ವರ್ಕಾಡಿ: ಕೊಡ್ಲಮೊಗರು ಪಜ್ವ ನಿವಾಸಿ ಹಿರಿಯ ಕೃಷಿಕ ಧೂಮಪ್ಪ ಬೆಳ್ಚಾಡ (69) ಮಂಗಳವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನಹೊಂದಿದರು. ಮೃತರು ಪತ್ನಿ ಪಾರ್ವತಿ, ಮಕ್ಕಳಾದ ಸುಕುಮಾರ್, ಚಂದ್ರಶೇಖರ, ಸೊಸೆಯಂದಿರಾದ ರಜತಾ, ಭವ್ಯ, ಸಹೋದರ ಸಹೋದರಿಯರಾದ ಪದ್ಮನಾಭ, ದಾಮೋದರ, ಗಿರಿಜಾ, ಸೀತಮ್ಮ, ಹೇಮಾವತಿ, ದೇವಕಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ ತೀಯಾ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಗಣೇಶ್ ಪಾವೂರು ಸಂತಾಪ ಸೂಚಿಸಿದ್ದಾರೆ.
