ಕೊನೆಯ ಮತದಾನ ಮಾಡಿ ಹಿರಿಯ ಕಮ್ಯೂನಿಸ್ಟ್ ನಾರಾಯಣನ್ ನಿಧನ

ಕಾಸರಗೋಡು: ಎರಡು ದಿನದ ಹಿಂದೆ ‘ಹೋಂ ಓಟ್’ ಮಾಡಿದ ಹಿರಿಯ ಕಮ್ಯೂನಿಸ್ಟ್‌ರಾಗಿದ್ದ ವ್ಯಕ್ತಿ ನಿಧನರಾದರು. ನಗರಸಭೆಯ ೧೭ನೇ ವಾರ್ಡ್ (ಚೆನ್ನಿಕರ)ದ ಮತದಾರರಾ ಗಿರುವ ಕೆ. ನಾರಾಯಣನ್ (೮೬) ನಿಧನರಾದರು.

ಕಳೆದ ಚುನಾವಣೆಗಳಲ್ಲಿ ಇವರು ಬೂತ್‌ಗೆ ತೆರಳಿ ಮತದಾನಗೈದಿದ್ದರು. ಅಣಂಗೂರು ಎಲ್‌ಪಿ ಶಾಲೆಯ ೧೫೭ನೇ ನಂಬ್ರ ಬೂತ್‌ನ ಕ್ರಮಸಂಖ್ಯೆ ೬೫೭ನೇ ಮತದಾರರಾಗಿದ್ದರು ಇವರು. ಈ ತಿಂಗಳ ೧೯ರಂದು ಮನೆಯಲ್ಲಿ ಮತದಾನ ಮಾಡಿದರು.

ಮೊನ್ನೆ ಮಧ್ಯಾಹ್ನ ಅಸ್ವಸ್ಥತೆ ಹೆಚ್ಚಾದ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಮಧ್ಯಾಹ್ನ ನಿಧನರಾದರು. ಹಿಂದೆ ಚುನಾವಣೆಯ ಸಮಯದಲ್ಲಿ ಎಕೆಜಿ ಮೊದಲಾದ ಹಿರಿಯ ನಾಯಕರ ಜೊತೆಯಲ್ಲಿ ಕಾರ್ಯಾಚರಿಸಿದ್ದರು. ಇವರ  ಸರಿಯಾದ ಪ್ರಾಯ ೯೯ ಆಗಿದ್ದು, ಮತದಾರ ಯಾದಿಯಲ್ಲಿ ೮೬ ದಾಟಲಾಗಿದೆಯೆಂದು ಮನೆ ಮಂದಿ ತಿಳಿಸಿದ್ದಾರೆ.

ಇವರ ಪತ್ನಿ ಲಕ್ಷ್ಮೀ ಈ ಹಿಂದೆ ನಿಧನರಾಗಿದ್ದಾರೆ. ಮೃತರು ಮಕ್ಕಳಾದ ವಿಜಯಲಕ್ಷ್ಮಿ, ಅರವಿಂದಾಕ್ಷನ್, ಸುನಿಲ್ ಕುಮಾರ್, ಅಳಿಯ ರಾಜನ್, ಸೊಸೆಯಂದಿರಾದ ಅಂಬಿಳಿ, ವಿ.ಎಸ್. ಬಿಬಿ ಮೋಳ್, ಸಹೋದರ ಬಾಲನ್, ಸಹೋದರಿ ಕೌಸಲ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page