ನೀರಲ್ಲಿ ಮುಳುಗಿ ಯುವಕ ದಾರುಣ ಮೃತ್ಯು

ಮಂಜೇಶ್ವರ: ಕೊಳದಲ್ಲಿ ಸ್ನಾನ ಮಾಡಲೆಂದು ನೀರಿಗಿಳಿದ ಯುವಕ ನೋರ್ವ ಕೆಸರಿನಲ್ಲಿ ಹೂತುಹೋಗಿ ಮೃತಪಟ್ಟ ಘಟನೆ ನಡೆದಿದೆ. ಹೊಸಂಗಡಿ ಬಳಿಯ ದುರ್ಗಿಪಳ್ಳ ನಿವಾಸಿ ದಿ| ಸುಬ್ರಾಯ ಆಚಾರ್ಯರ ಪುತ್ರ ಹರಿಪ್ರಸಾದ್ ಆಚಾರ್ಯ [36] ಮೃತಪಟ್ಟ ದುರ್ದೆÊವಿ.
ವೆಲ್ಡಿಂಗ್ ಕಾರ್ಮಿಕರಾದ ಇವರು ಸೋಮವಾರ ಸಂಜೆ ರಾಷ್ಟಿçÃಯ ಹೆದ್ದಾರಿ ಕೆಳಗಿನ ತಲಪಾಡಿಯ ಖಾಸಗಿ ವ್ಯಕ್ತಿಯ ಜಾಗದಲ್ಲಿರುವ ಕೊಳದಲ್ಲಿ ಸ್ನಾನ ಮಾಡಲೆಂದು ನೀರಿಗಿಳಿದಾಗ ಕೆಸರಿನಲ್ಲಿ ಹೂತು ಹೋಗಿ ಮೃತಪಟ್ಟಿದ್ದಾರೆ. ಮಂ ಗಳೂರಿನಿಂದ ಅಗ್ನಿಶಾಮಕ ದಳದ ವರು ತಲುಪಿ ಮೃತದೇಹವನ್ನು ಮೇಲೆತ್ತಿದ್ದಾರೆ. ಈ ಸಂಬAಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಿನ್ನೆ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಸಂಬAಧಿಕರಿಗೆ ಬಿಟ್ಟುಕೊಡ ಲಾಗಿದೆ. ಮೃತರು ತಾಯಿ ಉಮಾವತಿ, ಸಹೋದರರು, ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

RELATED NEWS

You cannot copy contents of this page