ಪಂ.ಚುನಾವಣೆ: ಕುಂಬಳೆಯಲ್ಲಿ ಇಂದು ಯುಡಿಎಫ್ ಕಾರ್ಯಕರ್ತರ ಮಹಾಸಂಗಮ

ಕುಂಬಳೆ: ತ್ರಿಸ್ತರ ಪಂಚಾಯತ್ ಚುನಾವಣೆಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿಯಿರುವಂತೆ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್ ಪ್ರಚಾರ ತೀವ್ರಗೊಳಿ ಸಿದೆ. ಇದರಂಗವಾಗಿ ಇಂದು ಮಧ್ಯಾಹ್ನ 2.30ಕ್ಕೆ ಕುಂಬಳೆಯಲ್ಲಿ ಯುಡಿಎಫ್ ಕಾರ್ಯಕರ್ತರ ಮಹಾ ಸಂಗಮ ನಡೆಯಲಿದೆ. ಇದರಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ತ್ರಿಸ್ತರ ಪಂಚಾಯ ತ್‌ಗಳ  ಯುಡಿಎಫ್‌ನ ೨೫೦ರಷ್ಟು ಅಭ್ಯರ್ಥಿಗಳು  ಭಾಗವಹಿಸುವರು.  ಎಐಸಿಸಿ ಪ್ರಧಾನ ಕಾರ್ಯದರ್ಶಿ, ಸಂಸದ ಕೆ.ಸಿ. ವೇಣುಗೋಪಾಲ್, ಕರ್ನಾಟಕ ಅಲ್ಪಸಂಖ್ಯಾತ ಕ್ಷೇಮ ಸಚಿವ ಸಮೀರ್ ಅಹಮ್ಮದ್‌ಖಾನ್, ಮುಸ್ಲಿಂ ಲೀಗ್ ರಾಜ್ಯ ಕಾರ್ಯದರ್ಶಿ ಕೆ.ಎಂ.ಶಾಜಿ, ಸಂಸದ ರಾಜ್‌ಮೋ ಹನ್ ಉಣ್ಣಿತ್ತಾನ್, ಶಾಸಕ ಎಕೆಎಂ ಅಶ್ರಫ್ ಮೊದಲಾದವರು ಭಾಗವಹಿಸುವರು.

You cannot copy contents of this page