ಮಂಜೇಶ್ವರ: ಜಿಲ್ಲಾ ಕುಲಾಲ ಸಂಘ ಮಂಜೇಶ್ವರ ಇದರ ಆಶ್ರಯದಲ್ಲಿ ಕುಲಾಲ ಬಂಧುಗಳ ಸಹಕಾರದಿಂದ ರೂಪುಗೊಂಡ ಕುಲಾಲ ಸಮಾಜದ ‘ನೊಂದ ಜೀವಕ್ಕೊಂದು ಆಸರೆ’ ಕಾರ್ಯಕ್ರಮದಂತೆ ಅಶಕ್ತ ಕುಟುಂಬ ಸದಸ್ಯರ ಚಿಕಿತ್ಸೆಗಾಗಿ ಸಹಾಯಧನದ ಮೊತ್ತವನ್ನು ಹಸ್ತಾಂತರಿಸಲಾಯಿತು. ಕುಲಾಲ ಸಂಘ ಮೀಂಜ ಶಾಖೆಗೊಳ ಪಟ್ಟ ಕೋಳ್ಯೂರು ಚಕ್ರಕೋಡಿ ನಿವಾಸಿ ಶ್ರೀನಾಥ್ರಿಗೆ ತೂಮಿನಾಡು ಕುಲಾಲ ಸಮುದಾಯ ಭವನದಲ್ಲಿ ಜರಗಿದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಈ ಮೊತ್ತವನ್ನು ಹಸ್ತಾಂತರಿಸಲಾಯಿತು. ಗಣ್ಯರು ಉಪಸ್ಥಿತರಿದ್ದರು.







