ಸಚಿವ ಸಂಪುಟ ಪುನರ್‌ರಚನೆ ಅಂತಿಮ ತೀರ್ಮಾನ ಇಂದು ಸಂಜೆ

ತಿರುವನಂತಪುರ: ರಾಜ್ಯ ಸಚಿವ ಸಂಪುಟ ಪುನರ್‌ರಚನೆ ಕುರಿತಾದ ಅಂತಿಮ ತೀರ್ಮಾನ ಇಂದು ಸಂಜೆ ಉಂಟಾಗಲಿದೆ. ಎಡರಂಗ ರಾಜ್ಯ ಸಮಿತಿ ಸಭೆ ಇಂದು ಸಂಜೆ ೪ ಗಂಟೆಗೆ ತಿರುವನಂತಪುರದಲ್ಲಿ ಕರೆಯಲಾಗಿದ್ದು, ಅದರಲ್ಲಿ ಈ ತೀರ್ಮಾನ ಉಂಟಾಗುವ ಸಾಧ್ಯತೆ ಇದೆ. ಮಾತ್ರವಲ್ಲ, ಸಿಪಿಎಂ ರಾಜ್ಯ ಸೆಕ್ರೆಟರಿಯೇಟ್ ಸಭೆ ಕೂಡಾ ಇಂದು ಸಂಜೆ ಇನ್ನೊಂದೆಡೆ ನಡೆಯಲಿದೆ. ಮುಖ್ಯಮಂತ್ರಿಯ ನೇತೃತ್ವದಲ್ಲಿ ನವೆಂಬರ್ ೧೮ರಂದು ಆರಂಭಗೊಳ್ಳಲಿರುವ ನವಕೇರಳ ಸದಸ್ ಕಾರ್ಯಕ್ರಮ ಸಮಾಪ್ತಿಗೊಂಡ ಬಳಿಕವಷ್ಟೇ ಸಚಿವ ಸಂಪುಟದ ಪುನರ್ ರಚನೆ ನಡೆಯಲಿದೆ. ಪಿಣರಾಯಿ ವಿಜಯನ್ ನೇತೃತ್ವದ …

ಉಪ್ಪಳದಲ್ಲಿ ಫ್ಲಾಟ್ ಮುಂಭಾಗದಿಂದ ಸ್ಕೂಟರ್ ಕಳವು: ಮತ್ತೆರಡು ವಾಹನಗಳ ಕಳವು ಯತ್ನ ವಿಫಲ

ಕುಂಬಳೆ: ಉಪ್ಪಳದಿಂದ ಸ್ಕೂಟರ್‌ವೊಂದು ಕಳವಿಗೀಡಾಗಿದ್ದು, ಮತ್ತೆರಡು ವಾಹನಗಳನ್ನು ಕಳವುಗೈಯ್ಯಲು ನಡೆಸಿದ ಯತ್ನ ವಿಫಲಗೊಂಡಿದೆ. ಉಪ್ಪಳ ಹನಫಿ ಬಜಾರ್‌ನಲ್ಲಿ ಫ್ಲಾಟ್‌ವೊಂದರ  ಮುಂಭಾಗದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಮೊನ್ನೆ ರಾತ್ರಿ ಕಳವಿಗೀಡಾಗಿದೆ. ಅದೇ ಫ್ಲಾಟ್‌ನಲ್ಲಿ ವಾಸಿಸುವ ಅಬ್ದುಲ್ ಮಜೀದ್ ಕೋಟ ಎಂಬವರ ಸ್ಕೂಟರನ್ನು ಕಳ್ಳರು ಕದ್ದೊಯ್ದಿದ್ದಾರೆ. ಮೊನ್ನೆ ರಾತ್ರಿ ಸ್ಕೂಟರನ್ನು ಫ್ಲಾಟ್‌ನ ಮುಂಭಾಗದಲ್ಲಿ ನಿಲ್ಲಿಸಲಾಗಿತ್ತು. ನಿನ್ನೆ ಬೆಳಿಗ್ಗೆ ನೋಡಿದಾಗ ಅದು ನಾಪತ್ತೆಯಾಗಿದೆ. ಈ ಬಗ್ಗೆ  ಅಬ್ದುಲ್ ಮಜೀದ್ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಇದೇ ವೇಳೆ ಇದೇ ಫ್ಲಾಟ್ ಸಮೀಪ  ನಿಲ್ಲಿಸಿದ್ದ …

ಕಣ್ಣೂರು ಬಳಿ ಒಂಭತ್ತು ಮಂದಿ ಮಾವೋವಾದಿಗಳು ಬಂದೂಕು ಸಹಿತ ಪತ್ತೆ: ಪೊಲೀಸರಿಂದ ತೀವ್ರ ಕಾರ್ಯಾಚರಣೆ

ಕಣ್ಣೂರು: ವಯನಾಡ್   ಮಾನಂತವಾಡಿಯ ದಟ್ಟಾರಣ್ಯದಿಂದ ಇಬ್ಬರು ಮಾವೋವಾದಿಗಳನ್ನು ಇತ್ತೀಚೆಗೆ ಸೆರೆಹಿಡಿದ ಬೆನ್ನಲ್ಲೇ ಒಂಭತ್ತು ಮಂದಿಯನ್ನೊಳಗೊಂಡ ಮಾವೋವಾದಿ ತಂಡ ಕಣ್ಣೂರು ಬಳಿ ತಲುಪಿರುವುದಾಗಿ ಸೂಚನೆ ಲಭಿಸಿದೆ. ಕಣ್ಣೂರು ಸಮೀಪ ಕರಿಕೋ ಟಕಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ  ೮ ಗಂಟೆ ವೇಳೆ ಮಹಿಳೆ ಯರನ್ನೊಳಗೊಂಡ ಮಾವೋವಾದಿ ತಂಡ ಕಾಣಿಸಿಕೊಂಡಿದೆ. ಬಂದೂಕು ಧಾರಿಗಳಾದ ಈ ತಂಡ ಸ್ಥಳೀಯ ಮೂರು ಮನೆಗಳಿಗೆ ತೆರಳಿದೆ. ಜಯಪಾಲನ್, ಜೋಸ್, ಬೇಬಿ ಎಂಬಿವರ ಮನೆಗಳಿಗೆ ಮಾವೋ ವಾದಿಗಳು ತಲುಪಿದ್ದು, ಆಹಾರ ಸಾಮಗ್ರಿಗಳನ್ನು ನೀಡುವಂತೆ ಆಗ್ರಹಿಸಿದೆ. …

ಸಂಶಯಾಸ್ಪದ ವ್ಯಕ್ತಿ ಸೆರೆ

ಕುಂಬಳೆ: ಕುಂಬಳೆ ಪೇಟೆಯಲ್ಲಿ ನಿನ್ನೆ ಮಧ್ಯರಾತ್ರಿ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದಾತನನ್ನು ಎಸ್‌ಐ ಗಣೇಶನ್ ಸೆರೆಹಿಡಿದಿದ್ದಾರೆ. ಉತ್ತರಪ್ರದೇಶದ ಪಟೇಲಿಕಾನ್ ಎಂಬಲ್ಲಿನ ಸಂಜೀದ್ (೨೩) ಎಂಬಾತ ಬಂಧಿತ ವ್ಯಕ್ತಿ. ಈತನನ್ನು ತನಿಖೆಗೊಳಪಡಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಜನವರಿ ಒಂದರಿಂದ ಪೊಲೀಸ್ ಠಾಣೆಗಳ ಸಾರಥ್ಯ ಮತ್ತೆ ಎಸ್‌ಐಗಳಿಗೆ

ಕಾಸರಗೋಡು: ರಾಜ್ಯದ ಪೊಲೀಸ್ ಠಾಣೆಗಳ ಠಾಣಾಧಿಕಾರಿ  (ಎಸ್‌ಎಚ್‌ಒ)  ಹೊಣೆಗಾರಿಕೆ ಜನವರಿ ಒಂದರಿಂದ ವರ್ಷಗಳ ಹಿಂದೆ ಇದ್ದಹಾಗೆ ಮತ್ತೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಎಸ್‌ಐ)ಗಳ ಕೈಸೇರಲಿದೆ. ಆ ಮೂಲಕ ಠಾಣೆಗಳ ಆಡಳಿತ ಪೂರ್ಣವಾಗಿ  ಎಸ್‌ಐಗಳ ಹಿಡಿತಕ್ಕೆ ಬರಲಿದೆ.  ವರ್ಷಗಳ ಹಿಂದೆ ಎಸ್.ಐಗಳು ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳಾಗಿ ಸೇವೆ ನಿರ್ವಹಿಸುತ್ತಿದ್ದರು. ಬಳಿಕ ಆ ಸಂಪ್ರದಾಯವನ್ನು ಕೈಬಿಟ್ಟು ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ಪೊಲೀಸ್ ಠಾಣೆಗಳ ಠಾಣಾಧಿಕಾರಿ ಗಳನ್ನಾಗಿ ನೇಮಿಸಲಾಗಿತ್ತು. ಆದರೆ ಇಂತಹ ಕ್ರಮದಿಂದ ನಿರೀಕ್ಷಿತ ಫಲ ಉಂಟಾಗಿಲ್ಲವೆಂದು ಆ ಬಗ್ಗೆ ಡಿಜಿಪಿ ಕೆ. …

ಭಾರತ ವಿರೋಧಿ ಕೃತ್ಯ: ಒಂದೂವರೆ ವರ್ಷದಲ್ಲಿ ೧೮ ಉಗ್ರರು ವಿದೇಶದಲ್ಲಿ ಹತ್ಯೆ

ದೆಹಲಿ: ಭಾರತ ವಿರೋಧಿ ಕೃತ್ಯ ವೆಸಗಿದ್ದ ೧೮ ಭಯೋತ್ಪಾದಕರು ವಿದೇ ಶದಲ್ಲಿಕಳೆದ ಒಂದೂವರೆ ವರ್ಷದಲ್ಲಿ  ಅಪರಿಚಿತರಿಂದ ಕೊಲೆಗೈಯ್ಯಲ್ಪಟ್ಟಿದ್ದಾರೆ. ಇದರಲ್ಲಿ ಪಾಕಿಸ್ತಾನದ ಹಲವು ಭಯೋತ್ಪಾದಕ ಸಂಘಟನೆಗಳ ನೇತಾರ ಮತ್ತು ಖಾಲಿಸ್ಥಾನಿ ಭಯೋತ್ಪಾದಕ ನೇತಾರರೂ ಒಳಗೊಂಡಿದ್ದಾರೆ. ವಿಶೇಷವೇನೆಂದರೆ  ಇವರೆಲ್ಲರೂ ಅವರ ದೇಶದಲ್ಲೇ ಅಪರಿಚಿತರಿಂದ ಕೊಲೆಗೈಯ್ಯಲ್ಪಟ್ಟಿದ್ದಾರೆ. ಕೆನಡಾದಲ್ಲಿ  ಹಲವು ಖಾಲಿಸ್ಥಾನಿ ಉಗ್ರರು ಹತ್ಯೆಗೀಡಾದರೆ ಪಾಕಿಸ್ತಾನದಲ್ಲಿ ಆ ದೇಶದ ಉಗ್ರರೂ ಒಬ್ಬರ ಹಿಂದೆ ಒಬ್ಬರಂತೆ ಕೊಲೆಗೈಯ್ಯಲ್ಪಟ್ಟಿದ್ದಾರೆ.

ಬಾಲಕಿಗೆ ಕಿರುಕುಳ ನೀಡಿ ಕೊಲೆ: ಆರೋಪಿಗೆ ಶಿಕ್ಷೆ ೧೪ರಂದು

ಕೊಚ್ಚಿ: ಆಲುವದಲ್ಲಿ ಅನ್ಯರಾಜ್ಯ ದಂಪತಿಯ ಪುತ್ರಿಯಾದ ಐದರ ಹರೆಯದ ಬಾಲಕಿಯನ್ನು ಕಿರುಕುಳ ನೀಡಿ ಕೊಲೆಗೈದ ಆರೋಪಿ ಬಿಹಾರ ನಿವಾಸಿಯಾದ ಅಸ್ಫಾಕ್ ಆಲಂ ಎಂಬಾತನಿಗೆ ಎರ್ನಾಕುಳಂ ಪೋಕ್ಸೋ ನ್ಯಾಯಾ ಲಯ ಶಿಕ್ಷೆಯನ್ನು  ನವಂಬರ್ ೧೪ರಂದು ಘೋಷಿಸಲಿದೆ. ಶಿಕ್ಷೆಯ ಕುರಿತು ವಾದ ನಡೆದ ನಿನ್ನೆ ಆರೋಪಿಯನ್ನು  ನ್ಯಾಯಾಲಯಕ್ಕೆ ತಲುಪಿಸಲಾಗಿತ್ತು. ಬಿಹಾರ ನಿವಾಸಿಗಳಾದ ದಂಪತಿಯ ಪುತ್ರಿಯ ಮೃತದೇಹ ಜುಲೈ ೨೮ರಂದು ಆಲುವ ಮಾರ್ಕೆಟ್ ಸಮೀಪ ತ್ಯಾಜ್ಯಗಳ ಮಧ್ಯೆ ಪತ್ತೆಯಾಗಿತ್ತು. ಈ ಪ್ರಕರದಲ್ಲಿ ಅಸ್ಫಾಕ್ ಆಲಂನನ್ನು ಬಂಧಿಸಿದ ತನಿಖಾ ತಂಡ ನ್ಯಾಯಾಲಯಕ್ಕೆ ಆರೋಪಪಟ್ಟಿ …

ಮಂಜೇಶ್ವರ ಉಪಜಿಲ್ಲಾ ಕಲೋತ್ಸವಕ್ಕೆ ಇಂದು ತೆರೆ ಧರ್ಮತ್ತಡ್ಕಕ್ಕೆ ಹರಿದುಬಂದ ಜನಸಾಗರ

ಉಪ್ಪಳ: ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳಲ್ಲಿ ಮಂಜೇಶ್ವರ ಉಪಜಿಲ್ಲಾ ೬೨ನೇ ಶಾಲಾ ಕಲೋತ್ಸವ ನಾಲ್ಕು  ದಿನ ನಡೆಯುತ್ತಿದ್ದು,  ಜನಸಾಗರ ಹರಿದುಬರುತ್ತಿದೆ. ಅಚ್ಚುಕಟ್ಟಾದ ವ್ಯವಸ್ತೆಯಿಂದ ಯಶಸ್ವಿಯಾಗಿ  ಮುಂದುವರಿಯುತ್ತಿದೆ. ಅಧ್ಯಾಪಕವೃಂದ, ರಕ್ಷಕರು, ವಿವಿಧ ಸಂಘ-ಸಂಸ್ಥೆಗಳು, ಹಳೆ ವಿದ್ಯಾರ್ಥಿಗಳು ಹಾಗೂ ಊರವರ ಸಹಕಾರ ಯಶಸ್ವಿಗೆ ಕಾರಣವಾಗಿದೆಯೆಂದು ಮಂಜೇಶ್ವರ ವಿದ್ಯಾಭ್ಯಾಸ ಉಪಜಿಲ್ಲೆಯ ಪ್ರಭಾರ ಸಹಾಯಕ ವಿದ್ಯಾಧಿಕಾರಿ ಜಿತೇಂದ್ರ ತಿಳಿಸಿದ್ದಾರೆ. ಉಪಜಿಲ್ಲೆಯ ೧೧೨ ಶಾಲೆಗಳ ೪೫೮೪ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ನಿನ್ನೆ ಯಕ್ಷಗಾನ, ನಾಟಕ, ನೃತ್ಯಗಳು ನಡೆದಿದೆ. ಇಂದು …

ಪೆರ್ಲ: ವಿದ್ಯುತ್ ಕಚೇರಿ ಮುಂಭಾಗ ಲೀಗ್ ಪ್ರತಿಭಟನೆ

ಪೆರ್ಲ: ವಿದ್ಯುತ್ ದರ ಹೆಚ್ಚಳ ಹಿಂತೆಗೆಯಬೇಕೆಂದು ಆಗ್ರಹಿಸಿ ಎಣ್ಮಕಜೆ ಪಂಚಾಯತ್ ಮುಸ್ಲಿಂ ಲೀಗ್ ಸಮಿತಿ ಆಶ್ರಯದಲ್ಲಿ ಪೆರ್ಲ ಕೆ.ಎಸ್.ಇ.ಬಿ. ಕಚೇರಿ ಮುಂಭಾಗ ಧರಣಿ ನಡೆಸಲಾಯಿತು. ಸಮಿತಿ ಅಧ್ಯಕ್ಷ ಎ.ಕೆ. ಶರೀಫ್ ಅಧ್ಯಕ್ಷತೆ ವಹಿಸಿದರು. ಮುಸ್ಲಿಂ ಲೀಗ್ ಜಿಲ್ಲಾ  ಕಾರ್ಯದರ್ಶಿ ಎಂ. ಅಬ್ಬಾಸ್ ಉದ್ಘಾಟಿಸಿದರು. ಮಂಡಲ ಪ್ರವಾಸಿ ಲೀಗ್ ಅಧ್ಯಕ್ಷ ಝೆಡ್‌ಎ ಮೊಗ್ರಾಲ್ ಮಾತನಾಡಿದರು. ಅಶ್ರಫ್ ಅಮೆಕ್ಕಳ ಸ್ವಾಗತಿಸಿದರು. ಟಿ.ಎಂ. ಶುಹೈಬ್, ಸಿದ್ದಿಖ್ ಒಳಮೊಗರು, ಸಿದ್ದಿಖ್ ಖಂಡಿಗೆ, ಹಮೀದಲಿ ಟಿ.ಎಂ, ಶಾಮಿಲ್ ಪೆರ್ಲ, ಮುನೀರ್ ಫೈಸಿ, ಇಕ್ಬಾಲ್ ಪೆರ್ಲ …

ಚುನಾವಣೆಯ ಕರಡು ಮತದಾರರ ಪಟ್ಟಿ ಕನ್ನಡದಲ್ಲಿ ವಿತರಿಸಲು ಒತ್ತಾಯ

ಮಂಜೇಶ್ವರ: ೨೦೨೪ರ ಲೋಕಸಭಾ ಚುನಾವಣೆಯ ಕರಡು ಮತದಾರರ ಪಟ್ಟಿ ಈಗಾಗಲೇ ನೀಡಲಾಗಿದೆ. ಈ ಹಿಂದಿನ ಚುನಾವಣೆ ವೇಳೆ ಮಲಯಾಳ ಹಾಗೂ ಕನ್ನಡ ಭಾಷೆಯ ಕರಡು ಪಟ್ಟಿ ಲಭಿಸಿದ್ದರೂ ಈ ಭಾರಿಯ ಕನ್ನಡ ಕರಡು ಪಟ್ಟಿ ವಿಳಂಬಗೊAಡಿರುವುದು ಯಾಕೆÀ ಎಂದು ಕನ್ನಡಿಗರು ಪ್ರಶ್ನಿಸಿದ್ದಾರೆ. ಈಗ ಮಲಯಾಳ ಭಾಷೆಯಲ್ಲಿರುವ ಮತದಾರರ ಪಟ್ಟಿ ಮಾತ್ರ ಲಭಿಸಿದೆ. ಭಾಷಾ ಅಲ್ಪ ಸಂಖ್ಯಾತರಾದ ಮಂಜೇಶ್ವರಕ್ಕೆ ಕನ್ನಡ ಮತದಾರ ಪಟ್ಟಿಯು ಅತಿ ಅಗತ್ಯವಾಗಿದೆ. ನ.೪ರಂದು ನಡೆದ ತಾಲೂಕು ಅಭಿವೃದ್ಧಿ ಸಮಿತಿ ಸಭೆಯಲ್ಲಿ ತಹಶೀಲ್ದಾರ್ ಅವರ ಗಮನಕ್ಕೂ …