ ಪಾಡಾಂಗರೆ ಭಗವತೀ, ವೀರಪುತ್ರ ದೈವದ ಗರ್ಭಗುಡಿಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಈ ಬಗ್ರಿಘಿ ವ್ಣಿs್ರ¥್ಣ ಸಭೆಯನ್ನು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಶ್ರೀ ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎಂ. ಗೋಪಾಲ ಬಂದ್ಯೋಡು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರದ ತಂತ್ರಿವರ್ಯ ಮೂಡುಮನೆ ಅಶೋಕ ರಾಮಚಂದ್ರ ಪದಕಣ್ಣಾಯ, ಕೇಶವ ಕಾರ್ನವರ್, ನಾರಾಯಣ ಭಗವತೀ ಪೂಜಾರಿ, ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಉದ್ಯಮಿ ಸದಾಶಿವ ಶೆಟ್ಟಿ …

ಚಿಪ್ಪಾರು: ಸಂಚಾರ ಸಮಸ್ಯೆಯಾಗಿದ್ದ ರಸ್ತೆಯಲ್ಲಿ ಸಿಪಿಎಂ ಶ್ರಮದಾನ; ಪೊದೆ ತೆರವು

ಪೈವಳಿಕೆ: ಲಾಲ್‌ಬಾಗ್-ಕುರುಡ ಪದವು ರಸ್ತೆಯ ಚಿಪ್ಪಾರು, ಅಡ್ಕತ್ತಿ ಮಾರ್‌ನಲ್ಲಿ ಸಿಪಿಎಂ ಕಾರ್ಯಕರ್ತರು ಶ್ರಮದಾನ ನಡೆಸಿ ಸಂಚಾರ ಸುಗಮಗೊಳಿಸಿದರು. ರಸ್ತೆ ಬದಿಗಳಲ್ಲಿ ಪೊದೆಗಳು ತುಂಬಿ ವಾಹನಗಳಿಗೆ ಸಂಚರಿಸಲು ಹಾಗೂ ಅಗಲಕಿರಿದಾದ ತಿರುವುಗಳಲ್ಲಿ ಬಸ್‌ಗಳಿಗೆ ಸಾಗಲು  ಸಮಸ್ಯೆಯಾಗುತ್ತ್ತಿದ್ದ ಹಿನ್ನೆಲೆಯಲ್ಲಿ ಶ್ರಮದಾನ ನಡೆಸಿ ಪೊದೆಗಳನ್ನು ಕಡಿದು ತೆರವುಗಳಿಸಿದ್ದಾರೆ. ಅಲ್ಲದೆ ರಸ್ತೆ ಬದಿಗೆ ಜೆಸಿಬಿ ಮೂಲಕ ಅಗೆದು ಮಣ್ಣು ಹಾಕಿ ಅಗಲಗೊಳಿಸಿದ್ದಾರೆ. ಚಿಪ್ಪಾರು, ಅಡ್ಕತ್ತಿಮಾರ್, ಖಂಡಿಗೆ,ಕಡೆಂಕೋಡಿ, ಅಮ್ಮೇರಿ ಮೊದಲಾದ ಸ್ಥಳಗಳಲ್ಲಿ ರಸ್ತೆ ದುರಸ್ತಿ ನಡೆಸಲಾಗಿದೆ. ಸಿಪಿಎಂ ಚಿಪ್ಪಾರು  ಘಟಕದ ಕಾರ್ಯಕರ್ತರು ಶ್ರಮದಾನ ನಡೆಸಿದ್ದಾರೆ. …