ಕುಬಣೂರು ರಸ್ತೆಯಲ್ಲಿ ತ್ಯಾಜ್ಯ ಉಪೇಕ್ಷೆ: ಸಂಚಾರ ಸಮಸ್ಯೆ

ಉಪ್ಪಳ: ಎರಡು ಗೋಣಿ ಚೀಲದಲ್ಲಿ ತ್ಯಾಜ್ಯ ತುಂಬಿಸಿ ನುಡುರಸ್ತೆಯಲ್ಲಿ ಉಪೇಕ್ಷಿಸಿದ ಘಟನೆ ನಡೆದಿದೆ. ಶಾಂತಿಗುರಿ-ಕುಬಣೂರು ಸುವರ್ಣಗಿರಿ ಹೊಳೆ ಸಮೀಪದ ರಸ್ತೆಯಲ್ಲಿ ತ್ಯಾಜ್ಯ ಉಪೇಕ್ಷಿಸಲಾಗಿದೆ. ಪ್ಲಾಸ್ಟಿಕ್ ಸಹಿತ ವಿವಿಧ ತ್ಯಾಜ್ಯ ಹೊಂದಿದ ಎರಡು ಗೋಣಿಚೀಲವನ್ನು ಉಪೇಕ್ಷಿಸಲಾಗಿದೆ. ಇದರಿಂದ ಈ ಪರಿಸರದ ಕ್ಷೇತ್ರ, ಮಸೀದಿ ಸಹಿತ ವಿವಿಧ ಕಡೆ ಸಂಚರಿಸುವ ಜನರಿಗೆ ಸಮಸ್ಯೆ ಉಂಟಾಗಿದೆ. ಬಳಿಕ ತ್ಯಾಜ್ಯವನ್ನು ಸ್ಥಳೀಯರು ತೆರವುಗೊಳಿಸಿದ್ದಾರೆ. ವರ್ಷಗಳ ಹಿಂದೆ ಇದೇ ರಸ್ತೆಯ ಸಮೀಪ ವಿರುವ ಸುವರ್ಣಗಿರಿ ಹೊಳೆಯಲ್ಲಿ ಆಹಾರ ಅವಶಿಷ್ಟ ಸಹಿತ ವಿವಿಧ ತ್ಯಾಜ್ಯವನ್ನು ಗೋಣಿ ಚೀಲದಲ್ಲಿ ತಂದು ನೀರಿಗೆ ಹಾಕಿದ ಘಟನೆ ನಡೆದಿತ್ತು. ಈ ರಸ್ತೆ ಹಾಗೂ ಹೊಳೆಗೆ ನಿರಂತರ ತ್ಯಾಜ್ಯ ಎಸೆÀಯುತ್ತಿದ್ದು, ಈ ಬಗ್ಗೆ ಸಂಬAಧ ಪಟ್ಟ ಪಂಚಾಯತ್ ಅಧಿಕೃತರು ಸಿ.ಸಿ ಕ್ಯಾಮರ ಅಳವಡಿಸಿ ತ್ಯಾಜ್ಯ ಉಪೇಕ್ಷಿಸುವವರ ಪತ್ತೆಗೆ ಕ್ರಮ ಕೈಗೊಳ್ಳಬೇಕೆಂದು ಊರವರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page