ಬಿಎಂಎಸ್ ಕಾಸರಗೋಡು ವಲಯ ಸಮಾವೇಶ

ಕಾಸರಗೋಡು: ಭಾರತೀಯ ಮಜ್ದೂರ್ ಸಂಘ ಕಾಸರಗೋಡು ವಲಯ ಸಮಾವೇಶ ನೆಲ್ಲಿಕುಂಜೆಯಲ್ಲಿ ನಡೆಯಿತು. ಬಿಎಂಎಸ್ ಜಿಲ್ಲಾ ಅಧ್ಯಕ್ಷ ಉಪೇಂದ್ರ ಕೋಟೆಕಣಿ ಉದ್ಘಾ ಟಿಸಿದರು.

ಘಟಕದ ಪ್ರವೇಶ ಯೋಜನೆ ವಿಷಯದ ಬಗ್ಗೆ ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ ವಿವರಿಸಿದರು. ಜಿಲ್ಲಾ ಉಪಾಧ್ಯಕ್ಷ ಅನಿಲ್ ಬಿ. ನಾಯರ್ ಸಮಾರೋಪ ಭಾಷಣ ನಡೆಸಿದರು. ವಲಯ ಅಧ್ಯಕ್ಷ ಬಾಲಕೃಷ್ಣನ್ ನೆಲ್ಲಿಕುಂಜೆ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ವಲಯ ಕಾರ್ಯದರ್ಶಿ ರಿಜೇಶ್ ಸ್ವಾಗತಿಸಿ, ವಲಯ ಜೊತೆ ಕಾರ್ಯದರ್ಶಿ ಹರಿ ಅಜಂತಾ ವಂದಿಸಿದರು. ಜಯಶೀಲನ್ ವಂದೇ ಮಾತರಂ ಆಲಾಪಿಸಿದರು. ಹಲವು ಸಮಿತಿಗಳ ಕಾರ್ಯದರ್ಶಿಗಳು, ಅಧ್ಯಕ್ಷರು ಭಾಗವಹಿಸಿದರು.

RELATED NEWS

You cannot copy contents of this page