ಮುಳ್ಳೇರಿಯ: ಕೃಷಿ ಕಾರ್ಮಿಕರ ಸಂಘ ಬಿಎಂಎಸ್ ಕಾಸರಗೋಡು ಜಿಲ್ಲಾ ಸಮ್ಮೇಳನ ಮುಳ್ಳೇರಿಯ ಗಣೇಶಮಂದಿರದಲ್ಲಿ ಜರಗಿತು. ಬಿಎಂಎಸ್ ರಾಜ್ಯ ಸಮಿತಿ ಸದಸ್ಯ ಕೃಷ್ಣನ್ ಕೇಳೋತ್ತ್ ಉದ್ಘಾಟಿಸಿದರು. ಆನಂದಿ ಮುಳ್ಳೇರಿಯ ಅಧ್ಯಕ್ಷತೆ ವಹಿಸಿದರು. ಫೆಡರೇಶನ್ ರಾಜ್ಯ ಉಪಾಧ್ಯಕ್ಷ ಭಾಸ್ಕರನ್ ಪೊಯಿನಾಚಿ, ಅನಿಲ್ ಬಿ. ನಾಯರ್, ಮಿನಿ ಶ್ರೀನಿವಾಸನ್, ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಸುನಿಲ್ ವಾಳಕ್ಕೋಡ್, ಕೋಶಾಧಿಕಾರಿ ಎನ್. ನಾರಾಯಣನ್ ವಾಳಕ್ಕೋಡ್ ಮಾತನಾಡಿದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸುನಿಲ್ ವಾಳಕ್ಕೋಡ್ (ಅಧ್ಯಕ್ಷ), ಪುಷ್ಪರಾಜ್ ಕೊರಕ್ಕೋಡು, ಸುಲೋಚನ ಕೋಟಪ್ಪಾರ, ಸುರೇಶ್ ದೇಳಿ, ತಂಗಚ್ಚನ್ ಪಾಣತ್ತೂರು, ಆನಂದ ಮುಳ್ಳೇರಿಯ (ಉಪಾಧ್ಯಕ್ಷರು), ಭಾಸ್ಕರನ್ ಪೊಯಿನಾಚಿ (ಪ್ರಧಾನ ಕಾರ್ಯದರ್ಶಿ), ರಾಮಚಂದ್ರ ಕುಲಾಲ್ನಗರ, ರಮೀಶ ಪುದಿಯಕಂಡ, ವಿಜಯ ಕುಮಾರಿ ಕಲ್ಯಾಣಂ, ಸದನ್ ಬಟ್ಟತ್ತೂರು, ವಸಂತಿ ಪುದಿಯಕಂಡ (ಜೊತೆ ಕಾರ್ಯದರ್ಶಿಗಳು) ಆಯ್ಕೆಯಾ ದರು. ೯ ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಬಿಎಂಎಸ್ ಜಿಲ್ಲಾ ಕಾರ್ಯನಿರತ ಸಮಿತಿ ಸದಸ್ಯ ಎಂ.ಕೆ. ರಾಘವನ್ ಸಮಾರೋಪ ಸಭೆ ಉದ್ಘಾಟಿಸಿದರು.







