ಮೀನುಗಾರಿಕಾ ವಲಯದಲ್ಲಿ ಕೇಂದ್ರಾವಿಷ್ಕೃತ ಯೋಜನೆಗಳನ್ನು ರಾಜ್ಯ ಸರಕಾರ ಬುಡಮೇಲುಗೊಳಿಸುತ್ತಿದೆ- ಪಿ.ಕೆ. ಕೃಷ್ಣದಾಸ್
ಕಾಸರಗೋಡು: ರಾಜ್ಯದ ಪರಂಪರಾಗತ ಮೀನು ವಲಯದಲ್ಲಿ ಕೇಂದ್ರಾವಿಷ್ಕೃತ ಯೋಜನೆಗಳನ್ನು ರಾಜ್ಯ ಸರಕಾರ ಬುಡಮೇಲುಗೊಳಿ ಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್ ಆರೋಪಿಸಿದರು. ತೀರದೇಶ ವಲಯದಲ್ಲಿ ಕೇಂದ್ರ ಸರಕಾರದ ಯೋಜನೆಗಳನ್ನು ಜ್ಯಾರಿಗೊಳಿಸಬೇಕು, ರಾಜ್ಯ ಸರಕಾರದ ತೀರದೇಶ ಅವಗಣನೆ ಕೊನೆಗೊಳಿಸಬೇಕು, ಎಡಬಲ ಒಕ್ಕೂಟಗಳ ಅವಗಣನೆ ಕೊನೆಗೊಳಿಸ ಬೇಕು ಮೊದಲಾದ ಘೋಷಣೆಗಳನ್ನು ಎತ್ತಿಹಿಡಿದು ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ನಡೆಸಿದ ತೀರದೇಶ ಯಾತ್ರೆಯ ಸಮಾರೋಪ ಸಮಾರಂಭ ವನ್ನು ಕಾಸರಗೋಡು ಕಸಬಾ ಕಡಪುರದಲ್ಲಿ ಉದ್ಘಾಟಿಸಿ ಅವರು …