ಬೆಳ್ಳೂರು: ಕೇರಳ ರಾಜ್ಯದ ಪ್ರಾಥಮಿಕ ಸಹಕಾರಿ ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಸಾಲಗಾರ ರೈತರಲ್ಲಿ ಅತ್ಯುತ್ತಮ ರೈತನಾಗಿ ಆಯ್ಕೆಯಾದ ಬೆಳ್ಳೂರು ಪಂ. ಕಿನ್ನಿಂಗಾರಿನ ಸಾಧಕ ರೈತ ವೆಂಕಪ್ಪಮಣಿ ಕೇಂದ್ರ ಬ್ಯಾಂಕ್ ನ 2024ರ ಕಾಸರಗೋಡು ಜಿಲ್ಲೆಯ ಅತ್ಯುತ್ತಮ ರೈತ ಪ್ರಶಸ್ತಿಗೆ ಭಾಜನರಾದರು. ತಿರುವನಂತಪುರದಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರಿಗಳಿಂದ ಅವರು ಪ್ರಶಸ್ತಿ ಸ್ವೀಕರಿಸಿದರು. 25 ಸಾವಿರ ರೂ., ಸ್ಮರಣಿಕೆ ಮತ್ತು ಪ್ರಮಾಣಪತ್ರವನ್ನು ಪ್ರಶಸ್ತಿ ಒಳಗೊಂಡಿದೆ.







