ಅನಂತಪುರ ಉಳಿಸಿ ಅಭಿಯಾನಕ್ಕೆ ವ್ಯಾಪಕ ಬೆಂಬಲ

ಕುಂಬಳೆ: ಅನಂತಪುರದಲ್ಲಿ ದುರ್ಗಂಧದಿಂದ ಸ್ಥಳೀಯರಿಗೆ ಸಮಸ್ಯೆ ಉಂಟಾಗುತ್ತಿರುವುದನ್ನು ಪ್ರತಿಭಟಿಸಿ ಕೋಳಿ ತ್ಯಾಜ್ಯ ಸಂಸ್ಕರಣೆ ಘಟಕದ ವಿರುದ್ಧ ಕಳೆದ ಗಾಂಧಿ ಜಯಂತಿ ದಿನದಿಂದ ನಡೆಸುತ್ತಿರುವ ಅನಿರ್ದಿಷ್ಟ ಸತ್ಯಾಗ್ರಹ ಚಪ್ಪರಕ್ಕೆ ಎಂಡೋಸ ಲ್ಫಾನ್ ವಿರುದ್ಧ ಹೋರಾಟದ ಮುಂ ಚೂಣಿ ನಾಯಕ ಡಾ| ಮೋಹನ್ ಕುಮಾರ್ ಪಡ್ರೆ ಭೇಟಿ ನೀಡಿ ಸತ್ಯಾಗ್ರಹಿಗಳಿಗೆ ಬೆಂಬಲ ನೀಡಿದರು.

ಸೇವ್ ಅನಂತಪುರ ವತಿಯಿಂದ ನಡೆಯುತ್ತಿರುವ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಹವ್ಯಕ ಪರಿಷತ್ ಕುಂಬಳೆ ವಲಯದ ಅಧ್ಯಕ್ಷರು, ಕಾರ್ಯದರ್ಶಿ  ಹಾಗೂ ಪದಾಧಿಕಾರಿಗಳು ಭೇಟಿ ನೀಡಿ ಬೆಂಬಲ ಸೂಚಿಸಿದರು.

Leave a Reply

Your email address will not be published. Required fields are marked *

You cannot copy content of this page