ಕುಳದಪಾರೆಯಲ್ಲಿ ಒತ್ತೆಕೋಲ ಮಹೋತ್ಸವ 21, 22ರಂದು


ಮುಳ್ಳೇರಿಯ: ಕುಳದಪಾರೆಯಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಮಹೋತ್ಸವ ಈತಿಂಗಳ 21 ಹಾಗೂ 22ರಂದು ನಡೆಯಲಿದೆ.
21ರಂದು ರಾತ್ರಿ 7 ಗಂಟೆಗೆ ಕುಳದ ದೈವಸ್ಥಾನದಿಂದ ಕುಳದಪಾರೆಗೆ ಭಂಡಾರ ಹೊರಡುವುದು, 8 ಗಂಟೆಗೆ ಮೇಲೇರಿಗೆ ಅಗ್ನಿಸ್ಪರ್ಶ, 11ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕುಳ್ಚಾಟ, 22ರಂದು ಮುಂಜಾನೆ 5ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿಸೇವೆ, ಬೆಳಿಗ್ಗೆ 7ರಿಂದ ಪ್ರಸಾದ ವಿತರಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಂ ಗವಾಗಿ 21ರಂದು ರಾತ್ರಿ 9ರಿಂದ ಕುಳದಪಾರೆ ಅಂಗನವಾಡಿ ಮಕ್ಕಳಿಂ ದ ವಿವಿಧ ಕಾರ್ಯಕ್ರಮ, 9.30ರಿಂದ ಗಜಾನನ ನಾಟ್ಯಾಂಜಲಿ ಮುಳ್ಳೇರಿಯ ಅವರಿಂದ ನೃತ್ಯ ಶಿಲ್ಪಂ, ಗಂಟೆ 1ರಿಂದ ಮಹಾವಿಷ್ಣು ಯಕ್ಷಗಾನ ಕಲಾ ಸಂಘ ಸುಳ್ಯಪದವು ಇವರಿಂದ ಯಕ್ಷಗಾನ ಬಯಲಾಟ ‘ಶ್ರೀ ಹರಿದರ್ಶನ’ ಪ್ರದರ್ಶನಗೊಳ್ಳಲಿದೆ.

RELATED NEWS

You cannot copy contents of this page