ಆನ್‌ಲೈನ್ ವ್ಯಾಪಾರದ ಹೆಸರಲ್ಲಿ 22 ಲಕ್ಷ ರೂ. ಲಪಟಾವಣೆ

ಕಾಸರಗೋಡು: ಆನ್‌ಲೈನ್ ಪ್ಲಾಟ್ ಫಾಂ ಮೂಲಕ ಶೇರು ವ್ಯಾಪಾರಕ್ಕಾಗಿ  22.38 ಲಕ್ಷ ರೂ. ಠೇವಣಿ ಪಡೆದು ಅದರ ಲಾಭವನ್ನಾಗಲೀ ಠೇವಣಿ ಹಣ ವನ್ನಾಗಲೀ ಹಿಂತಿರುಗಿಸದೆ ವಂಚಿಸಿದ ಬಗ್ಗೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಚೀಮೇನಿ ನಿವಾಸಿ ಪಿ.ಶ್ರೀಧರನ್ ಎಂಬವರು ಈ ರೀತಿ ವಂಚನೆಗೊಳಗಾಗಿದ್ದು, ಆ ಬಗ್ಗೆ ಅವರು ನೀಡಿದ ದೂರಿನಂತೆ ಚೀಮೇನಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾಟ್ಸಪ್ ಮತ್ತು ಫೇಸ್‌ಬುಕ್‌ನಲ್ಲಿ ಯುಟಿಐಎಎಂಸಿ ಎಂಬ ಆನ್‌ಲೈನ್ ಪ್ಲಾಟ್ ಪಾಂನಲ್ಲಿ ಶೇರು ಟ್ರೇಡಿಂಗ್ ಎಂಬ ಹೆಸರಲ್ಲಿ ಅಮಿತ ಲಾಭ ನೀಡುವುದೆಂಬ ವಾಗ್ದಾನ ನೀಡಿ ಆ ಸಂಸ್ಥೆ ತನ್ನಿಂದ ಜೂನ್ 16ರಿಂದ ಆರಂಭಗೊಂಡು ಜುಲೈ ೩೦ರ ತನಕದ ಅವಧಿಯಲ್ಲಿ 22.38 ಲಕ್ಷ ರೂ. ಪಡೆದ ಬಳಿಕ ಲಾಭವನ್ನಾಗಲೀ ಠೇವಣಿ ಹಣವನ್ನಾಗಲೀ ಹಿಂತಿರುಗಿಸದೆ ವಂಚಿಸಿದೆಯೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಶ್ರೀಧರನ್ ತಿಳಿಸಿದ್ದಾರೆ.

RELATED NEWS

You cannot copy contents of this page