ಅಬುದಾಬಿಯಿಂದ ಊರಿಗೆ ತಲುಪಿದ ಯುವಕ ನಾಪತ್ತೆ

ಕಾಸರಗೋಡು: ಅಬುದಾಬಿ ಯಿಂದ ಊರಿಗೆ ತಲುಪಿದ ಯುವಕ ನಾಪತ್ತೆಯಾ ಗಿರುವುದಾಗಿ ಬೇಡಗಂ ಪೊಲೀಸರಿಗೆ ದೂರು ನೀಡಲಾಗಿದೆ. ಬೇಡಗಂ ಗದ್ದೆಮೂಲೆಯ ಕೃಷ್ಣ ಪ್ರಸಾದ್ (24) ನಾಪತ್ತೆಯಾದ ಯುವಕ. ಅಬುದಾ ಬಿಯ  ಖ್ಯಾತ ಸಂಸ್ಥೆಯೊಂ ದರಲ್ಲಿ ದುಡಿಯುತ್ತಿರುವ ಕೃಷ್ಣ ಪ್ರಸಾದ್ ಈತಿಂಗಳ ೨೧ರಂದು ಊರಿಗೆ ಹಿಂತಿರುಗಲೆಂದು ಕೊಚ್ಚಿ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರೆಂದೂ ಬಳಿಕ ಅವರು ಮನೆಗೆ ತಲುಪದೆ ನಾಪತ್ತೆಯಾಗಿರು ವುದಾಗಿ ಪೊಲೀಸರಿಗೆ  ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

You cannot copy contents of this page