ದಾದಿಯ ಸಾವು ಆತ್ಮಹತ್ಯೆ: ಮರಣೋತ್ತರ ಪರೀಕ್ಷಾ ವರದಿ

ಕುಂಬಳೆ: ಬಂದ್ಯೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾದಿಯಾ ಗಿದ್ದ ಯುವತಿಯ ಸಾವು ಆತ್ಮಹತ್ಯೆ ಯಾಗಿದೆ ಎಂದು ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆಸಿದ ಮೃತದೇಹದ ಮರಣೋ ತ್ತರ ಪರೀಕ್ಷಾ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ.

ಕೊಲ್ಲಂ ತೆನ್ಮಲ ಉರುಕ್ಕುಳಂ ಸ್ಮೃತಿ ಭವನದ ಕೋಮಳರಾಜನ್ ಎಂಬವರ ಪುತ್ರಿ ಎಸ್.ಕೆ. ಸ್ಮೃತಿ (2೦) ಆಸ್ಪತ್ರೆಯ ಹಾಸ್ಟೆಲ್‌ನಲ್ಲಿ ಸೋಮವಾರ ಮಧ್ಯಾಹ್ನ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೂರು ತಿಂಗಳ ಹಿಂದೆಯಷ್ಟೇ ಸ್ಮೃತಿ ನರ್ಸಿಂಗ್ ಟ್ರೈನಿಯಾಗಿ ಬಂದ್ಯೋಡಿನ ಖಾಸಗಿ ಆಸ್ಪತ್ರೆಯಲ್ಲಿ ಸೇರಿದ್ದರು. ಇವರು  ಸಾವಿಗೀಡಾಗುವ ಹಿಂದಿನ ದಿನ ಓರ್ವ ರೋಗಿಗೆ ಔಷಧಿ ನೀಡುವು ದಕ್ಕೆ ಸಂಬಂಧಿಸಿ ಆಸ್ಪತ್ರೆ ಅಧಿಕಾರಿ ಗಳು ಸ್ಮೃತಿಯನ್ನು ಪ್ರಶ್ನಿಸಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ರಾತ್ರಿ ಕೆಲಸ ಮುಗಿಸಿದ  ಬಳಿಕ ಸೋಮ ವಾರ ಬೆಳಿಗ್ಗೆ ಹಾಸ್ಟೆಲ್ ಕೊಠಡಿಗೆ ತಲುಪಿದ ಸ್ಮೃತಿ ಅನಂತರ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

Leave a Reply

Your email address will not be published. Required fields are marked *

You cannot copy content of this page