ಆರ್ಯ ಯಾನೆ ಮರಾಠ ಸೇವಾ ಸಮಾಜದಿಂದ ಪ್ರತಿಭಾಪುರಸ್ಕಾರ, ಸಾಧಕರಿಗೆ ಸನ್ಮಾನ

ಕಾಸರಗೋಡು:  ಆರ್ಯ ಯಾನೆ ಮರಾಠ ಸಮಾಜ ಸೇವಾ ಸಂಘ ಮಂಗಳೂರು, ಕಾಸರಗೋಡು ಇದರ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ, ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಸಹಾಯಧನ, ಸಾಧಕರ ಸನ್ಮಾನ ಸಮಾರಂಭ ನಿನ್ನೆ  ಪಿಲಿಕುಂಜೆ ಶ್ರೀ ಭಗವತೀ ಸಭಾ ಭವನದಲ್ಲಿ ಜರಗಿತು. ಸಂಘದ ಅಧ್ಯಕ್ಷ ಯು. ಮೋಹನ್ ರಾವ್ ಭೋಂಸ್ಲೆ ಅಧ್ಯಕ್ಷತೆ ವಹಿಸಿದರು. ಶಾಸಕ ಎನ್.ಎ ನೆಲ್ಲಿಕುನ್ನು,  ಶಾಸಕ ಸಿ.ಎಚ್. ಕುಂಞಂಬು, ವಿಶ್ರಾಂತ ಪ್ರಾಧ್ಯಾಪಿಕೆ ಡಾ. ಮಹೇಶ್ವರಿ ಯು ಅತಿಥಿಗಳಾಗಿ ಭಾಗವಹಿಸಿದರು.  ವಿಮಲಾ ಶ್ರೀಧ ರನ್,  ಪ್ರೇಮಲತಾ ವೈ ರಾವ್, ಹರೀಶ್ ರಾವ್ ಚಂದ್ರಮಾನ್ ಸಹಿತ ಹಲವರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಈ ವರ್ಷದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತgಣೆ, ಸಮಾಜ ಸಾಧಕರಿಗೆ ಸನ್ಮಾನ, ನ್ಯಾಯವಾದಿ ಎಲ್ಲೋಜಿ ರಾವ್ ಕೌಮಾರ್ ಸಂಸ್ಮರಣೆ, ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಜರಗಿತು. ಸಮಾಜದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

Leave a Reply

Your email address will not be published. Required fields are marked *

You cannot copy content of this page