ಕಾಸರಗೋಡು: ಕೇರಳ ಸರಕಾರದ ಜನವಿರೋಧಿ ನೀತಿಯನ್ನು ಪ್ರತಿಭಟಿಸಿ ಬಿಎಂಎಸ್ ಕಾಸರಗೋಡು ನಗರಸಭಾ ಸಮಿತಿ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಯಿತು. ಬಿಎಂಎಸ್ ಜಿಲ್ಲಾ ಸಮಿತಿ ಸದಸ್ಯ ಎಂ.ಕೆ. ರಾಘವನ್ ಜಾಥಾ ಲೀಡರ್ ಮನೋಜ್ ಕುಮಾರ್ರಿಗೆ ಧ್ವಜ ಹಸ್ತಾಂತರಿಸಿ ಪಾದಯಾತ್ರೆ ಉದ್ಘಾಟಿಸಿದರು. ನಗರಸಭಾ ಸಮಿತಿ ಅಧ್ಯಕ್ಷ ಕಮಲಾಕ್ಷ ಅಧ್ಯಕ್ಷತೆ ವಹಿಸಿದರು. ಆರ್ಎಸ್ಎಸ್ ಜಿಲ್ಲಾ ಸಹ ಸಂಪರ್ಕ್ ಪ್ರಮುಖ್ ಅರುಣ್ ಕುಮಾರ್, ವಲಯ ಅಧ್ಯಕ್ಷ ಬಾಲಕೃಷ್ಣನ್, ಎಸ್.ಕೆ. ಉಮೇಶ್ ಮಾತನಾಡಿದರು. ಪಾದಯಾತ್ರೆಗೆ ವಿವಿಧ ಕೇಂದ್ರಗಳಲ್ಲಿ ಸ್ವಾಗತ ನೀಡಲಾಯಿತು. ಸಮಾರೋಪ ಕಾರ್ಯಕ್ರಮವನ್ನು ಬಿಎಂಎಸ್ ಜಿಲ್ಲಾ ಅಧ್ಯಕ್ಷ ಕೆ. ಉಪೇಂದ್ರನ್ ಉದ್ಘಾಟಿಸಿದರು.
