ತೂಮಿನಾಡಿನಲ್ಲಿ ಭಕ್ತವೃಂದದಿಂದ ಕಟೀಲು ಕ್ಷೇತ್ರ ಪಾದಯಾತ್ರೆ

ಮಂಜೇಶ್ವರ: ತೂಮಿನಾಡು ಬ್ರಹ್ಮಶ್ರೀ ಮೊಗೇರ ಮಹಾಕಾಳಿ ದೈವಸ್ಥಾನ ಮತ್ತು ಮಹಾಕಾಳಿ ಭಜನಾ ಮಂದಿರದ ಪರಿಸರದಿಂದ ಭಕ್ತವೃಂದ ೮ನೇ ವರ್ಷದ ಕಟೀಲು ಶ್ರೀ ದುರ್ಗಾಪರಮೇಶರೀ ಕ್ಷೇತ್ರ ಪಾದಯಾತ್ರೆ ಆರಂಭಗೊಂಡಿತು. ಮಾತೆಯರ ಸಹಿತ ೩೬ ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ದೇವದಾಸ ತೂಮಿನಾಡು ಹಾಗೂ ಆಶಾ ಕಣ್ವತೀರ್ಥರು ನೇತೃತ್ವ ವಹಿಸಿದರು. ಗುರುವಾರ ಸಂಜೆ ಹೊರಟ ಇವರು ನಿನ್ನೆ ಮುಂಜಾನೆ ಕಟೀಲು ಕ್ಷೇತ್ರ ತಲುಪಿದ್ದಾರೆ.

You cannot copy contents of this page