ಒಂದು ಗಡು ಕ್ಷೇಮ ಪಿಂಚಣಿ 24ರಿಂದ ವಿತರಣೆ

ತಿರುವನಂತಪುರ: ರಾಜ್ಯ ಸರಕಾರದ ಕ್ಷೇಮ ಪಿಂಚಣಿ ಒಂದು ಗಡು ಈ ತಿಂಗಳ 24ರಿಂದ ವಿತರಿಸಲಾಗುವು ದೆಂದು ಸಚಿವ ಕೆ.ಎನ್. ಬಾಲಗೋಪಾಲ್ ತಿಳಿಸಿದ್ದಾರೆ. ಅರ್ಹ ಫಲಾನುಭವಿಗಳಿಗೆ 1600 ರೂಪಾಯಿಯಂತೆ ಲಭಿಸುವುದು. ಪಿಂಚಣಿ ವಿತರಣೆಗಾಗಿ 900 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಬ್ಯಾಂಕ್ ಖಾತೆ ನಂಬ್ರ ನೀಡಿದವರಿಗೆ ಖಾತೆ ಮೂಲಕ, ಇತರರಿಗೆ ಸಹಕಾರಿ ಸಂಘಗಳ ಮೂಲಕ ಮನೆಗಳಿಗೆ ತಲುಪಿಸಲಾಗುವುದೆಂದು ಸಚಿವ ತಿಳಿಸಿದ್ದಾರೆ. ಇದೇ ವೇಳೆ ಐದು ತಿಂಗಳ ಪಿಂಚಣಿ ವಿತರಣೆಗೆ ಇನ್ನೂ ಬಾಕಿಯಿದೆ ಎಂದು ಹೇಳಲಾಗುತ್ತಿದೆ.

RELATED NEWS

You cannot copy contents of this page