ಮಂಜೇಶ್ವರ: ಪಂಚಾಯತ್ ವತಿಯಿಂದ ಬಡಾಜೆ ಶಾಲೆಗೆ ದೊರ ಕಿದ ಸುಮಾರು 10 ಲಕ್ಷ ರೂ.ನಷ್ಟು ಅನುದಾನ ಬಳಸಿ ನಿರ್ಮಿ ಸಲಾದ ಶಾಲಾ ಕಟ್ಟಡ ಮತ್ತು ಇತರ ಅಭಿವೃದ್ಧಿ ಕಾರ್ಯಗಳ ಉದ್ಘಾಟನಾ ಕಾರ್ಯ ಕ್ರಮ ಜರಗಿತು. ಪಂಚಾಯತ್ ಅಧ್ಯಕ್ಷೆ ಜೀನ್ ಲವಿನಾ ಮೊಂತೆರೋ ಉದ್ಘಾಟಿಸಿದರು. ತರಗತಿ ಕೊಠಡಿಯ ಉದ್ಘಾಟನೆಯನ್ನು ಪಂ. ಉಪಾಧ್ಯಕ್ಷ ಮೊಹಮ್ಮದ್ ಸಿದ್ದಿಕ್. ಬಿ ನಿರ್ವ ಹಿಸಿ ದರು. ಮುಖ್ಯ ಅತಿಥಿಗಳಾಗಿ ಸ್ಥಾಯಿ ಸಮಿತಿ ಅಧ್ಯಕ್ಷ ಯಾದವ್ ಬಡಾಜೆ, ಪಿ.ಇ.ಸಿ ಸೆಕ್ರೆಟರಿ ಶಂಕರ ನಾರಾಯಣ ಭಟ್, ರಝಾಕ್ ಕಿಟ್ಟ ಗುಂಡಿ, ಮುಸ್ತಫಾ, ಗಣೇಶ್ ಶಿವಪುರ, ಬಶೀರ್ ಬಡಾಜೆ, ಎಂ.ಪಿ.ಟಿ.ಎ ಶಶಿಕಲ, ರಹೀಂ, ನಶೀದಾ ಭಾಗವಹಿ ಸಿದರು. ಅನುದಾನ ಲಭಿಸಲು ಮುತು ವರ್ಜಿ ವಹಿಸಿದ ಪಂ. ಅಧ್ಯಕ್ಷೆ ಹಾಗೂ ಸ್ಥಾಯಿ ಸಮಿತಿಯ ಅಧ್ಯಕ್ಷರ ಸೇವೆಯನ್ನು ಶ್ಲಾಘಿಸಿ ಗೌರವಿಸಲಾಯಿತು. ಪಿ.ಟಿ.ಎ ಅಧ್ಯಕ್ಷ ಯಾಕೂಬ್ ಕೋಡಿ ಅಧ್ಯಕ್ಷತೆ ವಹಿಸಿದರು. ಮುಖ್ಯೋಪಾಧ್ಯಾ ಯಿನಿ ಹರಿಣಾಕ್ಷಿ. ಬಿ ಸ್ವಾಗತಿಸಿ, ಅಧ್ಯಾ ಪಿಕೆ ತಲ್ಲೀನ ವಂದಿಸಿದರು. ಮಕ್ಕಳು ಪ್ರಾರ್ಥನೆ ಹಾಡಿದರು. ಅಶೋಕ್ ಕೊಡ್ಲಮೊಗರು ನಿರೂಪಿಸಿದರು.
