ಅಡ್ಕತ್ತಬೈಲು ಹೊಸಮನೆ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಧರ್ಮನೇಮ, ಬೈದರ್ಕಳ ನೇಮೋತ್ಸವ

ಕಾಸರಗೋಡು: ಅಡ್ಕತ್ತಬೈಲು ಹೊಸಮನೆ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ  ಶ್ರೀ ಧೂಮಾವತಿ ದೈವದ ಧರ್ಮನೇಮ, ಪುನಃ ಪ್ರತಿಷ್ಠಾ ವಾರ್ಷಿಕೋತ್ಸವ, ಬ್ರಹ್ಮಬಲಿ ಮತ್ತು ಬೈದರ್ಕಳ ನೇಮೋತ್ಸವ ಮಾರ್ಚ್ ೨೨ರಿಂದ ೨೫ರ ವರೆಗೆ ಜರಗಲಿರುವುದು.

೨೨ರಂದು ಬೆಳಿಗ್ಗೆ ೮ಕ್ಕೆ ಗಣಪತಿಹೋಮ, ೧೧ಕ್ಕೆ ಮುಡಿಪುಶುದ್ಧಿ (ಪಾನಕಪೂಜೆ),  ರಾತ್ರಿ ೭ಕ್ಕೆ ಪಳ್ಳದಕೊಟ್ಯದಿಂದ ಶ್ರೀ ಧೂಮಾವತಿ ದೈವದ ಭಂಡಾರ ಹೊರಡುವುದು, ೮ಕ್ಕೆ ಅರ್ಜಾಲ್ ಶ್ರೀ ಧೂಮಾವತಿ ದೈವದ ಭಂಡಾರ ಹೊರಡುವುದು,  ೯ರಿಂದ ಗುಳಿಗದೈವದ ಕೋಲ, ಅನ್ನಸಂತರ್ಪಣೆ ನಡೆಯಲಿದೆ.

೨೩ರಂದು ಪುನಃ ಪ್ರತಿಷ್ಠಾ ವಾರ್ಷಿಕ ದಿನಾಚರಣೆ ಅಂಗವಾಗಿ ಬೆಳಿಗ್ಗೆ ೫.೩೦ಕ್ಕೆ ಗಣಪತಿಹೋಮ, ಕಲಶಪೂಜೆ, ೭ಕ್ಕೆ ನಾಗತಂಬಿಲ, ಬ್ರಹ್ಮೆರ್, ದೇಯಿ ಬೈದ್ಯೆತಿ, ಕೋಟಿಚೆನ್ನಯ್ಯ ಹಾಗೂ ಇತರ ಪರಿವಾರ ದೈವಗಳಿಗೆ ಪೂಜೆ, ೯ಕ್ಕೆ ಅರ್ಜಾಲ್ ಶ್ರೀ ಧೂಮಾವತಿ ದೈವದ ಧರ್ಮನೇಮ, ೧೧ಕ್ಕೆ ಹೊಸಮನೆ ಶ್ರೀ ಧೂಮಾವತಿ ದೈವದ ಧರ್ಮನೇಮ, ಮಧ್ಯಾಹ್ನ ೧ ಗಂಟೆಗೆ ಅನ್ನಸಂತರ್ಪಣೆ, ಸಂಜೆ ೪ಕ್ಕೆ ಕೊರತಿ ಅಮ್ಮನ ಕೋಲ,  ಶ್ರೀ ಧೂಮಾವತಿ ದೈವದ ಭಂಡಾರ ನಿರ್ಗಮನ, ೫.೩೦ಕ್ಕೆ ಬೆದ್ರಡ್ಕ ಶ್ರೀ ಅಯ್ಯಪ್ಪಮಹಿಳಾ ಭಜನಾ ಸಂಘದವರಿಂದ ಭಜನೆ, ರಾತ್ರಿ ೭ಕ್ಕೆ ದೀಪಾರಾಧನೆ, ೭.೩೦ಕ್ಕೆ ಕುಣಿತ ಭಜನೆ, ೮ರಿಂದ ಅನ್ನ ಸಂತರ್ಪಣೆ, ೯ಕ್ಕೆ ತುಳು ನಾಟಕ ‘ಕಥೆ ಎಡ್ಡೆಂಡು’ ಪ್ರದರ್ಶನಗೊಳ್ಳಲಿದೆ. ೨೪ರಂದು ಬೆಳಿಗ್ಗೆ ೮ಕ್ಕೆ ಮಹಾಪೂಜೆ, ಮಧ್ಯಾಹ್ನ ೧ ಗಂಟೆಗೆ ಅನ್ನ ಸಂತರ್ಪಣೆ, ಸಂಜೆ ೬ಕ್ಕೆ ಬೈದರ್ಕಳ  ಪ್ರದರ್ಶನ, ರಾತ್ರಿ ೭ಕ್ಕೆ ಬ್ರಹ್ಮಬಲಿ ಮತ್ತು ಬೈದರ್ಕಳ ರಂಗಸ್ಥಳಕ್ಕೆ ಇಳಿಯುವುದು, ೮ಕ್ಕೆ ಅನ್ನ ಸಂತರ್ಪಣೆ, ೧೨ ಗಂಟೆಗೆ ಆಯುಧ ಒಪ್ಪಿಸುವಿಕೆ, ೨೫ರಂದು ಮುಂಜಾನೆ ೩ ಗಂಟೆಗೆ ಮಾಯಂದಾಳ ದೇವಿಯ ದರ್ಶನ, ೪ಕ್ಕೆ ಪೂಜಾರಿಗಳ ಸೇಟ್, ಬೆಳಿಗ್ಗೆ ೬ಕ್ಕೆ ಬೈದರ್ಕಳ ಸೇಟ್, ೭ ಗಂಟೆಗೆ ಪ್ರಸಾದ ವಿತರಣೆ, ಹರಕೆ ಒಪ್ಪಿಸುವಿಕೆ ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page