ಬ್ಯಾಂಕ್ ಸಾಲ ಕಂದಾಯ ಇಲಾಖೆಯ ಜಪ್ತಿ ಕ್ರಮಕ್ಕೆ ತಡೆ

ತಿರುವನಂತಪುರ: ಬ್ಯಾಂಕ್ ಗಳಿಂದ ಸಾಲ ಪಡೆದು ಅದನ್ನು ಮರು ಪಾವತಿಸಲು ಬಾಕಿಯಿರುವವರ ಭೂಮಿ ಹಾಗೂ ಮನೆಯನ್ನು ಜಪ್ತಿ ನಡೆಸುವ ರೆವೆನ್ಯೂ ರಿಕವರಿ ಕ್ರಮಗಳನ್ನು ನಿಲ್ಲಿಸುವಂತೆ ಸರಕಾರ  ಆದೇಶವಿತ್ತಿದೆ. ಸಾಲ ತೀರಿಸಲು ಕಂತುಗಳ ಕಾಲಾ ವಕಾಶ ನೀಡುವ ವ್ಯವಸ್ಥೆಯನ್ನು ಸೇರಿಸಿ ರೆವೆನ್ಯೂ ರಿಕವರಿ ನಿಯಮದಲ್ಲಿ ತಿದ್ದುಪಡಿ  ಸರಕಾರ ಪರಿಗಣಿಸುತ್ತಿದೆ. ಅದುವರೆಗೆ ಎಲ್ಲಾ ರಾಷ್ಟ್ರೀಕೃತ, ಶೆಡ್ಯೂಲ್ಡ್, ಕಮರ್ಶಿಯಲ್ ಬ್ಯಾಂಕ್‌ಗಳ ಸಾಲದ ಮೇಲೆ ಕಂದಾಯ ಇಲಾಖೆ ಮೂಲಕ ನಡೆಸುವ ಜಪ್ತಿ ಕ್ರಮ ನಿಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆ ನಿರ್ದೇಶಿಸಿದೆ. ಇದೇ ವೇಳೆ …

ಅಂಬಿತ್ತಡಿ ಅಂಗನವಾಡಿಯನ್ನು ಊರವರು ಖರೀದಿಸಿದ ಸ್ಥಳದಲ್ಲೇ ನಿರ್ಮಿಸಲು ಒತ್ತಾಯಿಸಿ ಕ್ರಿಯಾ ಸಮಿತಿಯಿಂದ ಮಂಜೇಶ್ವರ ಪಂಚಾಯತ್‌ಗೆ ಮಾರ್ಚ್

ಮಂಜೇಶ್ವರ: ಅಂಬಿತ್ತಡಿ ಅಂಗನವಾಡಿಯನ್ನು ಊರವರು ಖರೀದಿಸಿದ ಸ್ಥಳದಲ್ಲೇ ನಿರ್ಮಿಸಬೇಕೆಂದು ಆಗ್ರಹಿಸಿ ಅಂಬಿತ್ತಡಿ ಕ್ರಿಯಾ ಸಮಿತಿ ವತಿಯಿಂದ ಮಂಜೇಶ್ವರ ಪಂಚಾಯತ್‌ಗೆ ಪ್ರತಿಭಟನಾ ಜಾಥಾ ಹಾಗೂ ಧರಣಿ ನಡೆಯಿತು. ಮಂಜೇಶ್ವರ ಚರ್ಚ್ ಪರಿಸರದಿಂದ ಆರಂಭಗೊAಡ ಪ್ರತಿಭಟನಾ ಜಾಥಾದಲ್ಲಿ ಅಂಗನವಾಡಿ ಮಕ್ಕಳ ಪೋಷಕರು, ಊರವರು, ಮಹಿಳೆಯರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡರು. ಬಳಿಕ ಪಂಚಾಯತ್ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಧರಣಿಯನ್ನು ಸಿಪಿಐ ಹಿರಿಯ ನೇತಾರ ಬಿ ವಿ ರಾಜನ್ ಉದ್ಘಾಟಿಸಿದರು. ಬಶೀರ್ ಎಸ್ ಎಂ ಅಧ್ಯಕ್ಷತೆ ವಹಿಸಿದರು. ಬ್ಲಾಕ್ ಪಂಚಾಯತ್ ಸ್ಥಾಯೀ …

ಗಡಿನಾಡ ಸಾಹಿತ್ಯ ಅಕಾಡೆಮಿಯ ಕನ್ನಡ ರಾಜ್ಯೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಸರಗೋಡು: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಆಶ್ರಯದಲ್ಲಿ ನಡೆಯಲಿರುವ ಕಾಸರಗೋಡು ಕನ್ನಡ ರಾಜ್ಯೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಸಚಿವೆ ವೀಣಾ ಜೋರ್ಜ್ ಬಿಡುಗಡೆಗೊಳಿ ಸಿದರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕ ಎನ್.ಎ. ನೆಲ್ಲಿಕುನ್ನು, ಎ.ಆರ್. ಸುಬ್ಬಯ್ಯಕಟ್ಟೆ, ಅಖಿಲೇಶ್ ನಗುಮುಗಂ, ಚನಿಯಪ್ಪ ನಾಯ್ಕ್, ಮನು ಪಣಿಕ್ಕರ್, ಶ್ರೀನಾಥ್, ರವಿ ನಾಯ್ಕಾಪು, ಥೋಮಸ್ ಡಿಸೋಜಾ, ವಾಮನ್ ರಾವ್ ಬೇಕಲ್, ಸಂಧ್ಯಾರಾಣಿ ಉಪಸ್ಥಿತರಿದ್ದರು. ಬಾಯಾರು ಪ್ರಶಾಂತಿ ವಿದ್ಯಾಲಯದಲ್ಲಿ ಈ ತಿಂಗಳ ೧೯ರಂದು ಕಾರ್ಯಕ್ರಮ ನಡೆಯಲಿದೆ.

ಧರ್ಮತ್ತಡ್ಕದಲ್ಲಿ ಮಂಜೇಶ್ವರ ಉಪಜಿಲ್ಲಾ ಕಲೋತ್ಸವಕ್ಕೆ ಸಂಭ್ರಮದ ಚಾಲನೆ

ಧರ್ಮತ್ತಡ್ಕ: ಮಂಜೇಶ್ವರ ಉಪಜಿಲ್ಲಾ ಮಟ್ಟದ ೬೨ನೇ ಕೇರಳ ಶಾಲಾ ಕಲೋತ್ಸವಕ್ಕೆ ಚಾಲನೆ ದೊರೆಯಿತು. ೧೨೦ ಶಾಲೆಗಳಿಂದ ೪೦೦೦ಕ್ಕೂ ಅಧಿಕ ವಿದ್ಯಾರ್ಥಿಗಳು ೨೫ ವೇದಿಕೆಗಳಲ್ಲಿ ಪ್ರತಿಭಾ ಪ್ರದರ್ಶನಗೈಯಲಿರುವ ಕಲೋತ್ಸವದ ಔಪಚಾರಿಕ ಉದ್ಘಾಟನಾ ಕಾರ್ಯಕ್ರಮ ನಿನ್ನೆ ನಡೆಯಿತು. ಶ್ರೀ ದುರ್ಗಾಮೇಶ್ವರಿ ವಿದ್ಯಾಸಂಸ್ಥೆಗಳ ಕರೆಸ್ಪಾಂಡೆAಟ್ ಶಾರದ ಅಮ್ಮ ಧ್ವಜಾರೋಹಣ ಗೈದು ಕಲೋತ್ಸವದ ಕಾರ್ಯಕ್ರಮಗಳಿಗೆ ವಿದ್ಯುಕ್ತ ಚಾಲನೆ ನೀಡಿದರು. ಶಾಲಾ ಮಕ್ಕಳ ಹುಲಿವೇಷ ಕುಣಿತ, ನಾಸಿಕ್ ಬ್ಯಾಂಡ್, ಬೊಂಬೆ ವೇಷಗಳೊಂದಿಗಿನ ಸಾಂಸ್ಕೃತಿಕ ಮೆರವಣಿಗೆಯೊಂದಿಗೆ ಅತಿಥಿಗಳನ್ನು ವೇದಿಕೆಯತ್ತ ಆಹ್ವಾನಿಸಲಾಯಿತು. ಧರ್ಮತ್ತಡ್ಕದ ವಿದ್ಯಾಸಂಸ್ಥೆಗಳ ಅಧ್ಯಾಪಕ ವೃಂದದವರು …

ಪ್ರಧಾನಮಂತ್ರಿ ಅನ್ನಯೋಜನೆ ೨೦೨೮ವರೆಗೆ ವಿಸ್ತರಣೆ

ಹೊಸದಿಲ್ಲಿ: ಭಾರತದ ೮೦ ಕೋಟಿಗೂ ಹೆಚ್ಚು ಹೆಚ್ಚು ಮಂದಿಗೆ ಆಹಾರ ಧಾನ್ಯಗಳನ್ನು ಉಚಿತವಾಗಿ ವಿತರಿಸುವ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಮುಂದಿನ ಐದು ವರ್ಷಕ್ಕೆ ವಿಸ್ತರಿಸಲಾಗಿದೆ. ೨೦೨೮ ಡಿಸೆಂಬರ್ ೩೧ರವರೆಗೆ ಈ ಯೋಜನೆಯನ್ನು ಮುಂದುವರಿಸಲು ಕೇಂದ್ರ ಸರಕಾರ  ನಿರ್ಧರಿಸಿದೆ. ಇದಕ್ಕಾಗಿ ೧೦ ಲಕ್ಷ ಕೋಟಿ ರೂಪಾಯಿ ಖರ್ಚು ತಗಲಿದೆ. ಈ ಯೋಜನೆಗೆ ಪ್ರತಿ ವರ್ಷ ೨ ಲಕ್ಷ ಕೋಟಿಗೂ ಹೆಚ್ಚು ಮೊತ್ತ ಬೇಕಾಗುತ್ತಿದೆ. ೨೦೨೦ರಲ್ಲಿ ಕೋವಿಡ್ ಸಂದಿಗ್ಧತೆ ಕಾಲದಲ್ಲಿ ಜನರನ್ನು ಉಪವಾಸದಿಂದ ಪಾರು ಮಾಡಲು ಪ್ರಧಾನಮಂತ್ರಿ …

ವಿವಿಧ ಬೇಡಿಕೆ: ಎ.ಐ.ವೈ.ಎಫ್‌ನಿಂದ ಮಂಜೇಶ್ವರ ರೈಲ್ವೇ ನಿಲ್ದಾಣಕ್ಕೆ ಪ್ರತಿಭಟನಾ ಮಾರ್ಚ್

ಮಂಜೇಶ್ವರ: ಪ್ಯಾಸೆಂಜರ್ ರೈಲುಗಳ ಬೋಗಿಗಳನ್ನು ಹೆಚ್ಚಳಗೊಳಿಸಿ, ವಂದೇ ಭಾರತ್ ರೈಲನ್ನು ಮಂಗಳೂರು ತನಕ ವಿಸ್ತರಿಸಿ ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ಎ.ಐ.ವೈ.ಎಫ್ ಮಂಜೇಶ್ವರ ಮಂಡಲ ಸಮಿತಿ ವತಿಯಿಂದ ಮಂಜೇಶ್ವರ ರೈಲು ನಿಲ್ದಾಣಕ್ಕೆ ಪ್ರತಿಭಟನಾ ಮಾರ್ಚ್ ನಡೆಯಿತು. ಎ.ಐ.ವೈಎಫ್ ಮಂಜೇಶ್ವರ ಮಂಡಲ ಅಧ್ಯಕ್ಷ ಶರತ್ ಬೆಜ್ಜ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಎಂ. ಶ್ರೀಜಿತ್ ಮಾರ್ಚ್ ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷ ಅಜಿತ್ ಎಂ.ಸಿ ಲಾಲ್ ಬಾಗ್, ರಾಜ್ಯ ಸಮಿತಿ ಸದಸ್ಯ ಧನೀಶ್ ಬಿರಿಕುಳಂ, ಜಿಲ್ಲಾ ಉಪಾಧ್ಯಕ್ಷರಾದ ಹರೀಶ್ ಕೆ.ಆರ್, ಸಿಪಿಐ …

ಕೆ.ಎನ್. ವೆಂಕಟ್ರಮಣ ಹೊಳ್ಳರಿಗೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಶಸ್ತಿ

ಕಾಸರಗೋಡು:  ಕಾಸರಗೋ ಡಿನ ಧಾರ್ಮಿಕ, ಸಾಂಸ್ಕೃತಿಕ ರಂಗದಲ್ಲಿ ಸಕ್ರಿಯರಾಗಿರುವ ಕೆ.ಎನ್. ವೆಂಕಟ್ರಮಣ ಹೊಳ್ಳರಿಗೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಆಶ್ರಯದಲ್ಲಿ ಕಾಸರಗೋಡು ಕನ್ನಡ ಗ್ರಾಮೋತ್ಸವದಲ್ಲಿ  ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಕರಾವಳಿ  ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದು, ನಗರಸಭಾ ಸದಸ್ಯೆ ಬಿ. ಶಾರದಾ ಉದ್ಘಾಟಿಸಿದರು. ನಿವೃತ್ತ ಸಹಾಯಕ ಜಿಲ್ಲಾಧಿಕಾರಿ ಶಶಿಧರ ಶೆಟ್ಟಿ, ಶಿವಪ್ರಸಾದ್ ಕೊಕ್ಕಡ, ಪ್ರತಿಮ ಹಾಸನ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಇದೇ ವೇಳೆ ಕನ್ನಡ ಗ್ರಾಮೋತ್ಸವ ಪ್ರಶಸ್ತಿಯನ್ನು ಗುರುಪ್ರಸಾದ್ ಕೋಟೆಕಣಿ ಅವರಿಗೆ ಪ್ರದಾನ ಮಾಡಲಾಯಿತು. …

ನಾಪತ್ತೆಯಾಗಿದ್ದ ಬಿಎಡ್ ವಿದ್ಯಾರ್ಥಿ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಪೆರ್ಲ: ನಾಪತ್ತೆಯಾಗಿದ್ದ ಬಿಎಡ್ ವಿದ್ಯಾರ್ಥಿ ಕೆರೆಯಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಎಣ್ಮಕಜೆ ಪಂಚಾಯತ್ ವ್ಯಾಪ್ತಿಯ ಶೇಣಿ ಬಳಿಯ ಪದ್ಯಾಣ ನಿವಾಸಿ ಸಿಲ್ವಸ್ಟರ್ ಕ್ರಾಸ್ತಾರ ಪುತ್ರ ಐವನ್ ಕ್ರಾಸ್ತ (೨೫) ಮೃತಪಟ್ಟ ವಿದ್ಯಾರ್ಥಿ. ಇವರು ತೊಕ್ಕೋಟ್‌ನ ಅಧ್ಯಾಪಕ ತರಬೇತಿ ಕೇಂದ್ರವೊಂದರ ವಿದ್ಯಾರ್ಥಿಯಾಗಿದ್ದಾರೆ. ಸೋಮವಾರ ಕಾಲೇಜಿಗೆ ಹೋಗಿ ಮರಳಿ ಬಂದ ಐವನ್ ಕ್ರಾಸ್ತಾ ಅಂದು ರಾತ್ರಿ ಊಟ ಮಾಡಿ ನಿದ್ರಿಸಿದ್ದರು. ನಿನ್ನೆ ಬೆಳಿಗ್ಗೆ ಮನೆಯವರು ಎದ್ದು ನೋಡಿದಾಗ ಐವನ್ ಕ್ರಾಸ್ತಾರನ್ನು ಕಾಣಲಿಲ್ಲ. ಇದರಿಂದ ಅವರು ಕಾಲೇಜಿಗೆ ಹೋಗಿರಬಹುದೆಂದು ಮನೆಯವರು …

ಟಿಪ್ಪರ್ ಲಾರಿಗೆ ಸಿಲುಕಿದ ವಿದ್ಯುತ್ ಕೇಬಲ್ ಬೈಕ್ ಸವಾರನ ಮೇಲೆ ಬಿದ್ದು ಅಪಘಾತ: ಮದ್ರಸಾ ಅಧ್ಯಾಪಕನಿಗೆ ಗಾಯ

ಸೀತಾಂಗೋಳಿ: ರಸ್ತೆಗೆ ಅಡ್ಡವಾಗಿ ಸ್ಥಾಪಿಸಿದ ವಿದ್ಯುತ್‌ನ ಕೇಬಲ್ ಲಾರಿಯ ಟಾಪ್‌ಗೆ ಸಿಲುಕಿ ತುಂಡಾಗಿ ಸ್ಕೂಟರ್ ಸವಾರನ ಮೇಲೆ ಬಿದ್ದು ಅವರು ಗಂಭೀರ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ಸೀತಾಂಗೋಳಿಯಲ್ಲಿ ಸಂಭವಿಸಿದೆ. ಕಣ್ಣೂರು ಜಿಲ್ಲೆಯ ನಿವಾಸಿ ಪ್ರಸ್ತುತ ಕನ್ಯಪ್ಪಾಡಿಯಲ್ಲಿ ವಾಸಿಸುವ ಇಬ್ರಾಹಿಂ ಮುಸ್ಲಿಯಾರ್ ಎಂಬವರು ಗಾಯಗೊಂಡಿದ್ದು ಅವರನ್ನು ಕಾಸರಗೋಡಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇವರು ಪೇರಾಲ್ ಕಣ್ಣೂರಿನ ಮುಬೀನುಲ್ ಇಸ್ಲಾಂ ಮದ್ರಸಾದ ಅಧ್ಯಾಪಕನಾಗಿದ್ದಾರೆ. ಇಂದು ಬೆಳಿಗ್ಗೆ ೯.೩೦ರ ವೇಳೆ ಸೀತಾಂಗೋಳಿ ಪೆಟ್ರೋಲ್ ಬಂಕ್ ಸಮೀಪ ಘಟನೆ ನಡೆದಿದೆ. ಬದಿಯಡ್ಕದಿಂದ ಮಣ್ಣು …

ತಿರುವನಂತಪುರದ ಸಹಕಾರಿ ಬ್ಯಾಂಕ್‌ಗೂ ಇ.ಡಿ ದಾಳಿ

ತಿರುವನಂತಪುರ:  ಕರುವ ನ್ನೂರು ಸಹಕಾರಿ ಬ್ಯಾಂಕ್‌ಗೆ ನಡೆದ ದಾಳಿಯ ಬೆನ್ನಲ್ಲೇ ತಿರುವನಂತ ಪುರದ ಸಹಕಾರಿ ಬ್ಯಾಂಕ್‌ಗೂ ಇ.ಡಿ ದಾಳಿ ನಡೆಸಿ  ತಪಾಸಣೆಗೈದಿದೆ. ಕಂಡಲ ಸಹಕಾರಿ ಬ್ಯಾಂಕ್‌ಗೆ  ಇಡಿ ದಾಳಿ ನಡೆಸಿದೆ. ಬ್ಯಾಂಕ್‌ನ ಮಾಜಿ ಕಾರ್ಯದರ್ಶಿ ಗಳಾದ ಶಾಂತ ಕುಮಾರಿ, ರಾಜೇಂದ್ರನ್, ಮೋಹನ ಚಂದ್ರನ್  ಎಂಬಿವರ ಹಾಗೂ ಕಲೆ ಕ್ಷನ್ ಏಜೆಂಟ್ ಅನು ಎಂಬಿವರ ಮನೆಗಳಿಗೂ ಇ.ಡಿ ದಾಳಿ ನಡೆಸಿ ತಪಾಸಣೆಗೈದಿದೆ. ಇಂದು ಮುಂಜಾನೆ  ೫.೩೦ಗಂಟೆಗೆ ಎರ್ನಾಕುಳಂನಿಂದ ತಲುಪಿದ ಇಡಿ ಅಧಿಕಾರಿಗಳು ಭಾರೀ ಭದ್ರತಾ ಕ್ರಮಗಳೊಂದಿಗೆ  ದಾಳಿ ಆರಂಭಿಸಿದ್ದಾರೆ.  …