ಕುಂಬಳೆ ಮಂಡಲ ಸಮಿತಿಯಿಂದ ದೀನ್ ದಯಾಳ್ ಸಂಸ್ಮರಣೆ ಉದ್ಘಾಟನೆ

ಕುಂಬಳೆ : ಬಿಜೆಪಿ ಕುಂಬಳೆ ಮಂ ಡಲ ಸಮಿತಿ ವತಿಯಿಂದ ಪಂಡಿತ ದೀನ್ ದಯಾಳ್ ಉಪದ್ಯಾಯರ ಜನ್ಮ ದಿನಾಚರಣೆ ಯನ್ನು ಅವರ ಭಾವ ಚಿತ್ರಕ್ಕೆ ಪುಷ್ಪರ್ಚನೆ ಮಾಡುವ ಮೂಲಕ ಆಚರಿಸಲಾಯಿತು. ಕುಂಬಳೆ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಕೆ ಮುರಳೀಧರ ಯಾದ್ವೃ ಆ¥್ತ[ಟ್ಛಿ ಪಂಡಿತ ದಿನದಯಾ¼್ವ ಉಪಾಧ್ಯಯ ರವರ ಕುರಿತು ಮಾತನಾಡಿದರು . ಬಿಜೆಪಿ ಕುಂಬಳೆ ಮಂಡಲ ಉಪಾಧ್ಯಕ್ಷ ಕೆ ರಮೇಶ ಭಟ್, ಪ್ರೇಮಲತಾ ಎಸ್, ಕಾರ್ಯದರ್ಶಿ ಸ್ವಾಗತ ಸೀತಾಂಗೋಳಿ, ಧನರಾಜ, ಕುಂಬಳೆ ಪಂಚಾಯತ್ ದಕ್ಷಿಣ ವಲಯ ಅಧ್ಯಕ್ಷ ಸುಜಿತ್ ರೈ, ಉತ್ತರ ವಲಯ ಅಧ್ಯಕ್ಷ ಪ್ರದೀಪ ಆರಿಕ್ಕಾಡಿ, ಯುವಮೋರ್ಚಾ ಕುಂಬಳೆ ಪಂಚಾಯತ್ ಅಧ್ಯಕ್ಷರಾದ ಅಜಿತ ಕುಮಾರ್, ಪಂಚಾಯತ್ ಸದಸ್ಯರಾದ ವಿವೇಕಾನಂದ ಶೆಟ್ಟಿ, ಪ್ರೇಮಾವತಿ, ಪುಷ್ಪಲತಾ ಕಾಜೂರ್,ಸುಲೋಚನಾ ಹಿರಿಯರಾದ ಶಶಿ ಕುಂಬಳೆ, ವರುಣಕುಮಾರ್ ಉಪಸ್ಥಿತರಿದ್ದರು. ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ್ ಮಯ್ಯ ಸ್ವಾಗತಿಸಿ, ಮಂಡಲ ಕಾರ್ಯದರ್ಶಿ ಕುಂಬಳೆ ಸುಧಾಕರ ಕಾಮತ್ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page