ಆಸ್ಪತ್ರೆಯಲ್ಲಿ ದಾದಿಯನ್ನು ಇರಿದು ಬರ್ಭರ ಕೊಲೆ

ಭೋಪಾಲ್: ಆಸ್ಪತ್ರೆಗೆ  ನುಗ್ಗಿದ ದುಷ್ಕರ್ಮಿ ದಾದಿಯ ಕುತ್ತಿಗೆ ಕೊಯ್ದು ಕೊಲೆಗೈದ ಭೀಕರ ಘಟನೆ ಮಧ್ಯಪ್ರದೇಶದ ನರಸಿಂಗ್‌ಪುರ್‌ನಲ್ಲಿ ನಡೆದಿದೆ. ಅಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ದಾದಿಯಾಗಿರುವ ಸಂಧ್ಯಾ ಚೌದರಿ (18) ಕೊಲೆಗೈಯ್ಯಲ್ಪಟ್ಟ ದುರ್ದೈವಿ. ನಿನ್ನೆ ಸಂಜೆ 3 ಗಂಟೆಗೆ ಈ ಘಟನೆ ನಡೆದಿದೆ. ಆಸ್ಪತ್ರೆಯಲ್ಲಿ ರೋಗಿಗಳ ಸಹಿತ ಹಲವರು ಇದ್ದಾಗಲೇ ಅಲ್ಲಿಗೆ ತಲುಪಿದ ಯುವಕ ಚಾಕುವಿನಿಂದ ಸಂಧ್ಯಾರ ಕುತ್ತಿಗೆಗೆ ಇರಿದಿದ್ದಾನೆ. ಅಲ್ಲಿದ್ದವರು ಬೊಬ್ಬಿಡುತ್ತಿದ್ದಂತೆ ದುಷ್ಕರ್ಮಿ ಓಡಿ ಪರಾರಿಯಾಗಿದ್ದಾನೆ.  ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

RELATED NEWS

You cannot copy contents of this page