ದಾರಿ ತರ್ಕ: ಘರ್ಷಣೆಯಲ್ಲಿ ನಾಲ್ಕು ಮಂದಿಗೆ ಗಾಯ

ಕುಂಬಳೆ: ದಾರಿ ತರ್ಕದ ಹಿನ್ನೆಲೆಯಲ್ಲಿ ಉಂಟಾದ ಘರ್ಷ ಣೆಯಲ್ಲಿ ಮಹಿಳೆಯರ ಸಹಿತ ನಾಲ್ಕು ಮಂದಿ ಗಾಯಗೊಂಡ ಘಟನೆ ನಡೆದಿದೆ. ಕೊಡ್ಲಮೊಗರು ಪಲ್ಲೆದಪಡ್ಪು ನಿವಾಸಿಗಳಾದ ವಿಶ್ವನಾಥ ಶೆಟ್ಟಿ (65), ಇವರ ಪತ್ನಿ ಶಾರದ (64), ನೆರೆಮನೆ ನಿವಾಸಿಗಳಾದ ಸದಾಶಿವರ ಪತ್ನಿ ಪುಷ್ಪ (54), ನಾರಾಯಣ ಶೆಟ್ಟಿಯವರ ಪತ್ನಿ ಲೀಲ 62) ಎಂಬಿವರು ಗಾಯಗೊಂಡಿದ್ದು, ಇವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ ಎರಡು ತಂಡಗಳ ಮಧ್ಯೆ ಘರ್ಷಣೆ ನಡೆದಿರುವು ದಾಗಿ ದೂರಲಾಗಿದೆ.

You cannot copy contents of this page