ಕೂಲಿ ಕಾರ್ಮಿಕ ಕೆಲಸ ವೇಳೆ ಹೃದಯಾಘಾತದಿಂದ ನಿಧನ

ಪೆರ್ಲ: ಕೂಲಿ ಕಾರ್ಮಿಕರೊ ಬ್ಬರು ಕೆಲಸ ವೇಳೆ ಹೃದಯಾ ಘಾತದಿಂದ ನಿಧನಹೊಂದಿದರು. ಬಜಕೂಡ್ಲು ನಿವಾಸಿ ಜಯಪ್ರಕಾಶ್ (51) ಎಂಬವರು ಮೃತಪಟ್ಟ ವ್ಯಕ್ತಿ. ಇವರು ನಿನ್ನೆ ಬೆಳಿಗ್ಗೆ ಕಾಟುಕುಕ್ಕೆಯಲ್ಲಿ ಕೆಲಸ ನಿರತರಾಗಿದ್ದ ವೇಳೆ ಎದೆನೋವು ಅನುಭವಗೊಂ ಡಿತ್ತೆನ್ನಲಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ತಲುಪಿಸಿದ್ದು, ಅಷ್ಟರೊಳಗೆ ನಿಧನ ಸಂಭವಿಸಿದೆ. ಬಳಿಕ ಮೃತದೇಹವನ್ನು  ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಯಿತು. ದಿವಂಗತರಾದ ಐತ್ತಪ್ಪ ಬಿ.ಎಂ-ಅರುಣ ದಂಪತಿಯ ಪುತ್ರನಾದ ಮೃತರು ಪತ್ನಿ ಮೀನಾಕ್ಷಿ, ಮಕ್ಕಳಾದ  ಧನುಷ್, ಋತಿಕ್,ಸಹೋದರ ಪ್ರಶಾಂತ್, ಸಹೋದರಿಯರಾದ ವನಿತ, ಲತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page