ತಿರುವನಂತಪುರ: ರಾಜ್ಯದಲ್ಲಿ ವಿದ್ಯುತ್ ಪವರ್ ಕಟ್ ಆಗಲೀ ಲೋಡ್ ಶೆಡ್ಡಿಂಗ್ ಆಗಲೀ ಏರ್ಪಡಿಸಲಾಗುವುದಿಲ್ಲವೆಂದು ತಿರುವನಂತಪುರದಲ್ಲಿ ಇಂದು ಬೆಳಿಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿದ್ಯುತ್ ಖಾತೆ ಸಚಿವ ಕೆ. ಕೃಷ್ಣನ್ ಕುಟ್ಟಿ ಹೇಳಿದ್ದಾರೆ.
ರಾಜ್ಯ ತೀವ್ರ ವಿದ್ಯುತ್ ಬಿಕ್ಕಟ್ಟು ಎದುರಿಸುತ್ತಿದೆಯಾದರೂ ಅದರ ಹೆಸರಲ್ಲಿ ರಾಜ್ಯದಲ್ಲಿ ಯಾವುದೇ ರೀತಿಯ ವಿದ್ಯುತ್ ನಿಯಂತ್ರಣ ಹೇರಲಾಗುವುದಿಲ್ಲ. ಜನರನ್ನು ಸಂಕಷ್ಟಕ್ಕೆ ಸಿಲುಕಿಸುವ ಯಾವುದೇ ರೀತಿಯ ಕ್ರಮ ಈ ವಿಷಯದಲ್ಲಿ ಸರಕಾರದ ವತಿಯಿಂದ ಉಂಟಾಗದು ಎಂದೂ ಸಚಿವರು ಸ್ಪಷ್ಟಪಡಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ದದ ಪರಿಣಾಮ ದೇಶದಾದ್ಯಂತವಾಗಿ ಭಾರೀ ಅಡುಗೆ ಅನಿಲ ಕ್ಷಾಮ ತಲೆದೋರುವಂತೆ ಮಾಡಿದೆ. ಕೇರಳದಲ್ಲಿ ಇದು ಅತೀ ಹೆಚ್ಚಿನ ರೀತಿಯ ಪರಿಣಾಮ ಬೀರಿದೆ. ಇದರಿಂದಾಗಿ ವಿದ್ಯುತ್ ಚಾಲಿತ ಒಲೆಗಳ ಉಪಯೋಗವೂ ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಹೆಚ್ಚಾಗತೊಡಗಿದೆ. ಮಾತ್ರವಲ್ಲ ಬೇಸಿಗೆ ಧಗೆಯಿಂದಾಗಿ ರಾಜ್ಯದಲ್ಲಿ ವಿದ್ಯುತ್ ಬಳಕೆ ಇನ್ನಷ್ಟು ಹೆಚ್ಚಾಗುವಂತೆಯೂ ಮಾಡತೊಡಗಿದೆ.
ರಾಜ್ಯದಲ್ಲಿ ವಿದ್ಯುತ್ ಉಪ ಯೋಗ ಇನ್ನಷ್ಟು ತಾರಕಕ್ಕೇರುವಂತೆ ಮಾಡಿದೆ. ಈ ವೇಳೆಯಲ್ಲೇ ರಾಜ್ಯದಲ್ಲಿ ವಿದ್ಯುತ್ ನಿಯಂತ್ರಣ ಹೇರಲಾಗುವುದಿಲ್ಲವೆಂಬ ಘೋಷಣೆ ಸಚಿವರಿಂದ ಉಂಟಾಗಿದೆ.






