ಕಟ್ಟಡ ಮುರಿದು ತೆಗೆಯುತ್ತಿದ್ದಾಗ ಮೇಲ್ಛಾವಣಿ ಕುಸಿತ: ಇಬ್ಬರಿಗೆ ಗಾಯ

ಕಾಸರಗೋಡು:  ಕಟ್ಟಡ ಮುರಿದು ತೆಗೆಯುತ್ತಿದ್ದ ವೇಳೆ ಮೇಲ್ಛಾವಣಿ ಕುಸಿದು ಬಿದ್ದು ತಮಿಳುನಾಡು ನಿವಾಸಿಗಳಾದ ಇಬ್ಬರು ಕಾರ್ಮಿಕರು ಗಾಯಗೊಂಡರು. ತಾಯಲಂಗಾಡಿ ಯಲ್ಲಿ ಹಳೆಯ ಕಟ್ಟಡ ಮುರಿಯುತ್ತಿ ದ್ದಾಗ ನಿನ್ನೆ ಸಂಜೆ ಈ ಘಟನೆ ನಡೆದಿದೆ.  ತಮಿಳುನಾಡು ಸೇಲಂ ತಲಕುರಿಚ್ಚಿ ನಿವಾಸಿಗಳಾದ ಜಾನ್ ಅಲೆಕ್ಸಾಂಡರ್ (37), ಇಬ್ರಾಹಿಂ (25) ಎಂಬಿವರು ಗಾಯಗೊಂಡಿದ್ದಾರೆ. ಇವರನ್ನು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಛಾವಣಿ ಕುಸಿದಾಗ ಕಲ್ಲುಗಳೆಡೆ ಯಲ್ಲಿ ಸಿಲುಕಿದ ಕಾರ್ಮಿಕರನ್ನು ಕಾಸರಗೋಡು ಅಗ್ನಿಶಾಮಕದಳ ಹಾಗೂ ನಾಗರಿಕರು ಸೇರಿ ರಕ್ಷಿಸಿದ್ದಾರೆ.

RELATED NEWS

You cannot copy contents of this page