ಕಟ್ಟಡ ಕುಸಿದು ಬಿದ್ದು 3 ಮಂದಿ ಮಣ್ಣಿನಡಿಯಲ್ಲಿ
ತೃಶೂರು: ಕೊಡಕ್ಕರದಲ್ಲಿ ಎರಡು ಮಹಡಿಯ ಕಟ್ಟಡ ಕುಸಿದು ಬಿದ್ದು ಓರ್ವ ಮೃತಪಟ್ಟು ಇಬ್ಬರು ಅವಶಿಷ್ಟಗಳೆಡೆಯಲ್ಲಿ ಸಿಲುಕಿಕೊಂಡಿ ದ್ದಾರೆ. ಬಂಗಾಳ ನಿವಾಸಿಗಳಾದ ರಾಹುಲ್ (19), ರೂಪೇಲ್ (21), ಅಲೀಂ (30) ಎಂಬಿವರು ಕಟ್ಟಡದ ಅವಶಿಷ್ಟಗಳೊಳಗೆ ಸಿಲುಕಿದ್ದು ಇವರಲ್ಲಿ ಓರ್ವನನ್ನು ಹೊರ ತೆಗೆಯಲಾಗಿದೆ. ಓರ್ವನ ಮೃತದೇಹವನ್ನು ಪತ್ತೆಹಚ್ಚಲಾಗಿದೆ. ಇನ್ನೋರ್ವನಿಗೆ ಬೇಕಾಗಿ ಪೊಲೀಸರು ಹಾಗೂ ಸ್ಥಳೀಯರು ಹುಡುಕಾಟ ನಡೆಸುತ್ತಿದ್ದಾರೆ.