ಅಧ್ಯಾಪಕ ಅಸೌಖ್ಯ ತಗಲಿ ನಿಧನ

ಕಾಸರಗೋಡು: ಅಸೌಖ್ಯ ತಗಲಿ ಚಿಕಿತ್ಸೆ ಯಲ್ಲಿದ್ದ  ತಳಂಗರೆ ಎಂ.ಎ.ಎ.ಎಲ್.ಪಿ ಶಾಲೆ ಅಧ್ಯಾ ಪಕ ಹಾಗೂ ಅಧ್ಯಾಪಕ ತರಬೇತುದಾರನಾದ ಕರಿವೆಳ್ಳೂರು ಪುತ್ತೂರಿನ ಪಿ. ಸತೀಶನ್ (52) ಮೃತಪಟ್ಟರು. ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ನಿನ್ನೆ ಬೆಳಿಗ್ಗೆ ನಿಧನ ಸಂಭವಿಸಿದೆ. ಹಗ್ಗ ಜಗ್ಗಾಟ ಕ್ರೀಡಾಪಟು, ರೆಫರಿ, ಹಗ್ಗ ಜಗ್ಗಾಟ ಅಸೋಸಿಯೇಶನ್ ಕಣ್ಣೂರು ಜಿಲ್ಲಾ ಉಪಾಧ್ಯಕ್ಷರೂ ಆಗಿದ್ದರು. ದಿ| ತೋಟೋನ್ ಕೃಷ್ಣನ್-ದೇವಕಿ ದಂಪತಿ ಪುತ್ರನಾದ ಮೃತರು ಪತ್ನಿ ನಂದಿನಿ  ಮಕ್ಕಳಾದ ಸಿದ್ಧಾರ್ಥ್, ಆದಿತ್ಯ, ಸಹೋದರರಾದ ಸುನಿಲ್ ಕುಮಾರ್, ಸುರೇಶ್ ಕುಮಾರ್ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page