ಕೇರಳ ಸ್ಟೇಟ್ ಸರ್ವೀಸ್ ಪೆನ್ಶನರ್ಸ್ ಯೂನಿಯನ್ ಮಂಜೇಶ್ವರ ಘಟಕ ವಾರ್ಷಿಕ ಮಹಾಸಭೆ

ಮಂಜೇಶ್ವರ: ಕೇರಳ ಸ್ಟೇಟ್ ಸರ್ವೀಸ್ ಪೆನ್ಶನರ್ಸ್ ಯೂನಿಯನ್ ಮಂಜೇಶ್ವರ ಘಟಕದ ವಾರ್ಷಿಕ ಮಹಾಸಭೆ ಹೊಸಂಗಡಿ ಶ್ರೀ ನಿತ್ಯಾನಂದ ಧ್ಯಾನ ಮಂದಿರದಲ್ಲಿ ಘಟಕದ ಅಧ್ಯಕ್ಷೆ ಸುಲೋಚನಾ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಜಿಲ್ಲಾ ಕೋಶಾಧಿಕಾರಿ ಗೋಪಾಲಕೃಷ್ಣನ್ ಉಧ್ಘಾಟಿಸಿದರು. ಬ್ಲೋಕ್ ಅಧ್ಯಕ್ಷ ರವಿಚಂದ್ರ ಉದ್ಯಾವರ, ಕಾರ್ಯದರ್ಶಿ ಶೀನಪ್ಪ ಪೂಜಾರಿ ಅಲಾರ್ ದುರ್ಗಿಪಳ್ಳ,ಮಾಜಿ ಅಧ್ಯಕ್ಷ ಭಾಟಿಯಾ, ಬ್ಲೋಕ್ ಉಪಾಧ್ಯಕ್ಷ ರವೀಂದ್ರನಾಥ್ ನಾಯಕ್ ಶೇಣಿ, ಭಾಸ್ಕರ ರಾವ್ ಕೆಡೆಂಜಿ ಉಪಸ್ಥಿತರಿದ್ದರು.
ಘಟಕದ ಕಾರ್ಯದರ್ಶಿ ಶಶಿಕಲಾ ಸ್ವಾಗತಿಸಿದರು. ಪಿಂಚಣಿದಾರರ ಸವಲತ್ತುಗಳನ್ನು ತಡೆಹಿಡಿದ ಕೇರಳ ಸರಕಾರದ ಧೋರಣೆಗಳನ್ನು ಮುಖಂಡರು ಖಂಡಸಿ ತಡೆಹಿಡಿದ ಸವಲತ್ತುಗಳನ್ನು ಕೂಡಲೇ ನೀಡಬೇಕೆಂದು ಒತ್ತಾಯಿಸಿದರು. ಮುಂದಿನ ವರ್ಷದ ಪದಾಧಿಕಾರಿಗಳ ಚುನಾವಣೆಯನ್ನು ಸದಾಶಿವ ರಾವ್ ನಡೆಸಿಕೊಟ್ಟರು. ಉದಯಶಂಕರ ಭಟ್ ಅಧ್ಯಕ್ಷರಾಗಿ, ಪುಂಡಲೀಕ ನಾಯಕ್ ಕಾರ್ಯದರ್ಶಿಯÁಗಿ, ೨೧ ಮಂದಿ ಆಯ್ಕೆಯಾದರು. ನೂತನ ಅಧ್ಯಕ್ಷ ಉದಯಶಂಕರ ಭಟ್ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page