ಕುಳೂರು ಶಾಲಾ ವಿದ್ಯಾರ್ಥಿಗಳ ಬಯಲು ಪ್ರವಾಸ

ಮಂಜೇಶ್ವರ : ಮಕ್ಕಳಲ್ಲಿ ಕೃಷಿಯ ಕುರಿತು ಆಸಕ್ತಿ ಮೂಡಿಸಲು ಹಾಗೂ ಕೃಷಿ ವಿಧಾನಗಳ ಕುರಿತು ತಿಳಿಯಲು ಕುಳೂರÀÄ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬಯಲು ಪ್ರವಾಸ ಕೈಗೊಂಡರು. ಕುಳೂರಿನ ಪ್ರಗತಿಪರ ಕೃಷಿಕ ಪಿ. ಆರ್. ಶೆಟ್ಟಿ ಪೊಯ್ಯೇಲುರ ಕೃಷಿ ಜಮೀನಿಗೆ ವಿದ್ಯಾರ್ಥಿಗಳು ಭೇಟಿ ನೀಡಿ ಭತ್ತ, ಅಡಿಕೆ, ತೆಂಗು, ತರಕಾರಿ ಹಾಗೂ ಹಣ್ಣು ಹಂಪಲುಗಳ ಕೃಷಿ ವಿಧಾನಗಳ ಬಗ್ಗೆ ತಿಳಿದುಕೊಂಡರು. ಜೊತೆಗೆ ಗದ್ದೆಗೆ ಇಳಿದು ನೇಜಿ ನೆಡುವ ಮೂಲಕ ನೈಜ ಅನುಭವವನ್ನು ಪಡೆದರು. ಕೃಷಿ ಕೆಲಸಗಳು ಹಾಗೂ ವಿಧಾನಗಳ ಬಗ್ಗೆ ಪಿ. ಆರ್. ಶೆಟ್ಟಿ ಪೊಯ್ಯೇಲುರ ಜೊತೆ ಸಂದರ್ಶನ ನಡೆಸಿ ಹಿಂದಿನ ಹಾಗೂ ಈಗಿನ ಕೃಷಿ ವಿಧಾನದಲ್ಲಿ ಆದ ಬದಲಾವಣೆಗಳ ಬಗ್ಗೆ ತಿಳಿದುಕೊಂಡರು. ಅಧ್ಯಾಪಕ ಜಯಪ್ರಶಾಂತ್ ಪಾಲೆಂಗ್ರಿ ಬಯಲು ಪ್ರವಾಸದ ನೇತÀÈತ್ವ ವಹಿಸಿದ್ದರು.

Leave a Reply

Your email address will not be published. Required fields are marked *

You cannot copy content of this page