ಕಾಸರಗೋಡು: ಕಾಸರಗೋಡು ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘ ಇದರ ಜಿಲ್ಲಾ ಸಮಾವೇಶ ಮುಳ್ಳೇರಿಯ ಕಾರಡ್ಕ ಸಹಕಾರಿ ಬ್ಯಾಂಕ್ ಹಾಲ್ನಲ್ಲಿ ಜರಗಿತು. ಜಿಲ್ಲಾಧ್ಯಕ್ಷ ಗುಣ ಪಾಲ ಅಮೈ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕೋಶಾಧಿಕಾರಿ ಕುಂಞ್ಞಪ್ಪು ಮಂಞಂಪಾರೆ, ಜಿಲ್ಲಾ ಪದಾಧಿಕಾರಿಗಳಾದ ಶೀನಾ ಮಂಞAಪಾರೆ, ಮುತ್ತಪ್ಪ ದೇವರಡ್ಕ, ಸೌಧಾಮಿನಿ ಕಾಞಂಗಾಡ್, ಗುಲಾಬಿ ಕುಂಬಳೆ, ಬಾಬು ಎಡಪರಂಬು, ಸುಂದರ ನೆಟ್ಟಣಿಗೆ, ರಾಜರಾಮ್ ಪುತ್ರಕಳ, ಸಂತೋಷ್ ಆದೂರ್, ರಾಧಾಕೃಷ್ಣ ಮಂಞಂಪಾರೆ ಭಾಗಿಯಾದರು.
ಸಮುದಾಯದ ಏಳಿಗೆಗಾಗಿ, ಬೆಳವಣಿಗೆಗಾಗಿ, ರಕ್ಷಣೆಗಾಗಿ, ಸಂಘಟನಾತ್ಮಕವಾಗಿ ಕಾರ್ಯಪ್ರವೃತಿಗೆ ಬರಲು ಜಿಲ್ಲಾ ಸಮಿತಿ ಸಂಕಲ್ಪ ಮಾಡಿತು. ಸಮುದಾಯದ ವಿರುದ್ಧ ಆಗುವಂತಹ ಅನ್ಯಾಯಗಳಿಗೆ ಕಾನೂನಾತ್ಮಕ ಹೋರಾಟಗಾಳಿಗೂ ಜಿಲ್ಲಾ ಸಮಿತಿ ಶತಸಿದ್ಧವೆಂದು ಸಭೆಯಲ್ಲಿ ಎಚ್ಚರಿಕೆ ನೀಡಲಾಯಿತು. ಪ್ರಧಾನ ಕಾರ್ಯದರ್ಶಿ ಸುರೇಶ್ ಕಾಸರಗೋಡು ಸ್ವಾಗತಿಸಿ, ಜಿಲ್ಲಾ ಕಾರ್ಯಕಾರಿ ಸದಸ್ಯ ರಾಜೇಶ್ ಅಮೈ ವಂದಿಸಿದರು.
