ಕೇಂದ್ರ ಸಚಿವ ಗಡ್ಕರಿ ಬಂಗಲೆಯಲ್ಲಿ ಕಳವಿಗೆತ್ನ ಸೆಕ್ಯುರಿಟಿ ಗಾರ್ಡ್ ಬಂಧನ

ನಾಗ್ಪುರ: ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರ  ನಾಗ್ಪುರದಲ್ಲಿರುವ ಪಿ.ಎ. ಬಂಗಲೆಯಲ್ಲಿ ಕಳವಿಗೆತ್ನಿಸಲಾಗಿದೆ. ಅದಕ್ಕೆ ಸಂಬಂಧಿಸಿ ಪ್ರಸ್ತುತ ಬಂಗಲೆಯ ಸೆಕ್ಯುರಿಟಿ ಗಾರ್ಡ್ ರತನ್ ಕಾರ್ತಿಕ್ ಕಸ್ತೂರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಗಡ್ಕರಿಯ ಆಪ್ತ ಸಹಾಯಕ  ಕೌಸ್ತುಭ್ ನೀಡಿದ ದೂರಿನಂತೆ ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೋಮವಾರ ರಾತ್ರಿ ೧೦.೫೫ರ ವೇಳಗೆ ಆರೋಪಿ  ಸಚಿವರ ಬಂಗಲೆಯ  ಕೊಠಡಿಗೆ ಅಕ್ರಮ ವಾಗಿ ಪ್ರವೇಶಿಸಿ ಕಳವುಗೈಯ್ಯ ಲೆತ್ನಿಸಿ ರುವುದಾಗಿ  ಪೊಲೀಸರಿಗೆ ನೀಡಲಾದ ದೂರಿನಲ್ಲಿ ಹೇಳಲಾಗಿದೆ.

RELATED NEWS

You cannot copy contents of this page