ಕುಬಣೂರು ರಸ್ತೆಯಲ್ಲಿ ಮತ್ತೆ ತ್ಯಾಜ್ಯ ಉಪೇಕ್ಷೆ: ಸಂಚಾರ ಸಮಸ್ಯೆ

ಉಪ್ಪಳ: ರಸ್ತೆ ಬದಿಯಲ್ಲಿ ತ್ಯಾಜ್ಯ ಉಪೇಕ್ಷಿಸುತ್ತಿರುವ ಕೃತ್ಯ ಮತ್ತೆ ವ್ಯಾಪಕಗೊಂಡಿದ್ದು, ಸಂಚಾರಕ್ಕೆ ಸಮಸ್ಯೆಯಾಗಿದೆ. ತ್ಯಾಜ್ಯ ಎಸೆಯುವವರ ವಿರುದ್ದ ಕಠಿಣ ಕ್ರಮಕ್ಕೆ ಊರವರು ಒತ್ತಾಯಿಸಿದ್ದಾರೆ. ಶಾಂತಿಗುರಿ-ಕುಬಣೂರು ರಸ್ತೆಯ ವಿವಿಧೆಡೆಗಳಲ್ಲಿ ತ್ಯಾಜ್ಯ ದುರ್ವಾಸನೆ ಬೀರುತ್ತಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಸಮಸ್ಯೆಯಾಗಿದೆ. ರಾತ್ರಿ ವಾಹನ ಸಂಚಾರದ ವೇಳೆ ಇಲ್ಲಿ ಪ್ಲಾಸ್ಟಿಕ್ ಸಹಿತ ವಿವಿಧ ರೀತಿಯ ತ್ಯಾಜ್ಯವನ್ನು ಎಸೆಯಲಾಗುತ್ತಿರುವುದಾಗಿ ದೂರಲಾಗಿದೆ. ಹಲವು ವರ್ಷಗಳ ಹಿಂದೆ ಈ ಪರಿಸರದ ಸುವರ್ಣಗಿರಿ ಹೊಳೆಗೆ ಮದುವೆ ಸಮಾರಂಭದ ಅವಶಿಷ್ಠಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಎಸೆಯಲಾಗಿದ್ದು, ಇದನ್ನು ಊರವರು ಪ್ರತಿಭಟಿಸಿದ್ದರು. ಇದೀಗ ರಸ್ತೆ ಬದಿಯಲ್ಲಿ ಎಸೆಯುತ್ತಿರುವುದು ಸ್ಥಳೀಯರಲ್ಲಿ ಸಮಸ್ಯೆಗೆ ಕಾರಣವಾಗಿದೆ. ಸಂಬAಧ ಪಟ್ಟ ಅಧಿಕಾರಿಗಳು ತ್ಯಾಜ್ಯ ಉಪೇಕ್ಷಿಸುವರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

RELATED NEWS

You cannot copy contents of this page