ಮಂಗಲ್ಪಾಡಿ: ಪ್ರತಾಪನಗರದಲ್ಲಿ ನಡೆಯುತ್ತಿರುವ 42ನೇ ವರ್ಷದ ಶ್ರೀಗೌರಿ ಗಣೇಶೋತ್ಸವದ ಶೋಭಾಯಾತ್ರೆ ನಾಳೆ ನಡೆಯಲಿದೆ. ಬೆಳಿಗ್ಗೆ ಪೂಜೆ, 108 ಕಾಯಿಗಳ ಗಣಯಾಗ, ಭಜನೆ, ಅಶ್ವತ್ಥಪೂಜೆ, ಮಹಾಪೂಜೆ, ಮಧ್ಯಾಹ್ನ 1.30ರಿಂದ ಉತ್ತರ ಪೂಜೆ, ಸಮಾರೋಪ ಸಮಾರಂಭ, ಶೋಭಾಯಾತ್ರೆ ಆರಂಭ ಬಳಿಕ ಸಂಜೆ ಶಿವಾಜಿ ನಗರದ ಸಿಂಧೂ ಸಾಗರದಲ್ಲಿ ಜಲಸ್ತಂಭನೆ ನಡೆಯಲಿದೆ.
