ಕೇಂದ್ರ ಸಚಿವ ಗಡ್ಕರಿ ಬಂಗಲೆಯಲ್ಲಿ ಕಳವಿಗೆತ್ನ ಸೆಕ್ಯುರಿಟಿ ಗಾರ್ಡ್ ಬಂಧನ

ನಾಗ್ಪುರ: ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರ  ನಾಗ್ಪುರದಲ್ಲಿರುವ ಪಿ.ಎ. ಬಂಗಲೆಯಲ್ಲಿ ಕಳವಿಗೆತ್ನಿಸಲಾಗಿದೆ. ಅದಕ್ಕೆ ಸಂಬಂಧಿಸಿ ಪ್ರಸ್ತುತ ಬಂಗಲೆಯ ಸೆಕ್ಯುರಿಟಿ ಗಾರ್ಡ್ ರತನ್ ಕಾರ್ತಿಕ್ ಕಸ್ತೂರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಗಡ್ಕರಿಯ ಆಪ್ತ ಸಹಾಯಕ  ಕೌಸ್ತುಭ್ ನೀಡಿದ ದೂರಿನಂತೆ ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೋಮವಾರ ರಾತ್ರಿ ೧೦.೫೫ರ ವೇಳಗೆ ಆರೋಪಿ  ಸಚಿವರ ಬಂಗಲೆಯ  ಕೊಠಡಿಗೆ ಅಕ್ರಮ ವಾಗಿ ಪ್ರವೇಶಿಸಿ ಕಳವುಗೈಯ್ಯ ಲೆತ್ನಿಸಿ ರುವುದಾಗಿ  ಪೊಲೀಸರಿಗೆ ನೀಡಲಾದ ದೂರಿನಲ್ಲಿ ಹೇಳಲಾಗಿದೆ.

You cannot copy contents of this page