ಕುಡಿಯುವ ನೀರಿನ ಬದಲು ಪೆಟ್ಟು: ಪಂ. ಸದಸ್ಯನ ವಿರುದ್ಧ ಕೇಸು ದಾಖಲು

ಬದಿಯಡ್ಕ: ಕುಡಿಯುವ ನೀರು ವಿತರಣೆ ಮೊಟಕುಗೊಂಡಿರುವುದರ ಕುರಿತು ದೂರು ನೀಡಲು ಹೋದ ಕೂಲಿ ಕಾರ್ಮಿಕನಿಗೆ ಹಲ್ಲೆಗೈದ ಆರೋಪದಂತೆ ಬದಿಯಡ್ಕ ಪಂಚಾಯತ್  ಸದಸ್ಯನೂ, ಮುಸ್ಲಿಂ ಲೀಗ್ ನೇತಾರನಾದ ಹಮೀದ್ ಪಳ್ಳತ್ತಡ್ಕ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಪಳ್ಳತ್ತಡ್ಕದ ಕೃಷ್ಣ (೫೬) ಎಂಬವರ ದೂರಿನಂತೆ ಈ ಕೇಸು ದಾಖಲಿಸಲಾಗಿದೆ. ಹಲ್ಲೆಯಿಂದ ಗಾಯಗೊಂಡ ಕೃಷ್ಣ ಚಿಕಿತ್ಸೆ ಪಡೆದಿದ್ದರು. ಪತ್ನಿ ಚಿಕಿತ್ಸೆಯಲ್ಲಿದ್ದು ದರಿಂದ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿ ಲ್ಲವೆಂದು ಕೃಷ್ಣ ತಿಳಿಸಿದ್ದಾರೆ.  ಇದೇ ವೇಳೆ ಕೃಷ್ಣರಿಂದ ದೂರನ್ನು ಹಿಂಪಡೆ ಯುವಂತೆ ಮಾಡಲು ಹಾಗೂ ಕೇಸು ದಾಖಲಿಸದಿರಲು ಭಾರೀ ಮಧ್ಯಸ್ಥಿಕೆ ನಡೆದಿರುವುದಾಗಿಯೂ ಆರೋಪ ಗಳಿವೆ. ಈ ತಿಂಗಳು ೧೮ರಂದು ಸಂಜೆ ಕೃಷ್ಣರಿಗೆ ಹಲ್ಲೆಗೈದ ಪ್ರಕರಕಣ ನಡೆದಿತ್ತು.

RELATED NEWS

You cannot copy contents of this page