ಮಿಂಚಿಪದವು ಕ್ಷೇತ್ರ ಬ್ರಹ್ಮಕಲಶೋತ್ಸವ: ಸಮಿತಿ ಪದಾಧಿಕಾರಿಗಳಿಂದ ಡಾ. ಡಿ. ವೀರೇಂದ್ರ ಹೆಗಡೆ ಭೇಟಿ

ಮಿಂಚಿಪದವು: ಇಲ್ಲಿನ ಶ್ರೀ ಕಾವೇರಮ್ಮ ಮಹಾಲಿಂಗೇಶ್ವರ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವ ಫೆಬ್ರವರಿ 22ರಿಂದ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸಮಿತಿ ಪದಾಧಿಕಾರಿಗಳು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಇಂದು ಬೆಳಿಗ್ಗೆ  ಭೇಟಿ ಮಾಡಿದ ತಂಡದಲ್ಲಿ ಸೇವಾ ಸಮಿತಿ ಅಧ್ಯಕ್ಷ  ಸದಾನಂದ ಅಡ್ಕ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಶಿವರಾಮ, ಕಾರ್ಯದರ್ಶಿ ಜಯಕರ, ಕೋಶಾಧಿಕಾರಿ ನಾರಾಯಣ ಕೇಕಡ್ಕ, ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ, ಸಮಿತಿ ಸದಸ್ಯರಾದ ಗೋಕುಲ ಯಾದವ್, ರೋಹಿತಾಕ್ಷ, ಮಧುರಾಜ್ ಉಪಸ್ಥಿತರಿದ್ದರು.

You cannot copy contents of this page