ಪೆರಿಯದಲ್ಲಿ ಮತ್ತೆ ಚಿರತೆ ಭೀತಿ: ಜಾಗ್ರತಾ ನಿರ್ದೇಶ

ಕಾಸರಗೋಡು: ಪೆರಿಯ ಕೇಂದ್ರ ವಿಶ್ವವಿದ್ಯಾಲಯ ಸಮೀಪ ಮತ್ತೆ ಚಿರತೆಯ ಭೀತಿ ಉಂಟಾಗಿದೆ.  ಇಲ್ಲಿನ ತನ್ನೋಟ್ ಭಾಗದಲ್ಲಿ ಚಿರತೆ ಕಂಡುಬಂದಿರುವುದಾಗಿ ತಿಳಿದುಬಂದಿದೆ.  ವಿಷಯ ತಿಳಿದು ಆರ್‌ಆರ್‌ಟಿ ಸ್ಥಳಕ್ಕೆ ತಲುಪಿ ಶೋಧ ನಡೆಸಿದೆ  ಈ ವೇಳೆ ಚಿರತೆಯ ಕಾಲಿನ ಹೆಜ್ಜೆಗಳ ಗುರುತು ಕಂಡುಬಂದಿದೆ.  ಚಿರತೆ ಈ ಭಾಗಕ್ಕೆ ತಲುಪಿರುವುದಾಗಿ ಸೂಚನೆ ಲಭಿಸಿದ ಹಿನ್ನೆಲೆಯಲ್ಲಿ  ಇಲ್ಲಿ ಕ್ಯಾಮರಾ ಸ್ಥಾಪಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಇದೇ ವೇಳೆ  ಜಾಗ್ರತೆ ವಹಿಸುವಂತೆಯೂ ಅಧಿಕಾರಿಗಳು ಜನರಿಗೆ ಕರೆ ನೀಡಿದ್ದಾರೆ.

RELATED NEWS

You cannot copy contents of this page